ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ದಾಖಲೆಯ ಹುಂಡಿ ಹಣ ಸಂಗ್ರಹ
Recommended Video
ದೊಡ್ಡಬಳ್ಳಾಪುರ, ಜುಲೈ.16: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಹುಂಡಿ ಹಣ ಎಣಿಕೆ ನಡೆಯಿತು. ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ.
ಎಂದಿನಂತೆ ಈ ಬಾರಿಯೂ ದೇವರ ಹುಂಡಿಯಲ್ಲಿ ಹಣವನ್ನು ಎಣಿಕೆ ಮಾಡಲಾಯ್ತು. ಈ ಎಣಿಕೆಯಲ್ಲೂ ಒಂದು ವಿಶಿಷ್ಠತೆ ಕಂಡಿದೆ. ಈ ದೇವರ ಹುಂಡಿಯಲ್ಲಿ 38 ಲಕ್ಷ ಹಣ ಸಂಗ್ರಹವಾಯಿತಲ್ಲದೇ, ಬೆಳ್ಳಿ ವಸ್ತುಗಳು ಸೇರಿದಂತೆ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ.
ಆ.9 ರಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ
ರಜಾ ದಿನಗಳು ಹೆಚ್ಚಿದ್ದ ಕಾರಣ ಹುಂಡಿಯಲ್ಲಿ ಹಣ ಸಂಗ್ರಹ ಕೂಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಎಣಿಕೆ ಮಾಡಲು ದರ್ಶನಕ್ಕೆ ಬಂದಿದ್ದ ಭಕ್ತರಿಗೂ ಕೂಡ ಅವಕಾಶ ನೀಡಿದ್ದಾರೆ. ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಹಣ ಎಣಿಕೆ ನಡೆಯಿತು.
ಮತ್ತೊಂದು ವಿಶೇಷ ಅಂದರೆ ಮೊದಲ ಬಾರಿಗೆ ಹುಂಡಿ ಹಣ ಏಣಿಕೆ ಕಾರ್ಯವನ್ನು ಸಂಪೂರ್ಣವಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು.
ಇತ್ತೀಚೆಗೆ ಮಂಡ್ಯ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀರಂಗಪಟ್ಟಣದ ಗಂಜಾಮ್ ನಲ್ಲಿರುವ ಶ್ರೀ ನಿಮಿಷಾಂಭ ದೇವಾಲಯದಲ್ಲಿ ಹುಂಡಿಹಣ ಎಣಿಕೆ ಕಾರ್ಯ ನಡೆಯಿತು.
ಈ ಬಾರಿ ಭಕ್ತರಿಂದ ದಾಖಲೆಯ ಹುಂಡಿ ಹಣ ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು3,40,352 ರೂ ಹಣವನ್ನು ಭಕ್ತರು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.