ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಅತ್ಯಂತ ಸಂತುಷ್ಟ ವ್ಯಕ್ತಿ: ಎಚ್ ಡಿ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಜುಲೈ 25: "ನಾನು ಅತ್ಯಂತ ಸಂತುಷ್ಟ ವ್ಯಕ್ತಿ. ಅಧಿಕಾರ ಹೋಗಿದ್ದಕ್ಕೆ ನನಗೆ ಚಿಂತೆ ಇಲ್ಲ. ಆದರೆ ಹದಿನಾಲ್ಕು ತಿಂಗಳಲ್ಲಿ ನಾನು ಏನೆಲ್ಲ ಕೆಲಸ ಮಾಡಿದ್ದೇನೋ ಅದರ ಬಗ್ಗೆ ನನಗೆ ತೃಪ್ತಿ ಇದೆ" ಎಂದು ಹಂಗಾಮಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ : ಎಚ್ಡಿ ಕುಮಾರಸ್ವಾಮಿ ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ, ವಚನ ಭ್ರಷ್ಟನಲ್ಲ : ಎಚ್ಡಿ ಕುಮಾರಸ್ವಾಮಿ

"ಅಧಿಕಾರ ಹೋಗಿದ್ದರ ಬಗ್ಗೆ ನನಗೆ ಬೇಸರವಿಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಎಷ್ಟೋ ಅಡಚಣೆಗಳ ನಡುವಲ್ಲೇ ನಾನು ಆ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ನನಗಿದೆ. ಇದೀಗ ನನ್ನ ಸ್ಥಾನದಿಂದ ಕೆಳಗಿಳಿಯಬೇಕಾದಾಗಲೂ ನಾನು ಅತ್ಯಂತ ಸಂತೋಷದಿಂದ ಹೊರಬರುತ್ತಿದ್ದೇನೆ" ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.

I am the happiest, says HD Kumaraswamy after losing power

"ಶಾಸಕರನ್ನು ಅನರ್ಹಗೊಳಿಸಿ, ಪ್ರಜಾಪ್ರಭುತ್ವ ಎತ್ತಿಹಿಡಿಯಿರಿ"

ಜುಲೈ 23 ರಂದು ನಡೆದ ವಿಶ್ವಾಸ ಮತ ಯಾಚನೆಯಲ್ಲಿ, 205 ಶಾಸಕರ ವಿಧಾನಸಭೆಯಲ್ಲಿ 99 ಶಾಸಕರ ಮತವನ್ನಷ್ಟೇ ಪಡೆದು, ಬಹುಮತಕ್ಕೆ ಅಗತ್ಯವಿದ್ದ ಮ್ಯಾಜಿಕ್ ನಂಬರ್ 103 ನ್ನು ಪಡೆಯಲು ಎಚ್ ಡಿ ಕುಮಾರಸ್ವಾಮಿ ವಿಫಲರಾದರು. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಸರ್ಕಾರ ಪತನವಾಗಿತ್ತು. 105 ಶಾಸಕರ ಬೆಂಬಲ ಪಡೆದ ಬಿಜೆಪಿ ಬಹುಮತದ ಮೂಲಕ ಸರ್ಕಾರ ರಚಿಸುವ ಚಿಂತನೆ ನಡೆಸುತ್ತಿದೆ.

English summary
Outgoing chief minister HD Kumaraswamy claimed to be the “happiest person” around and the reason he cited was the opportunity given to him to serve the people of his state for over a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X