ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರ ವಿಧಾನಸಭಾ ಕ್ಷೇತ್ರ 'ಮಾದರಿ' ಪ್ರಣಾಳಿಕೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 03: ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರವಿ ಕೃಷ್ಣಾರೆಡ್ಡಿಯವರು ಜಯನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಜಯನಗರ ಕ್ಷೇತ್ರಕ್ಕೆ ಜೂನ್ 11 ರಂದು ಮತದಾನ ನಡೆಯಲಿದ್ದು,

ಈ ನಿಟ್ಟಿನಲ್ಲಿ ಅವರು ಜಯನಗರ ನಾಲ್ಕನೇ ಬ್ಲಾಕಿನ ಮಯ್ಯಾಸ್ ವೃತ್ತದಲ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಕ್ಷೇತ್ರದ ಹಿರಿಯ ನಾಗರಿಕರಾದ ಶ್ರೀಮತಿ ಶೋಭಾ ಕಿಣಿ, ಡಾ. ಕೆ. ಶಿವರಾಂ, ಆನೆಪ್ಪ ಮತ್ತು ನಂಜುಂಡ ರಾವ್ ಅವರುಗಳು ರವಿ ಕೃಷ್ಣಾರೆಡ್ಡಿಯವರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

Independent candidate Ravikrishna Reddy Jayanagar constituency manifesto

ತಮ್ಮ ಪ್ರಣಾಳಿಕೆಯಲ್ಲಿ ಜಯನಗರ ಕ್ಷೇತ್ರವನ್ನು ಲಂಚಮುಕ್ತ ಮಾಡುವುದು, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು, ಪರಿಸರ ಸ್ನೇಹಿ ಹಾಗು ಕಸಮುಕ್ತ ಕ್ಷೇತ್ರವನ್ನಾಗಿ ಮಾಡಲು ಬದ್ಧರಾಗಿರುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.

ಪ್ರಣಾಳಿಕೆಗೆ ಜಯನಗರ ಕ್ಷೇತ್ರದ ಮತದಾರರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಗಳನ್ನು ಪಡೆದು ಹಾಗು ಇಡೀ ಕ್ಷೇತ್ರದ ಪರ್ಯಟನೆ ಮಾಡಿ ತಯಾರಿಸಲಾಗಿದೆ. ಇದೇ ಸಂದರ್ಭದಲ್ಲಿ, ಆಡಳಿತದಲ್ಲಿ ಜನರ ಸಹಭಾಗಿತ್ವ, ಬೀದಿ ವ್ಯಾಪಾರಿಗಳ ರಕ್ಷಣೆ, ಉತ್ತಮ ವಸತಿ ಸೌಕರ್ಯ, ಸರ್ಕಾರಿ ಭೂಮಿಯನ್ನು ರಕ್ಷಿಸಿ, ಅಲ್ಲಿ ಸಾರ್ವಜನಿಕ ಉದ್ಯಾನ ಮತ್ತು ಇತರೆ ಸೌಕರ್ಯಗಳನ್ನು ಒದಗಿಸಲು ಕಾರ್ಯಕ್ರಮ ಹಾಕಿಕೊಂಡಿದ್ದಾರೆ.

ಹಾಗೆಯೇ, ಅವರ ಶಾಸಕರಾಗಿರುವ ಅವಧಿಯಲ್ಲಿ ಯಾವುದೇ ಆಸ್ತಿಯನ್ನು ಕೊಳ್ಳುವುದಿಲ್ಲ, ಯಾವುದೇ ಲಾಭ ತರುವ ವ್ಯವಹಾರವನ್ನಾಗಲಿ, ಉದ್ದಿಮೆಯನ್ನಾಗಲಿ ನಡೆಸುವುದಿಲ್ಲ, ಮತ್ತು ಕುಟುಂಬದ ಖರ್ಚು ವೆಚ್ಚಗಳನ್ನೆಲ್ಲ ಶಾಸಕನಾಗಿ ಅವರಿಗೆ ಬರುವ ಸಂಬಳ ಮತ್ತು ಅವರ ಪತ್ನಿಯ ಆದಾಯದಲ್ಲಿ ಮಾತ್ರ ನಿಭಾಯಿಸುವುದಾಗಿ ಕ್ಷೇತ್ರದ ಜನತೆಗೆ ವಚನ ನೀಡಿದರು.

English summary
Independent candidate Ravikrishna Reddy has released Jayanagar constituency manifesto. Election for this assembly will be held on June 11 and result will be out on June 16, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X