ಏ.22 ರಂದು ಜಯಂತ್ ಕಾಯ್ಕಿಣಿ ಅವರ 2 ಪುಸ್ತಕ ಲೋಕಾರ್ಪಣೆ
ಬೆಂಗಳೂರು, ಏಪ್ರಿಲ್ 21: ಖ್ಯಾತ ಕವಿ, ಕಥೆಗಾರ, ಚಿತ್ರ ಸಾಹಿತಿ ಜಯಂತ ಕಾಯ್ಕಿಣಿ ಅವರ 'ಗುಲ್ ಮೋಹರ್ ನುಡಿನೋಟಗಳು' ಮತ್ತು 'ಜಯಂತ ಕಾಯ್ಕಿಣಿ ರೂಪಾಂತರಿಸಿದ ನಾಟಕಗಳು' ಎಂಬ ಎರಡು ಪುಸ್ತಕಗಳು ಏ.22 ರಂದು ಬಿಡುಗಡೆಯಾಗಲಿವೆ.
ಅಂಕಿತಾ ಪ್ರಕಾಶನ ಹೊರತರುತ್ತಿರುವ ಈ ಪುಸ್ತಕಗಳು ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಏ.22 ರಂದು ಬೆಳಿಗ್ಗೆ 10:30 ಕ್ಕೆ ಲೋಕಾರ್ಪಣೆಗೊಳ್ಳಲಿವೆ.
ಭಾಷೆ, ಲಿಪಿ,ಕಲೆ, ಸಂಗೀತ, ವಿಜ್ಞಾನ, ಸಾಹಿತ್ಯಗಳ ಸಂಯುಕ್ತ ಆಸಕ್ತಿಯ ಪಯಣಿಗ, 'ನುಡಿ' ತಂತ್ರಾಂಶದ ರೂವಾರಿ ಕೆ.ಪಿ.ರಾವ್ ಮತ್ತು ಐತಿಹ್ಯಗಳನ್ನು ಮಾನವಿಕ ಆಸಕ್ತಿಯಿಂದ ವಿಸ್ತರಿಸುವ ಕಥನಕಾರ, ಕೃಷಿ ವಿಜ್ಞಾನಿ ಕೆ.ಎನ್.ಗಣೇಶಯ್ಯ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಗುಲ್ ಮೋಹರ್ ನುಡಿನೋಟಗಳು ಮತ್ತು 'ಸೇವಂತಿ ಪ್ರಸಂಗ', 'ಜತೆಗಿರುವನು ಚಂದಿರ', 'ಇಂತಿ ನಿನ್ನ ಅಮೃತಾ' ಈ ಮೂರು ರೂಪಾಂತರಿಸಿದ ನಾಟಕಗಳ ಕೃತಿ ಬಿಡುಗಡೆಗೆ ಸಹೃದಯರಿಗೆ ಆತ್ಮೀಯ ಆಹ್ವಾನವಿದೆ.
Comments
English summary
Popular Kannada poet, writer and lyricist Jayant Kaykini's 'Gul Mohar Nudinotagalu' and 'Jayanta Kaykini Roopantarisida Natakagalu' 2 books are will be releasing in Wadia hall, Indian institute of world culture, Basavangudi Road, Bengaluru on April 22nd at 10:30 am.
Story first published: Saturday, April 21, 2018, 16:54 [IST]