ಜಯಲಲಿತಾ ಸಾಕು ಪುತ್ರ ಸುಧಾಕರನ್ ಜೈಲಿನಿಂದ ಬಿಡುಗಡೆ ಸನ್ನಿಹಿತ
ಬೆಂಗಳೂರು, ಡಿ. 18: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರ ಬಿಡುಗಡೆ ಮುಂದಿನ ವರ್ಷಕ್ಕೆ ಎಂಬುದು ನಿಗದಿಯಾಗಿದೆ. ಆದರೆ, ಸಹ ಕೈದಿಯಾಗಿರುವ ಜೆ ಜಯಲಲಿತಾ ಅವರ ಸಾಕು ಪುತ್ರ ವಿಎನ್ ಸುಧಾಕರನ್ ಇನ್ನು ಮುರ್ನಾಲ್ಕು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕಂಡು ಬಂದಿದೆ.
ಶಶಿಕಲಾ ನಟರಾಜನ್ ಅವರು ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಆದರೆ, ಅರ್ಜಿ ಸಲ್ಲಿಸದೆ ಸುಧಾಕರನ್ ಶಶಿಕಲಾರಿಗಿಂತ ಮುಂಚಿತವಾಗಿ ಪರಪ್ಪನ ಅಗ್ರಹಾರ ತೊರೆಯುವ ಸಾಧ್ಯತೆಯಿದೆ.
ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ್ದ ಶಶಿಕಲಾಗೆ ಹಿನ್ನಡೆ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿ ತಿರಸ್ಕೃತಗೊಂಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾರಂತೆ ವಿಎನ್ ಸುಧಾಕರನ್ ಅವರಿಗೂ 10 ಕೋಟಿ ರೂ ದಂಡವನ್ನು ವಿಧಿಸಲಾಗಿತ್ತು. ಸುಧಾಕರನ್ ಪರ ವಕೀಲರು ನ್ಯಾಯಾಲಯಕ್ಕೆ ಅಗತ್ಯ ಮೊತ್ತ ಪಾವತಿಸಲು ಸಿದ್ಧರಾಗಿದ್ದಾರೆ. ದಂಡವನ್ನು ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಸೋಮವಾರ(ಡಿ. 21)ದಂದು ಕೋರ್ಟಿಗೆ ಪಾವತಿಸುತ್ತಾರೆ ಎಂಬ ಸುದ್ದಿ ಬಂದಿದೆ. ದಂಡ ಪಾವತಿಸಿರುವುದರಿಂದ ನಿಗದಿಯಂತೆ ಬಿಡುಗಡೆಯಾಗಬಹುದು.ಆದರೆ, ನಿಗದಿತ ದಿನಾಂಕಕ್ಕೂ ಮುನ್ನವೇ ಜೈಲಿನಿಂದ ಬಿಡುಗಡೆ ಬಯಸಿದ್ದ ಶಶಿಕಲಾ ಅವರು ಜನವರಿ 27, 2021ರಂದು ಬಿಡುಗಡೆ ಆಗಲಿದ್ದಾರೆ.
Recommended Video
ದಂಡ
ವಿಧಿಸಿದ
ಬಳಿಕ
ಬಿಡುಗಡೆಗೆ
ಅರ್ಹ:
2014ರ
ಸೆಪ್ಟೆಂಬರ್
ನಲ್ಲಿ
ಸ್ಪೆಷಲ್
ಟ್ರಯಲ್
ಕೋರ್ಟ್
ನ್ಯಾ.
ಜಾನ್
ಮೈಕೇಲ್
ಕನ್ಹಾ
ಐಪಿಸಿ
ಸೆಕ್ಷನ್
109ರಡಿ
ಜೆ
ಜಯಲಲಿತಾ,
ಶಶಿಕಲಾ,
ಸುಧಾಕರನ್,
ಇಳವರಸಿಗೆ
ನಾಲ್ಕು
ವರ್ಷಗಳ
ಜೈಲು
ಶಿಕ್ಷೆ
ವಿಧಿಸಿದ್ದರು.
ಶಶಿಕಲಾ
ದತ್ತು
ಪುತ್ರ,
ಜಯಲಲಿತಾ
ಸಾಕುಪುತ್ರ
ವಿಎನ್
ಸುಧಾಕರನ್,
ಜೆ
ಇಳವರಸಿ
ಹಾಗೂ
ಶಿಶಿಕಲಾ
ಅವರಿಗೆ
2017ರ
ಫೆಬ್ರವರಿ
15ರಂದು
ಜೈಲುಶಿಕ್ಷೆ
ಪ್ರಕಟವಾಗಿತ್ತು.
ಈಗ
10
ಕೋಟಿ
ರು
ದಂಡ
ಪಾವತಿಸಿದ
ಬಗ್ಗೆ
ನ್ಯಾಯಾಲಯದಿಂದ
ಪರಪ್ಪನ
ಅಗ್ರಹಾರ
ಜೈಲಿನ
ಅಧಿಕಾರಿಗಳಿಗೆ
ಪತ್ರ
ತಲುಪಿದ
ಬಳಿಕ
ಬಿಡುಗಡೆ
ಕುರಿತ
ಪ್ರಕ್ರಿಯೆ
ಆರಂಭವಾಗಲಿದೆ
ಎಂದು
ಅಧಿಕೃತವಾಗಿ
ಮಾಹಿತಿ
ಬಂದಿದೆ.
ಶಶಿಕಲಾ,
ವಿಎನ್
ಸುಧಾಕರನ್,
ಜೆ
ಇಳವರಸಿ
ಅವರಿಗೂ
10ಕೋಟಿ
ಪ್ಲಸ್
10
ಸಾವಿರ
ರು
ದಂಡ
ವಿಧಿಸಲಾಗಿದ್ದು,
ಎಲ್ಲರೂ
ಕೂಡಾ
ದಂಡ
ವಿಧಿಸಿದ
ಬಳಿಕ
ಬಿಡುಗಡೆಗೆ
ಅರ್ಹರಾಗುತ್ತದೆ