ಬೆಂಗಳೂರಲ್ಲಿ ಮಳೆ: ಸ್ವಾತಂತ್ರೋತ್ಸವದ ಮೇಲೆ ಕಾರ್ಮೋಡ?
ಬೆಂಗಳೂರು, ಆಗಸ್ಟ್ 15: ಇಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಬೇಕಿರುವ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಮೇಲೆ ಕಾರ್ಮೋಡಗಳು ಕವಿದಿವೆ.
ಆಗಸ್ಟ್ 14ರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ, ಮಾಣಿಕ್ ಷಾ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದ್ದು, ಅಲ್ಲಲ್ಲಿ ಅಲ್ಪಸ್ವಲ್ಪ ಕೆಸರೂ ಆವರಿಸಿದೆ. ಇದರಿಂದಾಗಿ, ವಿದ್ಯಾರ್ಥಿಗಳ ಪಥ ಸಂಚಲನ ಮುಂತಾದ ಕಾರ್ಯಕ್ರಮಗಳಿಗೆ ತೊಂದರೆಯಾಗುವ ಆತಂಕ ಎದುರಾಗಿದೆ.
ಆಗಸ್ಟ್ 14ರ ಮಧ್ಯರಾತ್ರಿ ಆರಂಭವಾದ ಮಳೆ, ಆಗಸ್ಟ್ 15ರ ಬೆಳಗ್ಗೆ ಸುಮಾರು 8.30ಕ್ಕೆ ನಿಂತಿದೆ. ಆದರೂ, ಕೆಲವಾರು ಪ್ರದೇಶಗಳಲ್ಲಿ ಜಿಟಿಜಿಟಿ ಮಳೆ ಮುಂದುವರಿದೇ ಇತ್ತು. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸದ್ಯಕ್ಕೆ ಮಳೆಯಿಲ್ಲವಾದರೂ, ಅಲ್ಲಿ ಸ್ವಾತಂತ್ರೋತ್ಸವ ನಡೆಯುವುದು ಬಹುತೇಕ ಅನುಮಾನ ಎಂಬಂತಾಗಿದೆ.
ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದ್ದರಿಂದ ಈ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Comments
English summary
Independence day celebration at Manik Shaw Pared ground on 15th August 2017 jeopardized as Bengaluru experienced for heavy rainfall on August 14th night till August 15th morning.