ಸಕ್ಕರೆ ಉತ್ಪಾದನೆ: ಸರ್ಕಾರದಿಂದ ವರದಿ ಕೋರಿದ ಹೈಕೋರ್ಟ್
ಬೆಂಗಳೂರು, ನವೆಂಬರ್ 27: ಇನ್ನೇನು ತಣ್ಣಗಾಗಿದೆ ಎನ್ನುತ್ತಿರುವಾಗಲೇ ಸಕ್ಕರೆ ಸಮಸ್ಯೆ ಮತ್ತೆ ಉಲ್ಬಣಗೊಳ್ಳುವ ಲಕ್ಷಣ ಕಂಡುಬಂದಿದೆ.
ಮಂಗಳವಾರ ಹೈಕೋರ್ಟ್ ಕಳೆದ ವರ್ಷದ ಸಕ್ಕರೆ ಉತ್ಪಾದನೆ ಕುರಿತಂತೆ ರಾಜ್ಯ ಸರ್ಕಾರದ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ. ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ರಾಜ್ಯ ಸರ್ಕಾರದಿಂದ 2017-18ರ ಸಕ್ಕರೆ ಉತ್ಪಾದನೆ ಕುರಿತು ವಿವರಣೆ ಕೇಳಿದ್ದು, ರಾಜ್ಯದ ಕಬ್ಬಿನ ಉತ್ಪಾದನೆ ಪ್ರಮಾಣ ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದಿಸಲಾದ ಸಕ್ಕರೆ ಹಾಗೂ ಅದರಿಂದ ವಿತರಣೆ ಕುರಿತಂತೆ ಸಮಗ್ರ ವರದಿ ಸಲ್ಲಿಸುವಂತೆ ಕೇಳಿದೆ.
ಕಬ್ಬು ಬಾಕಿ ಹಣ ಪಾವತಿಸುವಂತೆ ಕಿಸಾನ್ ಘಟಕದಿಂದ 'ಕೈ' ನಾಯಕರಿಗೆ ಪತ್ರ
ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ತನ್ನ ಬಳಿ ಇರುವ ಸಕ್ಕರೆ ಹರಾಜು ಹಾಕಲು ಅನುಮತಿ ಕೋರಿ ಹೈಕೋರ್ಟ್ಗೆ ಮೊರೆ ಹೋಗಿದೆ.
ಸಿಎಂ ಕುಮಾರಸ್ವಾಮಿಯಿಂದ ರೈತರ ದುರ್ಬಳಕೆ: ಸಂಸದ ಪ್ರತಾಪ್ ಸಿಂಹ
ಈಗಾಗಲೇ ಕಬ್ಬಿನ ಬಾಕಿ ಹಣ ಪಾವತಿ ಮಾಡುವಂತೆ ರೈತರು ಪ್ರತಿಭಟನೆ ನಡೆಸಿದ್ದರು, ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದರು, ಹೀಗಿರುವಾಗ ಇನ್ನೊಮ್ಮೆ ಸಕ್ಕರೆ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ.