ಬೆಂಗಳೂರಿನಲ್ಲಿ ಫೆಬ್ರವರಿ 17ರಂದು ಸಂಜೆ 4ಕ್ಕೆ ಹಿಂದೂಸ್ತಾನಿ ಸಂಗೀತೋತ್ಸವ
ಬೆಂಗಳೂರು, ಫೆಬ್ರವರಿ 17: ಗುರು ಸಮರ್ಥ ಸಂಗೀತ ವಿದ್ಯಾಲಯದಿಂದ ಭಾನುವಾರ (ಫೆಬ್ರವರಿ 17) ಸಂಜೆ 4 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಿಂದೂಸ್ತಾನಿ ಸಂಗೀತೋತ್ಸವ ಆಯೋಜಿಸಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗ ಈ ಕಾರ್ಯಕ್ರಮಕ್ಕಿದೆ.
ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಡಿ.ಕುಮಾರದಾಸ ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಶತ ತಬಲಾ ಪಂಡಿತ್ ಸತೀಶ್ ಹಂಪಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಎಂ.ಆರ್.ವೆಂಕಟೇಶ್, ವೆಂಕಟೇಶ್ ಮೂರ್ತಿ ಶಿರೂರ, ಸಂಜಯ್ ಬೆಂಕಿಪೂರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ರಾಜರಾಜೇಶ್ವರಿನಗರದಲ್ಲಿ ಸ್ವರಮೇಧಾ ಮ್ಯೂಸಿಕ್ ಫೆಸ್ಟಿವಲ್
ಸಂಜೆ ಆರು ಗಂಟೆಗೆ ಸಭಾ ಕಾರ್ಯಕ್ರಮ ಆರಂಭ ಆಗಲಿದೆ. ಹಿಂದೂಸ್ತಾನಿ ಸಂಗೀತ: ಪಂಡಿತ್ ಡಿ.ಕುಮಾರ್ ದಾಸ್, ಗಾಯತ್ರಿ ಶ್ರೀಧರ್, ಆದಿತ್ಯ ಪಲ್ಲಕ್ಕಿ, ವೆಂಕಟ ನಿತಿನ್.
ಸಿತಾರ್ ವಾದನ: ಪ್ರತಿಕ್ಷಾ ಹೂಗಾರ. ತಬಲಾ ವಾದನ: ಅಭಯ ಕುಲಕರ್ಣಿ, ಪ್ರಜ್ವಲ್ ಶರ್ಮ, ಎ.ಎಸ್.ಶಿಶಿರ್, ಕೃಪಾಲ ಕೂಳೂರು, ಸುಮೇಧ ಪುರಾಣಿಕ್, ಗಿರಿಧರ ಬೆಂಕಿಪೂರ, ಎಚ್.ಬಿ.ಪವನರಾವ್, ವೆಂಕಟ್ ನಿಖಿಲ್, ಅಭಿರಾಮ ಬಿಜ್ಜರಗಿ, ಶ್ರೀಕೃಷ್ಣ ಉಡುಪ, ಸುದಾಂಶ ತೊರವಿ, ಸುಹಾಸ್ ರಾವ್.
ವಾದ್ಯ ಸಹಕಾರ:
ತಬಲಾ: ಪಂಡಿತ್ ಸತೀಶ್ ಹಂಪಿಹೊಳಿ, ಪಂ.ದೊಡ್ಡಪ್ಪ ಹೂಗಾರ, ಅಭಯ ಕುಲಕರ್ಣಿ, ಪ್ರಸನ್ನ ಬಂಡಿವಾಡ.
ಹಾರ್ಮೋನಿಯಂ: ಡಾ.ಪಂ.ಪಂಚಾಕ್ಷರಿ ಹಿರೇಮಠ್.
ತಂಬೂರಿ: ಜಗನ್ನಾಥ.