ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವೆ: ರೇಣುಕಾಚಾರ್ಯ

|
Google Oneindia Kannada News

Recommended Video

ರೇಣುಕಾಚಾರ್ಯರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಏನು ಮಾಡ್ತಾರೆ ? | Oneindia Kannada

ಬೆಂಗಳೂರು, ಆಗಸ್ಟ್ 21: ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ, ಮಂತ್ರಿಗಿರಿ ಧಕ್ಕದಿದುದಕ್ಕೆ ಬೇಸರವೇನೂ ಇಲ್ಲ ಎಂದಿದ್ದ ರೇಣುಕಾಚಾರ್ಯ ಇಂದು ವರಸೆ ಬದಲಿಸಿದ್ದಾರೆ.

ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಇಂದೇ ರಾಜೀನಾಮೆ ಕೊಟ್ಟು ಹೊರಡುತ್ತೇನೆ ಎಂದು ರೇಣುಕಾಚಾರ್ಯ ಧಮ್ಕಿ ಹಾಕಿದ್ದಾರೆ.

ಕೈ ತಪ್ಪಿದ ಸಚಿವ ಸ್ಥಾನ ರೇಣುಕಾಚಾರ್ಯ ಹೇಳಿದ್ದು ಹೀಗೆ? ಕೈ ತಪ್ಪಿದ ಸಚಿವ ಸ್ಥಾನ ರೇಣುಕಾಚಾರ್ಯ ಹೇಳಿದ್ದು ಹೀಗೆ?

ಲಕ್ಷ್ಮಣ ಸವಧಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಲಕ್ಷ್ಮಣ ಸವಧಿಗೆ ಸಚಿವ ಸ್ಥಾನ ಅವಶ್ಯಕತೆ ಏನಿತ್ತು? ಗೆದ್ದವರಿಗೆ ನೀಡಬಹುದಾಗಿತ್ತು, ನನ್ನ ವಿರೋಧ ಇದ್ದರೆ ನೇರವಾಗಿ ಹೇಳುತ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

I will resign if my self respect hurts: Renukacharya

ರೇಣುಕಾಚಾರ್ಯ ಹೇಳಿಕೆಯನ್ನು ಅನುಮೋದಿಸಿರುವ ಉಮೇಶ್ ಕತ್ತಿ, 'ಸಚಿವ ಸ್ಥಾನ ಸಿಗಲಿಲ್ಲವೆಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ' ಎಂದು ಹೇಳಿದ್ದಾರೆ.

"ಮೈತ್ರಿ ಸರ್ಕಾರವಿದ್ದಾಗ ನನ್ನ ಫೋನನ್ನೂ ಟ್ರ್ಯಾಪ್ ಮಾಡಿದ್ದರು": ಎಂ.ಪಿ. ರೇಣುಕಾಚಾರ್ಯ

ಶಾಸಕ ರಾಮಪ್ಪ ಲಮಾಣಿ ಸಹ ಅಸಮಾಧಾನ ಹೊರಹಾಕಿದ್ದು, ಸಚಿವ ಸ್ಥಾನ ಕೈತಪ್ಪಿದೆ ನಿಗಮ ಮಂಡಳಿ ಸ್ಥಾನ ದೊರೆಯುವ ವಿಶ್ವಾಸದಿಂದ ಇದ್ದೇನೆ, ಅದೂ ಇಲ್ಲವಾದರೆ ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ.

English summary
BJP senior MLA Renukacharya said if my self respect hurts i will resign to MLA post. He is upset that BJP does not give him minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X