ಸಂಜಯನಗರದಲ್ಲಿಇಂಡಿಯಾ ಸ್ವೀಟ್ ಹೌಸ್ 2ನೇಔಟ್ಲೆಟ್ ಪ್ರಾರಂಭ
ಬೆಂಗಳೂರು, ಸೆಪ್ಟೆಂಬರ್ 5: ಇಂಡಿಯಾ ಸ್ವೀಟ್ ಹೌಸ್ ತನ್ನ ಎರಡನೇ ಮಳಿಗೆಯನ್ನುಸಂಜಯನಗರದಲ್ಲಿ ಪ್ರಾರಂಭಿಸಿದೆ. ಜನಪ್ರಿಯ ಟಿವಿ ಸಿಹಿ ಕಹಿ ಚಂದ್ರು ಅವರ ಉಪಸ್ಥಿತಿಯೊಂದಿಗೆ ಸಮಾರಂಭವನ್ನು ಅಲಂಕರಿಸಿದರು. ಸಾಂಪ್ರಾದಾಯಿಕ ಹಾಡುಗಾರಿಕೆಗಳಲ್ಲಿ ಮೊಳಗಿದವು ಶುಭ ಸಂದರ್ಭದಲ್ಲಿ ಶುಭ ಹಾರೈಸುವವರು ಮತ್ತು ಗ್ರಾಹಕರಲ್ಲಿ ಇದು ದೊಡ್ಡ ಯಶಸ್ಸನ್ನು ಕಂಡಿತು.
ಶ್ವೇತಾ ರಾಜಶೇಖರ್ ಮತ್ತು ವಿ.ವಿಶ್ವನಾಥ್ ಅವರಿಂದ ಪ್ರಾರಂಭವಾದ ಈ ಬ್ರಾಂಡ್ ನಿಮಗೆ ವಿಶ್ವದ ವಿವಿಧ ಪ್ರದೇಶಗಳ ಮೂಲ ಸಿಹಿ ತಿನಿಸುಗಳನ್ನು ತರುವ ಉದ್ದೇಶ ಹೊಂದಿದ್ದುಅದು ಸಾವಯವ ಸುಸ್ಥಿರ ರೂಢಿಗಳಲ್ಲಿ ಬೆಳೆಯಲಾಗುತ್ತದೆ. ಭಾರತದ ವಿವಿಧ ಭಾಗಗಳ ಅತ್ಯಂತ ಹಳೆಯ ಸಾಂಪ್ರದಾಯಿಕ ತಿನಿಸುಗಳನ್ನು ನೇರವಾಗಿತರುವ ಬಯಕೆಯಿಂದ ಈ ಬ್ರಾಂಡ್ ಸ್ತುತ 70ಕ್ಕೂ ಹೆಚ್ಚು ಸ್ವಾದಿಷ್ಟ ತಿನಿಸುಗಳನ್ನು ನೀಡುತ್ತಿದೆ. ಈ ತಂಡವು ಮುಂದಿನ ತಿಂಗಳುಗಳಲ್ಲಿ ಹೆಚ್ಚು ಹಾಲು ಆಧರಿಸಿದ ಸಿಹಿಗಳನ್ನು ಪಟ್ಟಿಗೆ ಸೇರಿಸಲಿದ್ದು ಅವುಗಳನ್ನು ಮಾನವರ ಕೈಗಳಿಂದ ಸ್ಪರ್ಶಿಸದೆ ತಾಜಾ ಹಾಲಿನಿಂದ ಉತ್ಪಾದಿಸಲಾಗಿದೆ.
ಈ ಪ್ರಾರಂಭಕುರಿತುಇಂಡಿಯಾ ಸ್ವೀಟ್ ಹೌಸ್ನ ಸಿಒಒ ಶ್ವೇತಾರಾಜಶೇಖರ್, ''ಕಳೆದ ತಿಂಗಳು ಮಲ್ಲೇಶ್ವರಂನಲ್ಲಿ ಪ್ರಾರಂಭಿಸಲಾದ ನಮ್ಮ ಫ್ಲಾಗ್ಶಿಪ್ ಮಳಿಗೆಯು ಪಡೆದಅದ್ಭುತ ಪ್ರತಿಕ್ರಿಯೆಯುಎರಡನೇ ಮಳಿಗೆ ತೆರೆಯಲು ನಮಗೆ ಉತ್ತೇಜಿಸಿತು. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಮನೆಗಳಲ್ಲಿ ತಯಾರಿಸಲಾಗುವ ವಿವಿಧ ಸಿಹಿಗಳೊಂದಿಗೆ ಬೆಳೆದಿದ್ದೇವೆ. ಆದಾಗ್ಯೂ ಪ್ರತಿ ತಲೆಮಾರಿಗೂ ಈ ತಿನಿಸುಗಳು ಅವುಗಳ ರುಚಿ ಕಳೆದುಕೊಳ್ಳುತ್ತಿವೆ ಮತ್ತು ಸಕ್ಕರೆಯ ಸಾಮೂಹಿಕ ಮಿಶ್ರಣಗಳಾಗುತ್ತಿವೆ. ಭಾರತದ ಸಿಹಿ ಆಹಾರದ ಕಥೆಯು ಅದರ ರಚನೆಗಳು ಮತ್ತು ವ್ಯತ್ಯಾಸಗಳ ಸೂಕ್ಷ್ಮ ವ್ಯತ್ಯಾಸ ಹೊಂದಿದೆ. ಇದು ಸಂರಕ್ಷಿಸಬೇಕಾದ ಇತಿಹಾಸವಾಗಿದೆ ಮತ್ತು ನಮ್ಮ ಮುಂದಿನ ತಲೆಮಾರಿಗೆ ವರ್ಗಾಯಿಸಬೇಕಾಗಿದೆ. ಇಂಡಿಯಾ ಸ್ವೀಟ್ ಹೌಸ್ನಲ್ಲಿ ನಾವು ದೇಶದ ವಿವಿಧ ಭಾಗಗಳಿಂದ ಅತ್ಯುತ್ತಮ ಸಿಹಿಗಳನ್ನು ತರುವಗುರಿ ಹೊಂದಿದ್ದೇವೆ...ನಾವು ಭಾರತದಾದ್ಯಂತ ನಮ್ಮ ಹೋಮ್ಗಳನ್ನು ವಿಸ್ತರಿಸಲಿದ್ದೇವೆ'' ಎಂದರು.
ನಮ್ಮ ನೆಲಮಂಗಲದ ಸಾವಯವ ಮತ್ತು ಸುಸ್ಥಿರ ತೋಟದಿಂದ ಹಾಲು, ಬೆಣ್ಣೆ, ತುಪ್ಪ ಮತ್ತುಕೋವಾದಂತಹ ಡೈರಿ ಉತ್ಪನ್ನಗಳನ್ನು ಪಡೆಯಲಾಗುತ್ತದೆ. ಎಲ್ಲಇತರೆ ಅಳವಡಿಕೆಗಳನ್ನು ಕಠಿಣ ಗುಣಮಟ್ಟ ನಿಯಂತ್ರಣದ ರೂಢಿಗಳ ಅನ್ವಯ ಸಾವಯವ ಪ್ರಮಾಣೀಕೃತ ವ್ಯಾಪಾರಿಗಳಿಂದ ಹಾಗೂ ಪ್ರಾಣಿಗಳು ಮತ್ತು ಸಸ್ಯಗಳಿಗೆ ಕರುಣೆಇರುವಂತೆ ಪಡೆಯುತ್ತದೆ. ಎಲ್ಲ ಉತ್ಪನ್ನಗಳೂ ಯಾವುದೇ ಪ್ರಿಸರ್ವೇಟಿವ್ಗಳನ್ನು ಸೇರಿಸದೆ ನೈಸರ್ಗಿಕವಾಗಿರುತ್ತವೆ.
ಮ್ಯಾನೇಜಿಂಗ್ ಪಾರ್ಟ್ನರ್ ವಿಶ್ವನಾಥ್, ''ನಮ್ಮ ಉತ್ಪನ್ನಗಳ ಶ್ರೇಣಿಗೆ ಪ್ರತಿಕ್ರಿಯೆ ಅಭೂತಪೂರ್ವವಾಗಿದೆ. ಪ್ರತಿ ಕೊಳ್ಳುವಿಕೆಗೂ ನಮ್ಮೊಂದಿಗೆ ಹಂಚಿಕೊಂಡ ಪ್ರೀತಿ ಮತ್ತು ಕಥೆಗಳು ನಾವು ಆಯ್ಕೆ ಮಾಡಿಕೊಂಡ ಸುಸ್ಥಿರತೆಯ ಮಾರ್ಗದಲ್ಲಿ ನಮ್ಮ ವಿಶ್ವಾಸ ಮತ್ತಷ್ಟು ಹೆಚ್ಚಿಸುತ್ತಿವೆ. ಪ್ರತಿ ಸಿಹಿಯೂ ಅತ್ಯುತ್ತಮ ಅಳವಡಿಕೆಗಳೊಂದಿಗೆ ಸಾಂಪ್ರದಾಯಿಕ ತಿನಿಸುಗಳಿಗೆ ಅಗತ್ಯವಾದ ನಿಧಾನ ಬೇಯಿಸುವಿಕೆಯಿಂದ ಸಿದ್ಧಪಡಿಸಲಾಗುತ್ತದೆ. ಮಲ್ಲೇಶ್ವರಂ ನಂತರ ಈಗ ಸಂಜಯನಗರದಲ್ಲಿ ತೆರೆದಿದ್ದು ವಿವಿಧ ರಾಜ್ಯಗಳು ಮತ್ತು ದೇಶಗಳಿಗೆ ಚಲಿಸುವ ಮುನ್ನ ಬಹಳ ಬೇಗನೆ ಆನ್ಲೈನ್ ಮಾರುಕಟ್ಟೆಗಳೊಂದಿಗೆ ಯಲಹಂಕದಲ್ಲಿ ತೆರೆಯುತ್ತಿದ್ದೇವೆ'' ಎಂದರು.
Recommended Video
ಈ ತಿನಿಸುಗಳನ್ನು ಶೇ.100ರಷ್ಟು ತಾಜಾ ಸಾವಯವ ಡೈರಿಯಿಂದ ಸಿದ್ಧಪಡಿಸಲಾಗುತ್ತದೆ, ಸಾಂಪ್ರದಾಯಿಕ ವಿಧಾನಗಳಲ್ಲಿ ಬೇಯಿಸಲಾಗುತ್ತದೆ ಮತ್ತು ಭಾರತದ ಪ್ರತಿ ಮೂಲೆಯಿಂದಲೂ ಅತ್ಯಂತ ನೈಜ ಸ್ವಾದಗಳನ್ನು ತರುವಂತೆ ಸಿದ್ಧಪಡಿಸಲಾಗುತ್ತದೆ. ಅವುಗಳನ್ನು ಇಂಡಿಯಾ ಸ್ವೀಟ್ ಹೌಸ್ನಲ್ಲಿ ಮಾತ್ರ ಸವಿಯಿರಿ.