ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯರ ದಿನಾಚರಣೆಗೆ ಸಚಿವ ಶ್ರೀರಾಮುಲು ಶುಭಾಶಯ

|
Google Oneindia Kannada News

ಬೆಂಗಳೂರು, ಜುಲೈ 1: ಆರೋಗ್ಯ ಸಚಿವ ಶ್ರೀರಾಮುಲು ವೈದ್ಯರ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ. ವೈದ್ಯರ ಸೇವೆಯನ್ನು ನೆನೆದು ಮಾತನಾಡಿದ್ದಾರೆ.

ಒಬ್ಬ ಸೈನಿಕ ಹೇಗೆ ದೇಶವನ್ನು ಕಾಯುತ್ತಾನೋ ಹಾಗೆ ಜಗತ್ತಿನ ಜನರ ಜೀವ ಉಳಿಸುವ ಕೆಲಸವನ್ನು ಡಾಕ್ಟರ್ಸ್ ಮಾಡುತ್ತಾರೆ. ವೈದ್ಯೋ ನಾರಾಯಣೋ ಹರಿ ಅಂತೀವಿ ಎಂದು ಶ್ರೀರಾಮುಲು ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌? ಶ್ರೀರಾಮುಲು ಹೇಳಿದ್ದೇನು?ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌? ಶ್ರೀರಾಮುಲು ಹೇಳಿದ್ದೇನು?

ಪ್ರಾಣ ಕೊಡೋ ದೇವರು ಪ್ರಾಣ ಉಳಿಸೋ ಡಾಕ್ಟರ್ಸ್ ಒಂದೇ. ನೂರಾರು ವರ್ಷಗಳ ಹಿಂದೆ ಪ್ಲೇಗ್ ಬಂದಾಗ, 10 ವರ್ಷದ ಹಿಂದೆ h1n1 ಬಂದಿದ್ದಾಗ, ಈಗ ಕೊರೊನ ಬಂದಿರುವ ಈ ಸಂದರ್ಭದಲ್ಲೂ ಡಾಕ್ಟರ್ಸ್ ಹೇಳೋಕೆ ಸಾಧ್ಯವಿಲ್ಲದಷ್ಟು ಕೆಲಸ ಮಾಡಿದ್ದಾರೆ.ತಮಗೆ ಕುಟುಂಬ ಇದ್ದರೂ ಕೂಡ ಜನರಿಗಾಗಿ ಪ್ರಾಣ ಮುಡಿಪಾಗಿ ಇಟ್ಟಿದ್ದಾರೆ ಎಂದಿದ್ದಾರೆ.

Health Minister Sriramulu Wishes For Doctors Day

ಕೊರೊನಾ ಈ ಸಂದರ್ಭದಲ್ಲಿ ನಾನು 30 ಜಿಲ್ಲೆ ಸುತ್ತಿದ್ದೇನೆ. ಈ ವೇಳೆ ಸುಮಾರು ವೈದ್ಯರನ್ನು ಮಾತನಾಡಿದ್ದೇನೆ.ಅವರೆಲ್ಲ ಧೈರ್ಯದಿಂದ ಚಿಕಿತ್ಸೆ ಕೊಡ್ತಾ ಇದ್ರು. ನಮಗೆ ಭರವಸೆ ತುಂಬಿದ್ದೇ ಅವರಲ್ಲಿದ್ದ ಧೈರ್ಯ. ನನ್ನ ಉಸಿರು ಇರುವವೆಗೂ ಅವರನ್ನು ನಾನು ಮರೆಯಲ್ಲ. ಅವರೆಲ್ಲ ಕಣ್ಣಿಗೆ ಕಂಡ ದೇವರು. ಎಲ್ಲ ವೈದ್ಯರಿಗೂ ಅವರ ಕುಟುಂಬಕ್ಕೂ ವೈದ್ಯ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

English summary
Health Minister of karnataka Sriramulu wishes for doctors day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X