ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗೀಶ್ವರ್ ಕೊಟ್ಟ ಸೀರೆಯನ್ನು ಬೀದಿಗೆ ಬಿಸಾಕಿದರು: ಜಿ.ಟಿ.ದೇವೇಗೌಡ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ರಾಜಕೀಯ ಎದುರಾಳಿ ಮಾಜಿ ಗೆಳೆಯ ಸಿದ್ದರಾಮಯ್ಯ ಅವರನ್ನು ಇಂದು ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಭೇಟಿ ಮಾಡಿದರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಹಲವು ವಿಷಯ ಮಾತನಾಡಿದ ಜಿ.ಟಿ.ದೇವೇಗೌಡ, 'ಎಚ್.ವಿಶ್ವನಾಥ್ ಸೋಲಿನಲ್ಲಿ ನನ್ನ ಪಾತ್ರವಿಲ್ಲ, ಇರುವುದು ಸಿ.ಪಿ.ಯೋಗೀಶ್ವರ್ ಪಾತ್ರ' ಎಂದರು.

"ಜೆಡಿಎಸ್ ಶಾಸಕನಾಗೇ ಇರುತ್ತೇನೆ" ಎಂದು ಮತ್ತೆ ಸಿಎಂ ಹೊಗಳಿದ ಜಿಟಿಡಿ

ಸಿ.ಪಿ.ಯೋಗೀಶ್ವರ್, ಕ್ಷೇತ್ರಕ್ಕೆ ಬಂದು, 'ಜಿ.ಟಿ.ದೇವೇಗೌಡ ಯಾರು, ದೇವೇಗೌಡ ಯಾರು, ಕುಮಾರಸ್ವಾಮಿ ಯಾರು ಎಂದೆಲ್ಲಾ ಏಕವಚನದಲ್ಲಿ ಮಾತನಾಡಿದ್ದಾರೆ. ಅದೇ ಅವರಿಗೆ ಮುಳುವಾಗಿದೆ' ಎಂದರು.

I Am Not Reason For H Vishwanaths Defeat In By Elections: GT Deve Gowda

ಬಿಜೆಪಿಯವರು ಹಂಚಲು ತಂದಿದ್ದ ಸಾವಿರಾರು ಸೀರೆಯನ್ನು ಪೊಲೀಸರು ಸೀಜ್ ಮಾಡಿದರು. ನಂತರ ಅಲ್ಲಿಂದ ಬಿಡಿಸಿಕೊಂಡು ಹೋಗಿ ಜನರಿಗೆ ಹಂಚಿದರು. ಆದರೆ ಜನರು ಅವನ್ನು ರಸ್ತೆಗೆ ಬಿಸಾಡಿದರು ಎಂದು ಜಿ.ಟಿ.ದೇವೇಗೌಡ ಹೇಳಿದರು.

ನಾನೀಗ ಜೆಡಿಎಸ್‌ ನಲ್ಲಿಯೇ ಇದ್ದೇನೆ, ಜೆಡಿಎಸ್‌ ನಲ್ಲಿಯೇ ಇರುತ್ತೇನೆ ಎಂದ ಜಿ.ಟಿ.ದೇವೇಗೌಡ, ಮುಂದಿನ ಮೂರು ವರ್ಷಗಳಲ್ಲಿ ಭಾರಿ ರಾಜಕೀಯ ಧೃವೀಕರಣ ಸಂಭವಿಸಲಿದೆ. ಎಲ್ಲೆಲ್ಲಿ ಇದ್ದವರೆಲ್ಲಾ ಎಲ್ಲೆಲ್ಲಿಗೋ ಹೊರಟು ಹೋಗುತ್ತಾರೆ ಎಂದರು.

ಕುಮಾರಸ್ವಾಮಿ ಇನ್ನಾದರೂ ಬದಲಾಗಲಿ, ಆತ್ಮಾವಲೋಕನ ಮಾಡಿಕೊಳ್ಳುವುದು ಯಾವಾಗ? ಕುಮಾರಸ್ವಾಮಿ ಇನ್ನಾದರೂ ಬದಲಾಗಲಿ, ಆತ್ಮಾವಲೋಕನ ಮಾಡಿಕೊಳ್ಳುವುದು ಯಾವಾಗ?

ನನ್ನ ಪುತ್ರ ಯಾವ ಪಕ್ಷವನ್ನೂ ಸೇರಿಲ್ಲ, ನಾನೂ ಸಹ ಯಾವ ಪಕ್ಷವನ್ನೂ ಸೇರಿಲ್ಲ, ಸೇರುವುದೂ ಇಲ್ಲ, ಜೆಡಿಎಸ್‌ ನಲ್ಲಿ ಇದ್ದೇನೆ, ಜೆಡಿಎಸ್‌ ನಲ್ಲಿ ಇದ್ದುಕೊಂಡೇ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದರು.

English summary
JDS MLA GT Deve Gowda said i am not reason for H Vishwanath defeat it is CP Yogeshwar who defeated his own party candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X