ಹಾಪ್ಕಾಮ್ಸ್ನಲ್ಲಿ ಬಾಯಲ್ಲಿ ನೀರೂರಿಸುವ ದ್ರಾಕ್ಷಿ-ಕಲ್ಲಂಗಡಿ ಮೇಳ
ಬೆಂಗಳೂರು, ಫೆಬ್ರವರಿ 18: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ(ಹಾಪ್ಕಾಮ್ಸ್) ಲಾಲ್ಬಾಗ್ನಲ್ಲಿರುವ ಹಾಪ್ಕಾಮ್ಸ್ ಕೇಂದ್ರ ಕಚೇರಿಯಲ್ಲಿ ದ್ರಾಕ್ಷಿ-ಕಲ್ಲಂಗಡಿ ಮೇಳವನ್ನು ಆಯೋಜಿಸಿದೆ.
ದ್ರಾಕ್ಷಿ ಹಾಗೂ ಕಲ್ಲಂಗಡಿ ಬೆಳಗಾರರನ್ನು ಪ್ರೋತ್ಸಾಹಿಸುವ , ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಹಣ್ಣು ಒದಗಿಸಲು ಮೇಳ ಏರ್ಪಡಿಸಿದ್ದೇವೆ ಎಂದು ಹಾಪ್ಕಾಮ್ಸ್ ಅಧ್ಯಕ್ಷ ಎಎಸ್ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಮೇಳದ ಅವಧಿಯಲ್ಲಿ ನಗರದಲ್ಲಿರುವ 200 ಕ್ಕೂ ಅಧಿಕ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಗ್ರಾಹಕರು ಹಣ್ಣುಗಳನ್ನು ಖರದೀದಿಸಬಹುದು.
ಶರದ್ ಸೀಡ್ಲೆಸ್, ಕೃಷ್ಣ ಶರದ್, ಥಾಮ್ಸನ್ , ಜಂಬೂ ಸೇರಿದಂತೆ ಅಂದಾಜು ತಳಿಯ ದ್ರಾಕ್ಷಿ, ಐದು ಬಗೆಯ ಕಲ್ಲಂಗಡಿ ಜೊತೆಗೆ ಖರ್ಬೂಜ, ಕಿತ್ತಳೆ, ಚಕ್ಕೋತ, ಒಣದ್ರಾಕ್ಷಿ ಮತ್ತಿತರ ಡ್ರೈಫ್ರೂಟ್ಸ್ಗಳು ಶೇ.10 ರಿಯಾಯಿತಿ ದರದಲ್ಲಿ ದೊರೆಯುತ್ತವೆ.
ಕೇಂದ್ರ ಬಜೆಟ್ 2020: ಹಣ್ಣು, ತರಕಾರಿ ಶೇಖರಣೆಗೆ ದೇಶದಲ್ಲಿ ಜಾಲ ನಿರ್ಮಾಣ
ಬೆಳಗಾವಿ, ಬಿಜಾಪುರ, ಬಾಗಲಕೋಟೆ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಒಟ್ಟು 26,600 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ , ಕಲ್ಲಂಗಡಿ ಬೆಳೆಯಲಾಗಿದೆ. ಆ ಭಾಗಗಳಲ್ಲಿ ರೈತರಿಗೆ ಮೇಳದ ಲಾಭ ಪಡೆಯುವಂತೆ ಕೋರಲಾಗಿದೆ. ಈ ಬಾರಿ 500 ಟನ್ ದ್ರಾಕ್ಷಿ ಹಾಗೂ 1500 ಕಲ್ಲಂಗಡಿ ಮಾರಾಟ ಮಾಡುವ ಗುರಿಯನ್ನು ಹೊಂದಿದ್ದಾರೆ.
ತೋಟಗಾರಿಕೆ ಸಚಿವ ನಾರಾಯಣ ಗೌಡ ಅವರು ಫೆ.19ರಂದು ಮೇಳ ಉದ್ಘಾಟಿಸಲಿದ್ದಾರೆ. ಸಚಿವ ವಿ. ಸೋಮಣ್ಣ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಗಮಿಸಲಿದ್ದಾರೆ.