ಕರ್ನಾಟಕದಲ್ಲಿ ದೇಶದ ಪ್ರಥಮ ಉರ್ದು ಸಂಚಾರಿ ಗ್ರಂಥಾಲಯ
ಬೆಂಗಳೂರು, ಸೆಪ್ಟಂಬರ್, 28 : ರಾಜ್ಯದ ಉರ್ದು ಅಕಾಡೆಮಿಯು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಗ್ರಂಥಾಲಯ ಆರಂಭಿಸಿದೆ. ಇದರ ಮೂಲಕ ಪುಸ್ತಕಗಳನ್ನು ಮುಕ್ತವಾಗಿ ಮಾರಾಟ ಮಾಡಲು ಮುಂದಾಗಿದೆ.
ಉರ್ದು ಸಂಚಾರಿ ಗ್ರಂಥಾಲಯದ ಉದ್ಘಾಟನೆಯನ್ನು ಅಲ್ಪಸಂಖ್ಯಾತ ಸಚಿವ ಡಾ. ಖಮರುಲ್ಲಾ ಇಸ್ಲಾಂ ಅವರು ವಿಧಾನಸೌಧ ಆವರಣದಲ್ಲಿ ನೆರವೇರಿಸಿದ್ದು, ಈ ಗ್ರಂಥಾಲಯವು ಬೀದರ್ ನಿಂದ ಚಾಮರಾಜ ನಗರದವರೆಗೆ ರಾಜ್ಯಾದ್ಯಂತ ಸಂಚಾರ ಮಾಡಲಿದೆ ಎಂದು ತಿಳಿಸಿದರು.[ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]
ಈ ಸಂಚಾರಿ ಗ್ರಂಥಾಲಯವು ಉರ್ದು ಭಾಷಿಗರು ಹೆಚ್ಚಾಗಿರುವ ಕಡೆಯಲ್ಲಿ ಸಂಚರಿಸಲಿದೆ. ಇದರಲ್ಲಿ ಓದುಗರಿಗೆ ಪುಸ್ತಕ ಒದಗಿಸಲಾಗುತ್ತದೆ ಹಾಗೂ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ದೇಶದಲ್ಲೇ ಮೊದಲ ಉರ್ದು ಭಾಷೆಯ ಸಂಚಾರಿ ಗ್ರಂಥಾಲಯಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ಸಚಿವರು ತಿಳಿಸಿದರು.
ಈ ವ್ಯವಸ್ಥೆಯಿಂದ ಉರ್ದು ಮತ್ತು ಕನ್ನಡ ಸಾಹಿತ್ಯ ಪರಸ್ಪರ ಅನುವಾದಗೊಳ್ಳುವ ಸಾಧ್ಯತೆಗಳು ಇರುತ್ತದೆ. ಆಗ ಎರಡು ಸಮುದಾಯಕ್ಕೂ ವಿಭಿನ್ನ ಸಾಹಿತ್ಯದ ಅಭಿರುಚಿ ದೊರೆತಂತಾಗುತ್ತದೆ. ಎಂದು ಸಚಿವ ಖಮರುಲ್ಲಾ ಹೇಳಿದರು.
ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಅಕಾಡೆಮಿ ಅಧ್ಯಕ್ಷ ಡಾ. ಫೌಜಿಯಾ ಚೌಧರಿ ಮಾತನಾಡಿ, ೧೦.೦೦೦ ಪುಸ್ತಕಗಳು ಮಾರಾಟಕ್ಕೆ ಒದಗಿಸಲಾಗಿದೆ. ಪುಸ್ತಕ ಮಾರಾಟದಿಂದ ಬರುವ ಹಣವನ್ನು ಗ್ರಂಥಾಲಯ ವಾಹನ ಚಾಲಕರು, ಸಿಬ್ಬಂದಿ ವೇತನ ಭತ್ಯೆಗೆ ಬಳಸಲಾಗುತ್ತದೆ ಎಂದರು.