'ಎಲಿವೇಟೆಡ್ ಕಾರಿಡಾರ್ ಬೇಡ'ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ ಸಿಎಂ
ಬೆಂಗಳೂರು, ಮಾರ್ಚ್ 16: ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವುದರಿಂದ ಟ್ರಾಫಿಕ್ ಸಮಸ್ಯೆಗೆ ಶಾಸ್ವತ ಪರಿಹಾರ ದೊರೆಯಲಿದೆ ಎಂದಿರುವ ಸಿಎಂ ಕುಮಾರಸ್ವಾಮಿ ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.
ಎಲಿವೇಟೆಡ್ ಕಾರಿಡಾರ್ನಿಂದ ಮರಗಳಿಗಷ್ಟೇ ಅಲ್ಲ ಬಫರ್ ವಲಯಕ್ಕೂ ಅಪಾಯ
ರಾಜ್ಯ ಸಮ್ಮಿಶ್ರ ಸರ್ಕಾರದ ಕನಸಿನ ಕೂಸಾದ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ನೂರಾರು ವಿಘ್ನಗಳು ಎದುರಾಗುತ್ತಿವೆ.
ಎಲಿವೇಟೆಡ್ ಕಾರಿಡಾರ್ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?
ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ವಿರೋಧಿಸಿ ಸಿಟಿಜನ್ ಫಾರ್ ಬೆಂಗಳೂರು ಫೋರಂ ಮಾರ್ಚ್ 16ರಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ನಗರದಲ್ಲಿ ಸರ್ಕಾರದ ಎಲಿವೇಟೆಡ್ ಕಾರಿಡಾರ್ ಯೋಜನೆ ಪೂರ್ಣಗೊಳ್ಳಲು ಮೂರು ಸಾವಿರಕ್ಕೂ ಅಧಿಕರ ಮರಗಳು ಧರೆಗೆ ಉರುಳುತ್ತಿವೆ. ಜೊತೆಗೆ ಪ್ರಮುಖ ಕೆರೆಗಳ ಒತ್ತುವರಿಯಾಗುತ್ತಿದೆ. ಈ ಯೋಜನೆ ನಗರದ ವಾತಾವರಣದ ಮೇಲೆ ದುಷ್ಪರಿಣಾಮ ಬೀರಲಿದ್ದು, ಸರ್ಕಾರ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಮನವಿ ಮಾಡಲಾಗಿದೆ.
One of the biggest hurdles in Bengaluru's progress is traffic congestion.The #elevatedcorridor project is the solution to this.Some citizengroups r protesting agnst the project. My request to all is to come to me&raise their concerns.I will listen with an open mind to ur feedback
— H D Kumaraswamy (@hd_kumaraswamy) March 16, 2019
ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ ಮರಗಳ ಮಾರಣಹೋಮ ಮಾಡುವ ಬದಲು ಉಪನಗರ ರೈಲು, ಬಸ್ ಸಂಪರ್ಕ ವ್ಯವಸ್ಥೆ, ಮೆಟ್ರೋ ರೈಲನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಈ ಯೋಜನೆಯನ್ನು ಕೈಬಿಟ್ಟು ಸಮೂಹ ಸಾರಿಗೆಯತ್ತ ಹೆಚ್ಚು ಗಮನವಹಿಸಬೇಕು. ನಮಗೆ ಕಾಂಕ್ರೀಟ್ ಸಾಕು, ಸಮೂಹ ಸಾರಿಗೆ ಬೇಕು ಎಂದು ಆಗ್ರಹಿಸಿದ್ದಾರೆ.
ಬೃಂದಾ ಶ್ರೀಧರ್ ಎನ್ನುವವರು ಎಲಿವೇಟೆಡ್ ಕಾರಿಡಾರ್ ಬೇಡ ಎಂದು ಸಹಿ ಅಭಿಯಾನವನ್ನೂ ಕೂಡ ಆರಂಭಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೋರಾಟಗಾರರನ್ನು ಚರ್ಚೆಗೆ ಕರೆದು ಎಲಿವೇಟೆಡ್ ಕಾರಿಡಾರ್ನಿಂದ ಆಗುವ ಉಪಯೋಗವನ್ನು ಮನದಟ್ಟು ಮಾಡಿಕೊಡಲು ನಿರ್ಧರಿಸಿದ್ದಾರೆ. ಹೀಗಾಗಿ ಟ್ವಿಟ್ಟರ್ ಮೂಲಕ ಕುಮಾರಸ್ವಾಮಿಯವರು ಹೋರಾಟಗಾರರಿಗೆ ಆಹ್ವಾನ ನೀಡಿದ್ದಾರೆ.