ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸಾರಶರಧಿಯ ದಾಂಟಿಸಿ... ಕುಮಾರಸ್ವಾಮಿ ಟ್ವೀಟಿನ ಅರ್ಥ ಹುಡುಕುತ್ತ..!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ವಚನ ಚಳಚಳಿ ಹರಿಕಾರ ಬಸವಣ್ಣನವರ ವಚನವೊಂದನ್ನು ಟ್ವೀಟ್ ಮಾಡುವ ಮೂಲಕ ಅತೃಪ್ತ ಶಾಸಕರಿಗೆ ಬಿಸಿ ಮುಟ್ಟಿಸಿದ್ದಾರೆ. ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ತಲೆಕೆಡಿಸಿಕೊಂಡಿದ್ದ ಅನರ್ಹ ಶಾಸಕರಿಗೆ ಇಂದು ಸುಪ್ರೀಂ ಕೋರ್ಟ್ ರಿಲೀಫ್ ನೀಡಿತ್ತು. ಕರ್ನಾಟಕದಲ್ಲಿ ಅಕ್ಟೋಬರ್ 21 ರಂದು ನಡೆಯಬೇಕಿದ್ದ ಉಪಚುನಾವಣೆಗೆ ತಡೆ ನೀಡಿತ್ತು.

Recommended Video

ಡಿಕೆಶಿ ಬಂಧನವಾಗಿದ್ದರ ಹಿಂದೆ ಸಿದ್ದು ಮಾಸ್ಟರ್ ಪ್ಲಾನ್ ? | Oneindia Kannada

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಎಚ್ ಡಿ ಕುಮಾರಸ್ವಾಮಿ ಬಸವಣ್ಣನವರ ವಚನದ ಸಾಲುಗಳನ್ನು ಟ್ವೀಟ್ ಮಾಡಿದ್ದಾರೆ.

ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ; ಯಾರು, ಏನು ಹೇಳಿದರು?ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ; ಯಾರು, ಏನು ಹೇಳಿದರು?

"ಕಾಲಲಿ ಕಟ್ಟಿದ ಗುಂಡು
ಕೊರಳಲಿ ಕಟ್ಟಿದ ಬೆಂಡು
ತೇಲಲೀಯದು ಗುಂಡು
ಮುಳುಗಲೀಯದು ಬೆಂಡು
ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ
ಕೂಡಲಸಂಗಮ.

ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು" ಇವು ಎಚ್ ಡಿ ಕುಮಾರಸ್ವಾಮಿ ಅವರ ಟ್ವೀಟ್ ಸಾಲುಗಳು.

HD Kumaraswamy Tweet On Disqaualified MLAs

'ಅನರ್ಹ ಶಾಸಕರ ಪಾಡು, ಕಾಲಲ್ಲಿ ಗುಂಡು ಕಟ್ಟಿಕೊಂಡು, ಕೊರಳಲ್ಲಿ ಬೆಂಡು ಕಟ್ಟಿಕೊಂಡು ನೀರಲ್ಲಿ ಬಿದ್ದ ಪರಿಸ್ಥಿತಿಯಾಗಿದೆ. ಮುಳುಗೋಕೆ ಬೆಂಡು ಬಿಡೋಲ್ಲ, ತೇಲೋಕೆ ಗುಂಡು ಬಿಡೋಲ್ಲ! ಹೀಗಿರುವಾಗ ಸಂಸಾರದ ಸಾಗರವನ್ನು ನೀನೇ ದಾಟಿಸಬೇಕು ಕೂಡಲ ಸಂಗಮದೇವ' ಎಂಬುದು ಇದರ ತಾತ್ಪರ್ಯ.

ಸುಪ್ರೀಂ ಕೋರ್ಟ್ ನಿಂದ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸುಪ್ರೀಂ ಕೋರ್ಟ್ ನಿಂದ ಅನರ್ಹ ಶಾಸಕರಿಗೆ ಬಿಗ್ ರಿಲೀಫ್

ಈ ವಾಕ್ಯಗಳನ್ನು ಅನರ್ಹ ಶಾಸಕರ ಇಂದಿನ ಪರಿಸ್ಥಿತಿಗೆ ಹೋಲಿಸಿ ಎಚ್ ಡಿ ಕುಮಾರಸ್ವಾಮಿ ಅವರು ಉಲ್ಲೇಖಿಸಿದ್ದಾರೆ.

English summary
HD Kumaraswamy Tweet On Disqaualified MLAs,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X