ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೈರಪ್ಪ ಅವರ ಯಾನ ವಿಚಾರ ಸಂಕಿರಣಕ್ಕೆ ಆಹ್ವಾನ

By Mahesh
|
Google Oneindia Kannada News

ಬೆಂಗಳೂರು, ಡಿ.12: ಖ್ಯಾತ ಕಾದಂಬರಿಕಾರ, ಪ್ರಖರ ಚಿಂತಕ ಡಾ. ಎಸ್.ಎಲ್ ಭೈರಪ್ಪ ಅವರ ಇತ್ತೀಚಿನ ಕಾದಂಬರಿ 'ಯಾನ' ಕುರಿತಂತೆ ವಿಚಾರ ಸಂಕಿರಣ ಡಿ.21ರಂದು ಆಯೋಜನೆಗೊಂಡಿದೆ.

ಇದೇ ಸಂದರ್ಭದಲ್ಲಿ ಭೈರಪ್ಪ ಅವರೊಡನೆ ಪ್ರಶ್ನೋತ್ತರ ಕಾರ್ಯಕ್ರಮ, ವೈಜ್ಞಾನಿಕ ಚೌಕಟ್ಟಿನಲ್ಲಿ ಮಾನವ ಸ್ವಭಾವ ಶೋಧ ಹಾಗೂ ಯಾನದಲ್ಲಿ ವಿಜ್ಞಾನ ಕೌತುಕ, ಬಾಹ್ಯಾಂತರಿಕ್ಷದಲ್ಲಿ ಆಂತರಿಕಯಾನ, ವಿಜ್ಞಾನ ತಂದ ಸಾಂಸ್ಕೃತಿಕ ಪಲ್ಲಟ ಮತ್ತು ನೈತಿಕ ಬದಲಾವಣೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಮೂರು ಪುಸ್ತಕಗಳು ಕೂಡಾ ಲೋಕರ್ಪಣೆಗೊಳ್ಳಲಿವೆ.

SL Bhyrapppa

ಕಾರ್ಯಕ್ರಮ ವಿವರ:

ದಿನಾಂಕ :
21/12/2014

ಸ್ಥಳ:
ಆರ್ ವಿ ಟೀಚರ್ಸ್ ಕಾಲೇಜ್ ಆಡಿಟೋರಿಯಂ, ಜಯನಗರ 2ನೇ ಬ್ಲಾಕ್, ಬೆಂಗಳೂರು 11

ದಿನ/ಸಮಯ:
ಭಾನುವಾರ, ಬೆಳಗ್ಗೆ 10 ಗಂಟೆಗೆ ಆರಂಭ. [ಮೋದಿ ಬೆಂಬಲಿಸಿದ ಭೈರಪ್ಪ]

ಉದ್ಘಾಟನೆ: ಪ್ರೊ. ಜಿ. ವೆಂಕಟ ಸುಬ್ಬಯ್ಯ, ಕನ್ನಡ ನಿಘಂಟು ತಜ್ಞರು

ಅಧ್ಯಕ್ಷತೆ:
ಎಸ್. ಆರ್ ರಾಮಸ್ವಾಮಿ, ಉತ್ಥಾನ ಪತ್ರಿಕೆ ಗೌರವ ಸಂಪಾದಕರು, ಚಿಂತಕರು

ಉಪಸ್ಥಿತಿ:
ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್ ಎಲ್ ಭೈರಪ್ಪ

ಪ್ರಬಂಧ ಮಂಡನೆ :
* ಶತವಧಾನಿ ಆರ್ ಗಣೇಶ್, ಚಿಂತಕರು, ಬೆಂಗಳೂರು
ವಿಷಯ: ಯಾನದಲ್ಲಿ ಆಧಾತ್ಮ ತತ್ತ್ವ

* ಪ್ರಧಾನ್ ಗುರುದತ್ತ, ಮಾಜಿ ಚೇರ್ಮನ್, ಕುವೆಂಪು ಭಾಷಾ ಭಾರತೀ, ಬೆಂಗಳೂರು
ವಿಷಯ: ವೈಜ್ಞಾನಿಕ ಕಾದಂಬರಿಯಾಗಿ 'ಯಾನ'

* ದಿವಾಕರ ಹೆಗಡೆ, ಆಕಾಶವಾಣಿ, ಧಾರವಾಡ
ವಿಷಯ: ವಿಜ್ಞಾನ ಯಾನ

* ಎಸ್ ಸತೀಶ್, ಬಾಹ್ಯಾಕಾಶ ವಿಜ್ಞಾನಿ, ಬೆಂಗಳೂರು
ವಿಷಯ: ವೈಜ್ಞಾನಿಕ ಚೌಕಟ್ಟಿನಲ್ಲಿ ಮಾನವ ಸ್ವಭಾವ ಶೋಧ

* ಕೆ.ಸಿ ರಘು, ವಿಜ್ಞಾನ ಲೇಖಕರು, ಬೆಂಗಳೂರು
ವಿಷಯ: ಯಾನದಲ್ಲಿ ವಿಜ್ಞಾನ ಕೌತುಕ

* ಎ‌ಸ್ ರಾಮಸ್ವಾಮಿ, ಸಂಶೋಧಕರು, ಬೆಂಗಳೂರು
ವಿಷಯ: ಬಾಹ್ಯಾಂತರಿಕ್ಷದಲ್ಲಿ ಆಂತರಿಕ ಯಾನ

* ಸಂದೀಪ್ ಬಾಲಕೃಷ್ಣ, ಮುಖ್ಯ ಸಂಪಾದಕ, ಇಂಡಿಯಾ ಫ್ಯಾಕ್ಟ್ಸ್, ಬೆಂಗಳೂರು
ವಿಷಯ: ವಿಜ್ಞಾನ ತಂದ ಸಾಂಸ್ಕೃತಿಕ ಪಲ್ಲಟ ಮತ್ತು ನೈತಿಕ ಬದಲಾವಣೆ

* ಅಜಕ್ಕಳ ಗಿರೀಶ್ ಭಟ್, ಸಂಪಾದಕ, ಚಿಂತನ ಬಯಲು, ಮಂಗಳೂರು
ವಿಷಯ: ಯಾನದಲ್ಲಿ ಕಥನ ತಂತ್ರ

* ಗಂಗಾವತಿ ಪ್ರಾಣೇಶರಿಂದ ನಾಲ್ಕುಮಾತು

* ಸಮಾರೋಪ-ಅಧ್ಯಕ್ಷ ಭಾಷಣ

ಎಸ್ ಎಲ್ ಭೈರಪ್ಪ ಅವರೊಂದಿಗೆ ಪ್ರಶ್ನೋತ್ತರ
ನಿರ್ವಹಣೆ: ಗ.ನಾ ಭಟ್ಟ

ಲೋಕಾರ್ಪಣೆಗೊಳ್ಳಲಿರುವ ಪುಸ್ತಕಗಳು:
* ಭೈರಪ್ಪನವರ ಸೂಕ್ತಿ ಸಂಪದ
* ಭೈರಪ್ಪನವರ ಸಾಹಿತ್ಯ: ಮರಾಠಿ ವಿಮರ್ಶೆ
* ಖಿಲ(ಕಾದಂಬರಿ)- ಶಶಿಧರ್ ವಿಶ್ವಾಮಿತ್ರ

ಸೂಚನೆ: ಮಯ್ಯಾಸ್ ವತಿಯಿಂದ ಮಧ್ಯಾಹ್ನ 2 ಗಂಟೆಗೆ ಭೋಜನ ವ್ಯವಸ್ಥೆ ಇರುತ್ತದೆ.

English summary
A Dialogue with Dr. S.L. Bhyrappa followed by a interactive session with public been organized on Dec.21, 2014 at RV Teacher's college, Jayanagar, Bengaluru. Lets meet and discuss about Yaana Novel with #SLBhyrappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X