ಕೆಎಸ್ಟಿಡಿಸಿಯಿಂದ ಶ್ರೀಶೈಲ, ಹೈದರಾಬಾದ್ ಪ್ರವಾಸ ಪ್ಯಾಕೇಜ್
ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಶ್ರೀಶೈಲ, ಮಹಾನಂದಿ, ಹೈದರಾಬಾದ್ ಮತ್ತು ರಾಮೋಜಿ ಫಿಲ್ಮ್ಸಿಟಿ ಪ್ರವಾಸವನ್ನು ಆರಂಭಿಸಲಾಗಿದೆ. ಪ್ರತಿ ಬುಧವಾರ ಸಂಜೆ ಪ್ರವಾಸ ಹೊರಡಲಾಗುತ್ತದೆ. ಸೋಮವಾರ ಬೆಳಗ್ಗೆ ವಾಪಸ್ ಬರಲಾಗುವುದು. ಒಟ್ಟು ಆರು ದಿನಗಳ ಪ್ರವಾಸ ಇದಾಗಿದ್ದು, ಪ್ರವಾಸದ ದರ 8 ಸಾವಿರ ರುಪಾಯಿ ನಿಗದಿಯಾಗಿದೆ.
ಇದರ ಜತೆಗೆ 5 ದಿನದ ಮಿನಿ ಸೌತ್ ಇಂಡಿಯಾ ಪ್ರವಾಸಕ್ಕೆ ಪ್ರತಿ ಗುರುವಾರ ಸಂಜೆ ಹೊರಟು ಸೋಮವಾರ ಬೆಳಗ್ಗೆ ವಾಪಸ್ ಬರಲಾಗುವುದು. ಈ ಪ್ರವಾಸಕ್ಕೆ ಒಬ್ಬರಿಗೆ ದರ 5,400 ರುಪಾಯಿ ನಿಗದಿ ಮಾಡಲಾಗಿದೆ. ಈ ಎರಡೂ ಪ್ರವಾಸಗಳಲ್ಲಿ ಬಸ್ ಹಾಗೂ ವಸತಿಗಳು ಹವಾನಿಯಂತ್ರಿತವಾಗಿರುತ್ತವೆ.[ಮೈಸೂರು : ಕೆಎಸ್ ಟಿಡಿಸಿ ಟೂರ್ ಪ್ಯಾಕೇಜ್ ವಿವರಗಳು]
ಪ್ರವಾಸಗಳನ್ನು ಬಾದಾಮಿ ಹೌಸ್ ನಲ್ಲಿ ಅರಂಭಿಸಲಾಗುವುದು, ಅಲ್ಲದೆ ನಿಗಮದಿಂದ ಪ್ರವಾಸ ಹಾಗೂ ವಸತಿ ಕಾಯ್ದಿರಿಸುವ ವ್ಯವಸ್ಥೆಯೂ ಇದೆ. ಹೆಚ್ಚಿನ ವಿವರವನ್ನು ನಮ್ಮ ನಿಗಮದ ವೆಬ್ಸೈಟ್ http://karnatakatravelguide.in/kstdc-tour-packages ನಿಂದ ಪಡೆದುಕೊಳ್ಳಬಹುದು ಮತ್ತು ಮೊಬೈಲ್ ಆಪ್ ಕೂಡ ಬಳಸಬಹುದು.
ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರು, ಕರಾಪ್ರಅನಿನಿ, ಬಾದಾಮಿ ಹೌಸ್, ಮಹಾನಗರಪಾಲಿಕೆ ಎದುರು, ದೂರವಾಣಿ ಸಂಖ್ಯೆ : 43344334, 22275869, 222755883, 8970650070, ಟೂರಿಸಂ ಹೌಸ್ ದೂರವಾಣಿ ಸಂಖ್ಯೆ 22352901, 22352902, 22352903, ರೈಲು ನಿಲ್ದಾಣ ; 22870068, ಕೆಂಪೇಗೌಡ ಬಸ್ ನಿಲ್ದಾಣ : 8970650075 ಇಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.