ಬೆಂಗಳೂರಲ್ಲಿ ದೀಪಾವಳಿ ಸಂಭ್ರಮಕ್ಕೆ ಮಳೆ ಅಡ್ಡಿ
ಬೆಂಗಳೂರು, ನವೆಂಬರ್ 04: ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮಕ್ಕೆ ಮಳೆ ಅಡ್ಡಿ ಪಡಿಸಿದೆ. ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆಯಾಗುತ್ತಿದ್ದಂತೆಯೇ ವರುಣನ ಆರ್ಭಟ ಹೆಚ್ಚಾಗಿದೆ.
ಇಂದು ಎಲ್ಲೆಡೆ ಪಟಾಕಿಗಳದ್ದೇ ಸದ್ದು, ಆದರೆ ಸಂಜೆ 7 ಗಂಟೆ ಬಳಿಕ ಸಂಭ್ರಮ ಸ್ವಲ್ಪ ಮಂಕಾಗಿದೆ. ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಕಾರಣ ಪಟಾಕಿ ಪ್ರಿಯರು ತಂದಿದ್ದ ಪಟಾಕಿಗಳು ಮನೆಯಲ್ಲೇ ಬೆಚ್ಚಗೆ ಉಳಿದಿವೆ. ಮಳೆ ಕಡಿಮೆಯಾಗಬಹುದು ಎನ್ನುವ ಆಶಯದಲ್ಲಿ ಜನರಿದ್ದಾರೆ.
ಶ್ರೀನಗರ-ಶಾರ್ಜಾ ವಿಮಾನ ಹಾರಾಟ: ತಮ್ಮ ವಾಯುನೆಲೆ ಬಳಕೆಗೆ ಪಾಕ್ ನಿರಾಕರಣೆ
ಆದರೆ ಕಳೆದ ಎರಡು ಗಂಟೆಗಳಿಂದ ಸತತ ಮಳೆ ಸುರಿಯುತ್ತಲೇ ಇದೆ, ಸಾಕಷ್ಟು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಶಾಂತಿನಗರ, ಜಯನಗರ, ಕತ್ರಿಗುಪ್ಪೆ, ಕಾಮಾಕ್ಯ, ಕೆಂಗೇರಿ, ಉತ್ತರ ಹಳ್ಳಿ, ಜಯನಗರ, ಮಲ್ಲೇಶ್ವರ, ಹೊಸಕೆರೆಹಳ್ಳಿ ಸೇರಿದಂತೆ ಹಲವೆಡೆ ಭಾರಿ ವರ್ಷಧಾರೆಯಾಗಿದೆ.
ಶಾಂತಿನಗರದ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರು ಸೇರಿದಂತೆ ಹಲವೆಡೆ ನವೆಂಬರ್ 09ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.
ಬೆಂಗಳೂರಲ್ಲಿ
ಭಾಗಶಃ
ಮೋಡಕವಿದ
ವಾತಾವರಣವಿದ್ದು,
ಅಲ್ಲಲ್ಲಿ
ಸಾಧಾರಣ
ಮಳೆಯಾಗುವ
ಸಾಧ್ಯತೆ
ಇದೆ,27
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
20
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
ಎಚ್ಎಎಲ್ನಲ್ಲಿ
25.4
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
18.4
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ,
ಬೆಂಗಳೂರು
ನಗರದಲ್ಲಿ
26.2
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ
20.2
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ,
ಕೆಐಎಎಲ್ನಲ್ಲಿ
27.4
ಡಿಗ್ರಿ
ಸೆಲ್ಸಿಯಸ್
ಗರಿಷ್ಠ
ಉಷ್ಣಾಂಶ,
20.4
ಡಿಗ್ರಿ
ಸೆಲ್ಸಿಯಸ್
ಕನಿಷ್ಠ
ಉಷ್ಣಾಂಶ
ದಾಖಲಾಗಿದೆ.
ಕರಾವಳಿಯ ಹಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ. ರಾಜ್ಯದ 8ಕ್ಕೂ ಅಧಿಕ ಜಿಲ್ಲೆಗಳಲ್ಲಿ ನವೆಂಬರ್ 09ರವರೆಗೆ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಪ್ರದೇಶದ ಪ್ರಮುಖ ಬೆಳೆಯಾಗಿರುವ ಅಡಿಕೆಗೆ ಹಿಂಗಾರು ಮಳೆ ಪೂರಕವಾಗಿದ್ದು, ಉತ್ತಮ ಫಸಲು ನಿರೀಕ್ಷಿಸಬಹುದಾಗಿದೆ. ಭಾರತೀಯ ಹವಾಮಾನ ಇಲಾಖೆ ವಾಡಿಕೆಯಂತೆ ಅಕ್ಟೋಬರ್ 1 ರಿಂದ ಹಿಂಗಾರು ಆರಂಭಗೊಂಡಿದ್ದರೂ ಅಕ್ಟೋಬರ್ ಕೊನೆಯ ವಾರದಲ್ಲಿ ಹಿಂಗಾರು ಮಾರುತ ಅಪ್ಪಳಿಸಿತ್ತು. ಮುಂದಿನ ಕೆಲವು ದಿನಗಳ ಕಾಲ ಕರಾವಳಿಯಲ್ಲಿ ಅಧಿಕ ಮಳೆಯಾಗಲಿದೆ.
ಕರಾವಳಿ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಯಂತೆ ಸುರಿಯದೇ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಈಗ ಹಿಂಗಾರು ಮಳೆ ಆರಂಭವಾಗಿದೆ. ಆರಂಭದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಹಿಂಗಾರು ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.
ಈಗಾಗಲೇ ರೆಡ್ ಜೋನ್ನಲ್ಲಿರುವ ದೇಶಗಳಿಗೆ ತನ್ನ ದೇಶದ ಪ್ರಜೆಗಳು ಪ್ರಯಾಣ ಮಾಡಬಾರದೆಂದು ಸೌದಿ ಅರೇಬಿಯಾ ಆದೇಶ ನೀಡಿದೆ. ರೆಡ್ ಪಟ್ಟಿಯಲ್ಲಿರುವ ದೇಶಗಳಿಗೆ ಪ್ರಯಾಣ ಮಾಡಿದರೆ 3 ವರ್ಷಗಳ ಕಾಲ ಪ್ರಯಾಣಕ್ಕೆ ನಿಷೇಧ ಹೇರುವುದಾಗಿ ಎಚ್ಚರಿಕೆ ನೀಡಿದೆ.
ಅಲ್ಲದೆ, ರೆಡ್ ಪಟ್ಟಿಯಲ್ಲಿರುವ ದೇಶಗಳಿಗೆ ತೆರಳಿ ವಾಪಾಸಾಗುವ ತನ್ನ ದೇಶದ ಪ್ರಜೆಗಳು ದುಬಾರಿ ದಂಡ ಕಟ್ಟಬೇಕೆಂದು ಕೂಡ ಹೊಸ ಆದೇಶ ಹೊರಡಿಸಿದೆ. ಸೌದಿ ಅರೇಬಿಯಾದ ರೆಡ್ ಪಟ್ಟಿಯಲ್ಲಿರುವ ದೇಶಗಳಲ್ಲಿ ಭಾರತ ಕೂಡ ಇದೆ, ಹೀಗಾಗಿ, ಸೌದಿ ಅರೇಬಿಯಾದವರು ಭಾರತಕ್ಕೆ ಬಂದರೆ ಮೂರು ವರ್ಷಗಳ ಕಾಲ ಪ್ರಯಾಣಕ್ಕೆ ನಿಷೇಧ ಹೇರಲಾಗುತ್ತದೆ ಎಂದು ಹೇಳಿತ್ತು.