ನಂದನ್ ನಿಲೇಕಣಿ ಭರ್ಜರಿ ಪ್ರಚಾರ ಸಭೆ
ಬೆಂಗಳೂರು, ಮಾ.24: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿಯವರ ಚುನಾವಣಾ ಪ್ರಚಾರ ಸಭೆ ಸೋಮವಾರ ನಡೆದಿದೆ. ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಹಿಸಿಕೊಂಡಿದ್ದರು.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಭವಾನಿ ನಗರ, ಎಸ್ ಜಿ ಪಾಳ್ಯದ ಸೇಂಟ್ ಥಾಮಸ್ ಪ್ಯಾರಿಸ್ ಹಾಲ್ ನಲ್ಲಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಹಿರಿಯ ಕಾಂಗ್ರೆಸ್ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ನಂತರ ನಂದನ್ ಅವರು ಪ್ರಚಾರ ಕಾರ್ಯ ಮುಂದುವರೆಸಿದರು. ಜಯನಗರ 4ನೇ ಟಿ ಬ್ಲಾಕ್, ಮಾರೇನಹಳ್ಳಿ ಜಿ.ಎನ್.ಆರ್. ಕಲ್ಯಾಣ ಮಂಟಪ, 18ನೇ ಮೇನ್ ನಲ್ಲಿ ಸುತ್ತಾಡಿ ಮತಯಾಚಿಸಿದರು. ನಂತರ ಸಂಜೆ ವೇಳೆಗೆ ಹನುಮಂತನಗರದ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಸಭೆ ಚಿತ್ರಗಳು ಇಲ್ಲಿವೆ... [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ನಂದನ್ ನಿಲೇಕಣಿ ಭಾಷಣ
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿಯವರ ಚುನಾವಣಾ ಪ್ರಚಾರ ಸಭೆ
ಕಲ್ಯಾಣ ಮಂಟಪದಲ್ಲಿ ಪ್ರಚಾರ ಸಭೆ
ಹನುಮಂತನಗರದ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದಲ್ಲಿ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಚಂದ್ರಶೇಖರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ
ಹನುಮಂತನಗರದ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದಲ್ಲಿ ಪ್ರಚಾರ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಹಿಸಿಕೊಂಡಿದ್ದಾರೆ
ಸಭೆಯಲ್ಲಿ ಹಿರಿಯ ಕಾಂಗ್ರೆಸ್ಸಿಗರ ಉಪಸ್ಥಿತಿ
ಹನುಮಂತನಗರದ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದಲ್ಲಿ ಪ್ರಚಾರ ಸಭೆಯಲ್ಲಿ ಹಿರಿಯ ಕಾಂಗ್ರೆಸ್ಸಿಗ ಬಿ.ಕೆ ಚಂದ್ರಶೇಖರ್ ಉಪಸ್ಥಿತಿ