ಸಚಿವ ರಾಜಶೇಖರ ಪಾಟೀಲ್ ಸಂಬಂಧಿಗಳ ಮೇಲೆ ಐಟಿ ದಾಳಿ?
ಬೆಂಗಳೂರು, ಜನವರಿ 25: ಸಚಿವ ರಾಜಶೇಖರ ಪಾಟೀಲ್ ಅವರ ಸಂಬಂಧಿಗಳು ಎನ್ನಲಾಗಿರುವ ಇಬ್ಬರ ಮೇಲೆ ಇಂದು ಹಠಾತ್ತನೆ ಐಟಿ ದಾಳಿ ನಡೆದಿದೆ.
ಸದಾಶಿವನಗರದಲ್ಲಿ ನಿವಾಸಹೊಂದಿರುವ ರವಿ ಎರಗ ಹಾಗೂ ನಾಗರಬಾವಿ ನಿವಾಸಿ ಸುರೇಶ್ ಎಂಬುವರಿಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ಅಜಿತ್ ಡೋವಲ್ ಪುತ್ರನಿಂದ ವಿದೇಶದಲ್ಲಿ ಹೂಡಿಕೆ, ತನಿಖೆಗೆ ಆಗ್ರಹ
ಈ ಇಬ್ಬರೂ ಸಹ ಗಣಿ, ಭೂವಿಜ್ಞಾನ ಮತ್ತು ಮುಜರಾಯಿ ಖಾತೆ ಸಚಿವರಾಗಿರುವ ರಾಜಶೇಖರ ಪಾಟೀಲ್ ಅವರ ಸಂಬಂಧಿಗಳು ಎನ್ನಲಾಗುತ್ತಿದೆ.
ಇಂದು ಬೆಳ್ಳಂಬೆಳಿಗ್ಗೆಯೇ ಐಟಿ ದಾಳಿ ನಡೆಸಲಾಗಿದ್ದು, 53 ಸೇಲ್ಡೀಡ್ ದಾಖಲೆಗಳನ್ನು ಜೊತೆಗೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
'ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ'
ಕೆಲವು ವಾರಗಳ ಹಿಂದಷ್ಟೆ ಐಟಿ ಅಧಿಕಾರಿಗಳು ಕನ್ನಡ ಚಿತ್ರರಂಗದ ಸ್ಟಾರ್ ನಟರು, ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿ ಸತತ ಮೂರು ದಿನಗಳ ಕಾಲ ಪರಿಶೀಲನೆ ನಡೆಸಿದ್ದರು. ಈಗ ಚಿತ್ರರಂಗದ ನಂತರ ರಾಜಕಾರಣಿಗಳ ಮೇಲೆ ಐಟಿ ಕಣ್ಣು ಬಿದ್ದಂತಿದೆ.