ಬೆಂಗಳೂರಿನಲ್ಲಿ 63 ನೇ ಹೃದ್ರೋಗ ತಜ್ಞರ ಸಮ್ಮೇಳನಕ್ಕೆ ಚಾಲನೆ
ದೊಡ್ಡ ಕಾರ್ಡಿವಾಸ್ಕುಲರ್ ಮತ್ತು ಥೊರೋಟಿ ಸರ್ಜನ್ ಗಳ ಮಹಾಸಮ್ಮೇಳನ ಫೆಬ್ರವರಿ 23 ರಿಂದ 26 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ
ಬೆಂಗಳೂರು, ಫೆಬ್ರವರಿ 23, 2017: ಇಂಡಿಯನ್ ಅಸೋಸಿಯೇಶನ್ ಆಫ್ ಕಾರ್ಡಿವಾಸ್ಕುಲರ್ ಅಂಡ್ ಥೊರೋಟಿಕ್ ಸರ್ಜನ್ಸ್(ಐಎಸಿಟಿಎಸ್ ) ಒಂದು ದೊಡ್ಡ ಕಾರ್ಡಿವಾಸ್ಕುಲರ್ ಮತ್ತು ಥೊರೋಟಿ ಸರ್ಜನ್ ಗಳ ಮಹಾಸಮ್ಮೇಳನವಾಗಿದೆ. ಇದರಲ್ಲಿ ಪ್ರತಿವರ್ಷ ವಿಶ್ವದಾದ್ಯಂತದ ಉಪನ್ಯಾಸಕರು ಮತ್ತು ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ.
ಇದರ 63 ನೇ ಸಮ್ಮೇಳನ ಇಂದು (ಫೆಬ್ರವರಿ 23 ರಿಂದ 26 ರವರೆಗೆ) ಆರಂಭವಾಗಿದೆ. ಈ ಸಮ್ಮೇಳನವನ್ನು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್ ಪಾಟೀಲ್ ಅವರು ಉದ್ಘಾಟಿಸಿದರು.
'ಹೊಸ
ಗಡಿಯನ್ನು
ತಲುಪುವ,
ನಮ್ಮ
ಇಚ್ಛೆ,
ನಿಮ್ಮ
ಕೌಶಲ್ಯ'
ಎಂಬ
ಧ್ಯೇಯವಾಕ್ಯದೊಂದಿಗೆ
ಈ
ಬಾರಿಯ
ವಾಣಿಜ್ಯ
ಪ್ರದರ್ಶನವನ್ನು
ಏರ್ಪಡಿಸಲಾಗಿದೆ.
ಈ
ಸಮ್ಮೇಳನದಲ್ಲಿ
ಉಪನ್ಯಾಸಗಳು,
ಅತಿಥಿ
ಉಪನ್ಯಾಸಗಳು,
ಚರ್ಚೆಗಳು,
ಸಂವಾದಗಳು
ಮತ್ತು
ಇತ್ತೀಚಿನ
ಸುಧಾರಿತ
ತಂತ್ರಜ್ಞಾನಗಳ
ಬಗ್ಗೆ
ಹತ್ತು
ಹಲವಾರು
ಚರ್ಚೆಗಳು
ನಡೆಯುತ್ತಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಐಎಸಿಟಿಎಸ್ ಸಿಒಎನ್ ನ ಅಧ್ಯಕ್ಷ ಡಾ.ವಿವೇಕ್ ಜವಳಿ ಅವರು, 'ದೇಶದ ವಿವಿಧ ಭಾಗಗಳ 2000 ಕ್ಕೂ ಅಧಿಕ ಹೃದ್ರೋಗ ತಜ್ಞರು ಮತ್ತು ಎದೆರೋಗ ಶಸ್ತ್ರಚಿಕಿತ್ಸಕರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
ವೈದ್ಯಕೀಯ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಉಪನ್ಯಾಸಗಳು, ವೈದ್ಯಕೀಯ ಶಿಕ್ಷಣದ ಚರ್ಚೆಗಳು, ಸಂವಾದಗಳು ಮತ್ತು ಹೃದ್ರೋಗ ಚಿಕಿತ್ಸಾ ಪದ್ಧತಿಯ ಮಾರ್ಗಸೂಚಿಗಳ ಬಗ್ಗೆ ಈ ಸಮ್ಮೇಳನ ಬೆಳಕು ಚೆಲ್ಲಲಿದೆ. ಇದಲ್ಲದೇ, ಹೃದ್ರೋಗ ಶಸ್ತ್ರ ಚಿಕಿತ್ಸೆಗಳ ಬಗ್ಗೆಯೂ ಪ್ರಮುಖವಾಗಿ ಚರ್ಚೆಗಳು ನಡೆಯಲಿವೆ' ಎಂದು ತಿಳಿಸಿದರು.
ಐಎಸಿಟಿಎಸ್ ಸಿಒಎನ್ ನ ಸಂಘಟನಾ ಕಾರ್ಯದರ್ಶಿ ಡಾ.ಗಿರಿಧರ್ ಕಮಲಾಪೂರ್ಕರ್ ಅವರು ಮಾತನಾಡಿ, 'ಈ ವರ್ಷ ನಾವು 150 ಸಂಶೋಧನಾ ವರದಿಗಳು, 100 ಪೋಸ್ಟರ್ ಗಳನ್ನು ಸ್ವೀಕರಿಸಿದ್ದೇವೆ.
ಭಾರತೀಯ ಮೂಲದ ಹಿರಿಯ ಹೃದ್ರೋಗ ತಜ್ಞರನ್ನು ಒಂದೆಡೆ ಕರೆತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ಮೂಲಕ ಭಾರತದಲ್ಲಿ ಹೃದ್ರೋಗ ತಜ್ಞರ ಸಂಪರ್ಕ ಜಾಲವನ್ನು ಗಟ್ಟಿಗೊಳಿಸುವ ಗುರಿಯಿಟ್ಟುಕೊಂಡಿದ್ದೇವೆ.
ಇದು ಭಾರತಕ್ಕೆ ಒಂದು ಉತ್ತಮ ಲಾಭವಾಗಲಿದೆ. ಈ ಸಂದರ್ಭದಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಾದ ಮುಂಬೈನ ಡಾ. ರತ್ನ ಮಗೋತ್ರ ಮತ್ತು ಕೋಲ್ಕತ್ತಾದ ಡಾ.ಸುಶೀಲ ಶ್ರೀಪಾದ್ ಅವರನ್ನು ಸನ್ಮಾನಿಸಲಾಗುವುದು'' ಎಂದು ತಿಳಿಸಿದರು.