ಬೆಂಗಳೂರು: ಹಿಂದೂಸ್ತಾನ್ ಯೂನಿಲಿವರ್ನಿಂದ ಉಚಿತ ಆಮ್ಲಜನಕ ಪೂರೈಕೆ
ಬೆಂಗಳೂರು, ಮೇ 20: ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಬೆಂಗಳೂರಿನಲ್ಲಿ ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡಲು ಮುಂದಾಗಿದೆ.
ಎಚ್ಒ2ಪಿಇ ಮಿಷನ್ ಅಂಗವಾಗಿ, ಎಚ್ಯುಎಲ್, ನಗರದಲ್ಲಿ ರೋಗಿಗಳಿಗೆ ಪರಿಣಾಮಕಾರಿಯಾಗಿ ಆಮ್ಲಜನಕ ಸಾಂದ್ರಕಗಳನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ಭಾರತದ ಅತಿ ದೊಡ್ಡ ಆರೋಗ್ಯ ಕ್ಷೇತ್ರದ ಕಂಪನಿಗಳಾದ ಕೆವಿಎನ್ ಫೌಂಡೇಷನ್ ಮತ್ತು ಪೋರ್ಟಿಯಾದೊಂದಿಗೆ ಕೈಜೋಡಿಸಿದೆ.
ಭಾರತದಲ್ಲಿ ಕೋವಿಡ್ -19 ರ ಎರಡನೇ ಅಲೆಯ ಆಮ್ಲಜನಕ ಸಾಂದ್ರಕಗಳ ತೀವ್ರ ಕೊರತೆ ಎದುರಿಸುತ್ತಿದೆ. ಮಿಷನ್ ಎಚ್ಒ2ಪಿಇ ಮೂಲಕ, ಎಚ್ಯುಎಲ್ ವಿಮಾನಗಳ ಮೂಲಕ ಭಾರತಕ್ಕೆ 5000 ಆಮ್ಲಜನಕ ಸಾಂದ್ರಕಗಳನ್ನು ತಲುಪಿಸಿದೆ.
ಕೆವಿಎನ್ ಫೌಂಡೇಶನ್ ಮತ್ತು ಪೋರ್ಟಿಯಾದೊಂದಿಗಿನ ಎಚ್ಯುಎಲ್ನ ಸಹಭಾಗಿತ್ವವು ಕೋವಿಡ್ -19 ರೋಗಿಗಳಿಗೆ ನೇರವಾಗಿ ತಮ್ಮ ಮನೆಗಳಲ್ಲಿ ಆಮ್ಲಜನಕದ ಪ್ರವೇಶವನ್ನು ಒದಗಿಸುತ್ತದೆ.
ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್: ಸುಧಾಕರ್
ಸಾಂಕ್ರಾಮಿಕ ರೋಗದಿಂದ ಪ್ರಭಾವಿತ ಸಮುದಾಯಗಳನ್ನು ಬೆಂಬಲಿಸಲು ಕಳೆದ ವರ್ಷ ಎಚ್ಯುಎಲ್ 100 ಕೋಟಿ ರೂ. , 100,000 ಕ್ಕೂ ಹೆಚ್ಚು ವಲಸೆ ಕಾರ್ಮಿಕ ಕುಟುಂಬಗಳಿಗೆ 15 ದಿನಗಳ ಕಾಲ ಆಹಾರ ಕಿಟ್ಗಳನ್ನು ನೀಡಿತ್ತು ಮತ್ತು ಭಾರತದಾದ್ಯಂತ ಸಮುದಾಯಗಳಿಗೆ ಮೂರು ದಶಲಕ್ಷಕ್ಕೂ ಹೆಚ್ಚು ಸಾಬೂನುಗಳನ್ನು ಒದಗಿಸಿತ್ತು.
ಆಮ್ಲಜನಕ ಬೇಕೆಂದರೆ ಹೀಗೆ ಮಾಡಿ
ಬೆಂಗಳೂರಿನಲ್ಲಿ, ರೋಗಿಗಳು ಮತ್ತು ಆರೈಕೆದಾರರು 080-68065385 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಆಮ್ಲಜನಕ ಸಾಂದ್ರತೆಯ ಬೇಡಿಕೆ ಇಡಬಹುದು ಮತ್ತು ಮಿಷನ್ ಎಚ್ಒ2ಪಿಇ ತಂಡ ಅವಶ್ಯಕತೆಯ ಆಧಾರದ ಮೇಲೆ ಸಾಂದ್ರತೆಯನ್ನು ರೋಗಿಯ ಮನೆ ಬಾಗಿಲಿಗೆ ತಲುಪಿಸುತ್ತದೆ. ತರಬೇತಿ ಪಡೆದ ಸ್ವಯಂಸೇವಕರು ರೋಗಿಗಳು ಮತ್ತು ಆರೈಕೆ ಮಾಡುವವರಿಗೆ ಸಹಾಯ ಮಾಡಲು ಮತ್ತು ಆಮ್ಲಜನಕ ಸಾಂದ್ರತೆಯ ಕಾರ್ಯಗಳು ಮತ್ತು ಕಾರ್ಯಾಚರಣೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ.
ಸಾಂಧ್ರಕ ಸ್ವಚ್ಛಗೊಳಿಸಲಾಗುತ್ತದೆ
ಈ ಉಪಕ್ರಮ ಎರವಲು-ಹಿಂದಿರುಗಿಸಿ-ಬಳಕೆ ಮಾಡಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಳಕೆಯ ನಂತರ, ಸಾಂಧ್ರಕಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ನಂತರ ಗತ್ಯವಿರುವ ಮುಂದಿನ ಜನರ ಗುಂಪಿಗೆ ಒದಗಿಸಲಾಗುತ್ತದೆ, ಇದರಿಂದಾಗಿ ಸಾಂದ್ರಕಗಳು ಗರಿಷ್ಠ ಸಂಖ್ಯೆಯ ಜನರನ್ನು ತಲುಪುತ್ತವೆ ಮತ್ತು ಸಾಧ್ಯವಾದಷ್ಟು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ.
ರಾಜ್ಯದಲ್ಲಿ ಉತ್ಪಾದಿಸುವ ಆಮ್ಲಜನಕ ಬಳಕೆಗೆ ಕೇಂದ್ರ ನೀಡಿತು ಒಪ್ಪಿಗೆ
ಕೊರೊನಾ ಬಿಕ್ಕಟ್ಟನ್ನು ಒಗ್ಗಟ್ಟಾಗಿ ಎದುರಿಸಬೇಕು
ಎಚ್ಯುಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಮೆಹ್ತಾ, ಕೋವಿಡ್ನ ಎರಡನೇ ಅಲೆ ತೀವ್ರ ಮಾನವೀಯ ಬಿಕ್ಕಟ್ಟನ್ನು ತಂದಿದೆ. ತೀವ್ರ ಕೊರತೆಯಿರುವ ಸುರಕ್ಷಿತ ಆಮ್ಲಜನಕ ಸಾಂದ್ರತೆ ಒದಗಿಸಲು ಸಹಾಯ ಮಾಡುವ ಮೂಲಕ ಇಡೀ ಯುನಿಲಿವರ್ ಕುಟುಂಬವು ಈ ಬಿಕ್ಕಟ್ಟಿನ ಕ್ಷಣದಲ್ಲಿ ಭಾರತವನ್ನು ಬೆಂಬಲಿಸಲು ಒಟ್ಟಾಗಿ ಒಟ್ಟುಗೂಡುತ್ತಿದೆ ಎಂದರು.
ಕೊರೊನಾ ಸವಾಲು ತಿಳಿದಿದೆ
ಪೋರ್ಟಿಯಾ
ಮೆಡಿಕಲ್
ಸಹ-ಸಂಸ್ಥಾಪಕಿ
ಮತ್ತು
ಸಿಇಒ
ಮೀನಾ
ಗಣೇಶ್
,
ಕಳೆದ
ವರ್ಷದಲ್ಲಿ
4
ಲಕ್ಷಕ್ಕೂ
ಹೆಚ್ಚು
ಕೋವಿಡ್
ರೋಗಿಗಳಿಗೆ
ಚಿಕಿತ್ಸೆ
ನೀಡಿದ
ನಂತರ,
ಈ
ಸಾಂಕ್ರಾಮಿಕ
ರೋಗದ
ಸವಾಲುಗಳನ್ನು
ನಾವು
ಅರ್ಥಮಾಡಿಕೊಂಡಿದ್ದೇವೆ.
ಎರಡನೆಯ
ಅಲೆ
ಹಿಂದೆಂದೂ
ಕಂಡಿರದ
ಸಮಸ್ಯೆ
ತಂದಿಟ್ಟಿದೆ
ಮತ್ತು
ರೋಗಿಗಳಿಗೆ
ಆಮ್ಲಜನಕ
ಚಿಕಿತ್ಸೆ
ನೀಡುವ
ಮತ್ತು
ಅವರನ್ನು
ಆಸ್ಪತ್ರೆಗಳಿಂದ
ಹೊರಗಿಡುವ
ತುರ್ತು
ಅವಶ್ಯಕತೆಯಿದೆ
ಎಂದು
ತೋರಿಸಿದೆ.
ಈ
ನಿಟ್ಟಿನಲ್ಲಿ,
ಈ
ಉಪಕ್ರಮದಲ್ಲಿ
ಎಚ್ಯುಎಲ್
ಜೊತೆ
ಪಾಲುದಾರಿಕೆ
ಹೊಂದಲು
ನಾವು
ಹೆಮ್ಮೆಪಡುತ್ತೇವೆ
ಮತ್ತು
ರೋಗಿಗಳ
ಮನೆಗಳಿಗೆ
ವೈದ್ಯಕೀಯ
ಆಮ್ಲಜನಕದ
ಪ್ರವೇಶವನ್ನು
ಖಚಿತಪಡಿಸುತ್ತೇವೆ
ಎಂದಿದ್ದಾರೆ.
Recommended Video
ಆಮ್ಲಜನಕ ಪೂರೈಕೆ
ತೀವ್ರ
ಬಾಧಿತ
ನಗರಗಳಾದ
ಕೋಲ್ಕತ್ತಾ,
ಲಕ್ನೋ,
ಚೆನ್ನೈ,
ಹೈದರಾಬಾದ್,
ಚಂಡೀಗಢದಲ್ಲಿಯೂ
‘ಮಿಷನ್
ಎಚ್ಒ2ಪಿಇ'
ಅನ್ನು
ರೂಪಿಸಲಾಗುತ್ತಿದೆ.
ಭಾರತದಾದ್ಯಂತ
ಸುಮಾರು
20
ಸ್ಥಳಗಳಲ್ಲಿನ
ಆಸ್ಪತ್ರೆಗಳಿಗೆ
ಎಚ್ಯುಎಲ್
ಸಾಂಧ್ರೀಕರಣಗಳನ್ನು
ನೀಡಲಿದೆ.
ಈ
ಸಹಭಾಗಿತ್ವದ
ಹೊರತಾಗಿ,
ಕಂಪನಿಯು
300,000
ಜನರಿಗೆ
ಕೋವಿಡ್
ಲಸಿಕೆ
ಹಾಕುವ
ವೆಚ್ಚವನ್ನು
ಸರಿದೂಗಿಸುತ್ತಿದೆ
ಎಚ್ಯುಎಲ್
ಸಹ
30+
ಉತ್ಪಾದನಾ
ಘಟಕಗಳನ್ನು
ಸ್ಥಾಪಿಸಿದೆ.
ಅವುಗಳಲ್ಲಿ
ಹೆಚ್ಚಿನವು
ಭಾರತದ
ಗ್ರಾಮೀಣ
ಭಾಗಗಳಲ್ಲಿವೆ.
ಒ
2
ಸಾಂದ್ರಕಗಳಲ್ಲದೆ,
ಗ್ರಾಮೀಣ
ಪ್ರದೇಶಗಳು
ಸೇರಿದಂತೆ
ಆಸ್ಪತ್ರೆಗಳಿಗೆ
ಎಚ್ಯುಎಲ್
ವೆಂಟಿಲೇಟರ್
ಮತ್ತು
ಇತರ
ವೈದ್ಯಕೀಯ
ಉಪಕರಣಗಳನ್ನು
ಸಹ
ನೀಡಲಿದೆ.