ಕೊರೊನಾವೈರಸ್ ನಿಂದ ಗುಣಮುಖರಾದ ಆರೋಗ್ಯ ಸಚಿವ ಶ್ರೀರಾಮುಲು
ಬೆಂಗಳೂರು,
ಆಗಸ್ಟ್.16:
ಕಳೆದ
ಒಂದು
ವಾರಗಳ
ಕಾಲ
ನೀಡಿದ
ಚಿಕಿತ್ಸೆ
ಫಲಕಾರಿಯಾಗಿದ್ದು
ಆರೋಗ್ಯ
ಸಚಿವ
ಶ್ರೀರಾಮುಲು
ಅವರು
ಕೊರೊನಾವೈರಸ್
ಸೋಂಕಿನಿಂದ
ಗುಣಮುಖರಾಗಿದ್ದಾರೆ.
ಬೆಂಗಳೂರಿನ
ಬೋರಿಂಗ್
ಆಸ್ಪತ್ರೆಯಿಂದ
ಭಾನುವಾರ
ಅವರು
ಡಿಸ್ಚಾರ್ಜ್
ಆಗಿದ್ದಾರೆ.
"ಆತ್ಮೀಯರೆ,
ನಿಮ್ಮೆಲ್ಲರ
ಶುಭ
ಹಾರೈಕೆಯಿಂದ
ಕೋವಿಡ್
ಸೋಂಕಿನಿಂದ
ಸಂಪೂರ್ಣವಾಗಿ
ಗುಣಮುಖನಾಗಿ
ಆಸ್ಪತ್ರೆಯಿಂದ
ಬಿಡುಗಡೆಯಾಗಿದ್ದೇನೆ.
ಕೋವಿಡ್
ಸೋಂಕು
ದೃಢಪಟ್ಟಾಗ
ನಮ್ಮ
ಸರ್ಕಾರಿ
ಸ್ವಾಮ್ಯದ
ಬೌರಿಂಗ್
ಆಸ್ಪತ್ರೆಗೆ
ದಾಖಲಾದೆ.
ಅಲ್ಲಿನ
ಅತ್ಯುತ್ತಮ
ಚಿಕಿತ್ಸೆಯಿಂದ
ಶೀಘ್ರವಾಗಿ
ಗುಣಮುಖನಾಗಿದ್ದೇನೆ"
ಎಂದು
ಆರೋಗ್ಯ
ಸಚಿವ
ಶ್ರೀರಾಮುಲು
ಟ್ವೀಟ್
ಮಾಡಿದ್ದಾರೆ.
Recommended Video
ಕೊವಿಡ್19
ಆಸ್ಪತ್ರೆಯಲ್ಲೇ
ಕಡತ
ಪರಿಶೀಲಿಸಿದ
ಆರೋಗ್ಯ
ಸಚಿವ
ಶ್ರೀರಾಮುಲು
"ಬೌರಿಂಗ್
ಮತ್ತು
ಲೇಡಿ
ಕರ್ಜನ್
ಆಸ್ಪತ್ರೆಗಳ
ತಜ್ಞವೈದ್ಯರ
ತಂಡ
ಮತ್ತು
ವೈದ್ಯಕೀಯ
ಸಿಬ್ಬಂದಿ
ನೀಡಿದ
ಕಾಳಜಿಪೂರ್ಣ
ಚಿಕಿತ್ಸೆ,
ಪ್ರೀತಿಪೂರ್ವಕ
ಆರೈಕೆಯಿಂದ
ಹೃದಯ
ತುಂಬಿ
ಬಂದಿದೆ,
ನನ್ನನ್ನು
ಮೂಕನನ್ನಾಗಿಸಿದೆ.
ಅವರೆಲ್ಲರಿಗೂ
ಎಷ್ಟು
ಕೃತಜ್ಞತೆ
ಹೇಳಿದರೂ
ಸಾಲದು"
ಎಂದು
ಸಚಿವರು
ಟ್ವಿಟರ್
ನಲ್ಲಿ
ಬರೆದುಕೊಂಡಿದ್ದಾರೆ.
ಪ್ರೀತಿಪಾತ್ರರಿಗೆ
ಧನ್ಯವಾದ
ಸಲ್ಲಿಸಿದ
ಆರೋಗ್ಯ
ಸಚಿವರು:
"ಆಸ್ಪತ್ರೆಯಲ್ಲಿದ್ದಷ್ಟೂ
ಕಾಲ
ನನ್ನ
ಆರೋಗ್ಯಕ್ಕಾಗಿ
ಪ್ರಾರ್ಥಿಸಿದ
ಬಂಧುಗಳು,
ಸ್ನೇಹಿತರು,
ಹಿತೈಷಿಗಳು
ಹಾಗೂ
ಅಭಿಮಾನಿಗಳೆಲ್ಲರಿಗೂ
ಕೃತಜ್ಞತೆಗಳು.
ಇದೇ
ಸಂದರ್ಭದಲ್ಲಿ,
ತಮ್ಮ
ಸಂಪೂರ್ಣ
ಸಹಕಾರ
ನೀಡಿದ
ಮಾನ್ಯ
ಮುಖ್ಯಮಂತ್ರಿಗಳು
ಹಾಗೂ
ಸಹೋದ್ಯೋಗಿಗಳಿಗೆ
ಹೃತ್ಪೂರ್ವಕ
ಧನ್ಯವಾದಗಳು"
ಎಂದು
ಟ್ವೀಟ್
ಮಾಡಿದ್ದಾರೆ.
ಕಳೆದ
ಆಗಸ್ಟ್.09ರಂದು
ಆರೋಗ್ಯ
ಸಚಿವ
ಶ್ರೀರಾಮುಲು
ಅವರಿಗೆ
ಕೊರೊನಾವೈರಸ್
ಸೋಂಕು
ತಗಲಿರುವುದು
ವೈದ್ಯಕೀಯ
ತಪಾಸಣೆ
ವೇಳೆ
ದೃಢಪಟ್ಟಿತ್ತು.
ಈ
ವೇಳೆ
ಬೆಂಗಳೂರಿನಲ್ಲೇ
ಇದ್ದ
ಸಚಿವರು
ಸರ್ಕಾರಿ
ಆಸ್ಪತ್ರೆಯಲ್ಲಿ
ಚಿಕಿತ್ಸೆಗೆ
ದಾಖಲಾಗಿದ್ದರು.