ಉದ್ಯೋಗ ಕಡಿತ ಸಮಸ್ಯೆಯ ವೈಭವೀಕರಣ: ಟಿಸಿಎಸ್ ಮುಖ್ಯಸ್ಥ
ಐಟಿ ವಲಯದ ಉದ್ಯೋಗ ಕಡಿತದ ಬಗ್ಗೆ ಟಿಸಿಎಸ್ ಅಧ್ಯಕ್ಷ ರವಿ ವಿಶ್ವನಾಥನ್ ಸ್ಪಷ್ಟನೆ ನೀಡಿದ್ದು, ಅದು ಉದ್ಯೋಗ ಕಡಿತವಲ್ಲ, ಸಹಜ ಬೀಳ್ಕೊಡುಗೆ ಎಂದಿದ್ದಾರೆ.
ಚೆನ್ನೈ, ಜೂನ್ 3: ಭಾರತೀಯ ಐಟಿ ವಲಯದಲ್ಲಿ ಹೆಚ್ಚುತ್ತಿರುವ ಉದ್ಯೋಗ ಕಡಿತ ಸಮಸ್ಯೆಯನ್ನು ಮಾಧ್ಯಮಗಳು ಅತಿರೇಕವಾಗಿ ಬಣ್ಣಿಸಿವೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಖ್ಯಸ್ಥ ರವಿ ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಉದ್ಯೋಗಿಗಳ ಕಡಿತ ಪ್ರಕ್ರಿಯೆ ನಡೆಯುತ್ತಿವೆ. ಪ್ರತಿಯೊಬ್ಬ ಉದ್ಯೋಗಿದ ದಕ್ಷತೆಯನ್ನು ಮಾನದಂಡವಾಗಿಟ್ಟುಕೊಂಡು ಅವರನ್ನು ಕಂಪನಿಯಿಂದ ಬೀಳ್ಕೊಡಲಾಗುತ್ತಿದೆ. ಇದನ್ನು ಬೀಳ್ಕೊಡುಗೆ ಎಂದು ಕರೆಯಬೇಕೇ ವಿನಃ ಉದ್ಯೋಗ ಕಡಿತ ಎಂದು ಹೇಳಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಐಟಿ ವಲಯದ ದಿಗ್ಗಜ ಕಂಪನಿಗಳಾದ ಕಾಗ್ನಿಝೆಂಟ್, ಟೆಕ್ ಮಹೀಂದ್ರಾಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ತಮ್ಮಲ್ಲಿನ ಟೆಕ್ಕಿಗಳನ್ನು ಮನೆಗೆ ಕಳುಹಿಸಲು ಸಜ್ಜಾದ ಹಿನ್ನೆಲೆಯಲ್ಲಿ, ಭಾರತೀಯ ಐಟಿ ವಲಯವು ಹಲವಾರು ಆರೋಪಗಳನ್ನು ಎದುರಿಸಬೇಕಾದ ಪ್ರಮೇಯ ಬಂದೊದಗಿದೆ.
Comments
English summary
As the IT industry battles allegations of mass layoffs+ , Ravi Viswanathan , president (growth markets), TCS, says the numbers are exaggerated.
Story first published: Saturday, June 3, 2017, 14:40 [IST]