ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್: 15 ಮಂದಿ ಆಯ್ಕೆ
ಬೆಂಗಳೂರು, ಡಿಸೆಂಬರ್ 07 : ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ನ ವಾರ್ಷಿಕ ಪ್ರಶಸ್ತಿ 'ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ 2017 ' ಗೆ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹಾಗೂ ಖ್ಯಾತ ಸಾಹಿತಿ ಪ್ರೊ. ಕೆ. ನಿಸಾರ್ ಅಹಮದ್ ಸೇರಿದಂತೆ 15 ಮಂದಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ಕೆ ಮಾಡಲಾಗಿದೆ.
ಡಿಸೆಂಬರ್ 16 ರಂದು ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಡಾ. ಸಾಲುಮರದ ತಿಮ್ಮಕ್ಕನವರಿಗೆ ಅಭಿನಂದನಾ ಸಮಾರಂಭದಲ್ಲಿ ಹಾಗೂ ಪರಿಸರ ಜಾತ್ರೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಸಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 10 ಸಾವಿರ ನಗದು, ಬೆಳ್ಳಿ ಪದಕ, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.
1)
ಸ್ವಾತಂತ್ರ್ಯ
ಹೋರಾಟಗಾರ
ಎಚ್.ಎಸ್.
ದೊರೆಸ್ವಾಮಿ-
ಸಮಾಜಸೇವೆ
2)ನಾಡೋಜ
ಡಾ.
ಕೆ.ಎಸ್.
ನಿಸಾರ್
ಅಹಮದ್-
ಸಾಹಿತ್ಯ
ಸೇವೆ
3)
ಡಾ.
ಎನ್.
ನಾಗಾಂಬಿಕ
ದೇವಿ-
ಗ್ರಾಮೀಣ
ಅಭಿವೃದ್ಧಿ
ಮತ್ತು
ಪಂಚಾಯತ್
ಇಲಾಖೆ
4)
ಸುನೀತಾ
ಎಂ.
ನಿಂಬರಗಿ-
ಅರಣ್ಯ
ಸಂರಕ್ಷಣೆ
5)
ಅರವಿಂದ್
ಜಯಬಾಲ್-
ಸಾಮಾಜಿಕ
ಸೇವೆ
6)ಕಿರಣ್
ಕುಮಾರ್-
ದೇಶರಕ್ಷಣೆ
7)ಸುನೀಲ್
ಕುಮಾರ್-
ಪರಿಸರ
ಮತ್ತು
ನೀರು
ಸಂರಕ್ಷಣೆ
8)ಬಿ.ಎ.
ಜಗದೀಶ್-ಸಾರ್ವಜನಿಕ
ಸೇವೆ
9)ಸುದರ್ಶನ್-ಸಮಾಜ
ಸೇವೆ
10)ಎಸ್.ವಿ.
ಸಚಿನ್-
ಗ್ರಾಮೀಣಾಭಿವೃದ್ಧಿ
11)ಡಾ.
ರಜನಿ
ಭಟ್-
4
ವರ್ಷದಿಂದ
ತಿಮ್ಮಕ್ಕನವರಿಗೆ
ವೈದ್ಯಕೀಯ
ಸೇವೆ
12)ಡಾ.
ಬಿ.ಕೆ.
ಸೌಮ್ಯಮಣಿ-
ವೈದ್ಯಕೀಯ
ಸೇವೆ
13)
ಎಸ್.ಟಿ.
ಸಿದ್ದಲಿಂಗಪ್ಪ-
ಸಹಾಯಕ
ಪೊಲೀಸ್
ಆಯುಕ್ತರು.
14)
ಮ.ಶಿವಮೂರ್ತಿ-ಸಮಾಜಸೇವೆ
15)
ಡಾ.
ಆರ್.ವಿ.
ಮಮತಾ
ದೇವರಾಜ್
-
ಸಮಾಜಿಕ
ಸೇವೆ