ಆ್ಯಸಿಡ್ ಎರಚುತ್ತೀರಾ, 5 ಲಕ್ಷ ಕೊಡಲು ರೆಡಿಯಾಗಿ!
ಬೆಂಗಳೂರು, ಜುಲೈ, 10 : ಹಣಕಾಸಿನ ವಿಷಯದಲ್ಲಿ ಕಲಹ ಏರ್ಪಟ್ಟ ಕಾರಣ ಆಪ್ತ ಸ್ನೇಹಿತನ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಶಾಂತ್ ಎಂಬುವನಿಗೆ ಹೈಕೋರ್ಟ್ 5 ಲಕ್ಷ ರೂ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಶಾಂತ್ ಮೂಲತಃ ಮೈಸೂರಿನ ಗೋಕುಲದವನು. ಆತ ತನ್ನ ಸ್ನೇಹಿತ ಸತೀಶ್ ಭಟ್ ಬಳಿ ಮೊಬೈಲ್ ಅಂಗಡಿ ಪ್ರಾರಂಭಿಸಲು 4 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದನು. ಅದನ್ನು ಹಿಂತಿರುಗಿಸಲು ಕೇಳಿದ ಪರಿಣಾಮ ಪ್ರಶಾಂತ್ ಸತೀಶ್ ಮೇಲೆ ಮಲ್ಲಹಳ್ಳಿ ಹತ್ತಿರ ಆಸಿಡ್ ಎರಚಿ ಕೊಲೆ ಮಾಡಲು ಪ್ರಯತ್ನಿಸಿ ಪರಾರಿಯಾಗಲು ಯತ್ನಿಸಿದ್ದ. ಇದು ಸುಮಾರು 8 ವರ್ಷಗಳ ಹಿಂದೆ ಘಟಿಸಿತ್ತು [ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ]
ಈ ಘಟನೆ ಸೆಪ್ಟೆಂಬರ್ 2, 2007 ರಲ್ಲಿ 8 ವರ್ಷಗಳ ಹಿಂದೆ ನಡೆದಿತ್ತು. ಈ ಪ್ರಕರಣದ ವಿಚಾರಣೆಯನ್ನು ಮೈಸೂರಿನ ೩ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2010 ರ ಆಗಸ್ಟ್ 18 ರಂದು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿದ ಸರ್ಕಾರ ಶಿಕ್ಷೆ ನೀಡಲು ಕೋರಿತ್ತು [ಶಿಕ್ಷಕಿ ಮೇಲೆ ಆಸಿಡ್ ದಾಳಿ: ಭಗ್ನಪ್ರೇಮಿ ಬಂಧನ]
ಮೈಸೂರಿನ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾ. ಮೋಹನ್ ಶಾಂತನ್ ಅವರಿದ್ದ ವಿಭಾಗೀಯ ಪೀಠ, ಅಧೀನ ನ್ಯಾಯಾಲಯ ನೀಡಿದ್ದ 7 ವರ್ಷಗಳ ಜೈಲು ಶಿಕ್ಷೆ ಕಾಯಂಗೊಳಿಸಿದೆ. ಅಲ್ಲದೆ 50 ಸಾವಿರ ರೂ ಇದ್ದ ದಂಡದ ಮೊತ್ತವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಿದೆ. ಅಕಸ್ಮಾತ್ ಅಪರಾಧಿ ದಂಡ ಕಟ್ಟದಿದ್ದಲ್ಲಿ ಮತ್ತೆ 5 ವರ್ಷಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ.