ಬೆಂಗಳೂರಿಗೆ ಬಂತು ಹಾವೇರಿ ಕಾಂಗ್ರೆಸ್ ಕಿತ್ತಾಟ
ಬೆಂಗಳೂರು, ಮೇ 23 : ಹಾವೇರಿ ಕಾಂಗ್ರೆಸ್ ಗದ್ದಲ ಬೆಂಗಳೂರಿಗೆ ತಲುಪಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಸಚಿವ ಎಚ್.ಕೆ.ಪಾಟೀಲ್ ಮತ್ತು ಶಾಸಕ ಕೋಳಿವಾಡ ಅವರು ಕಾರಣ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಕಾಂಗ್ರೆಸ್ ಕಾರ್ಯರ್ತರು ಶುಕ್ರವಾರ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಹಾವೇರಿ
ಕಾಂಗ್ರೆಸ್
ಘಟಕದ
ಕಾರ್ಯಕರ್ತರು
ರಾಜಶೇಖರ
ಸಾಲೀಮಠ
ಅವರ
ನೇತೃತ್ವದಲ್ಲಿ
ಕೆಪಿಸಿಸಿ
ಕಚೇರಿ
ಮುಂದೆ
ಶುಕ್ರವಾರ
ಪ್ರತಿಭಟನೆ
ನಡೆಸಿದರು.
ಹಾವೇರಿ
ಕ್ಷೇತ್ರದಲ್ಲಿ
ಕಾಂಗ್ರೆಸ್
ಅಭ್ಯರ್ಥಿ
ಸಲೀಂ
ಅಹಮದ್
ಅವರ
ಸೋಲಿಗೆ
ರಾಣೆಬೆನ್ನೂರು
ಶಾಸಕ
ಕೋಳಿವಾಡ
ಮತ್ತು
ಗ್ರಾಮೀಣಾಭಿವೃದ್ಧಿ
ಸಚಿವ
ಹೆಚ್.ಕೆ
ಪಾಟೀಲ್
ಅವರು
ಕಾರಣ
ಎಂದು
ಪ್ರತಿಭಟನಾಕಾರರು
ಆರೋಪಿಸಿದರು.
ಕೋಳಿವಾಡ ಹಾಗೂ ಸಚಿವ ಹೆಚ್.ಕೆ ಪಾಟೀಲ್ ಹಾವೇರಿಯಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ. ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಆದ್ದರಿಂದ ಉಭಯ ನಾಯಕರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. [ಹಾವೇರಿಯಲ್ಲಿ ಗೆದ್ದವರು ಯಾರು?]
ನಾನು ಪಕ್ಷ ವಿರೋಧಿ ಕೆಲಸ ಮಾಡಿಲ್ಲ : ಹಾವೇರಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಕೆ.ಬಿ ಕೋಳಿವಾಡ, ನನಗೆ ಸಚಿವ ಸ್ಥಾನ ತಪ್ಪಿಸುವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಯಾವುದೇ ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಎಂದು ಹೇಳಿದರು.
ರಾಜ್ಯ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗಲಿದ್ದು, ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದ್ದರಿಂದ ನನಗೆ ಸಚಿವ ಸ್ಥಾನ ತಪ್ಪಿಸಲು ನನ್ನ ವಿರುದ್ಧ ಪಕ್ಷ ವಿರೋಧಿ ಆರೋಪ ಹೊರಿಸಲಾಗುತ್ತಿದೆ. ವೈಯಕ್ತಿಕ ದ್ವೇಷದಿಂದ ಹಾವೇರಿ ಕಾಂಗ್ರೆಸ್ ಘಟಕದ ಸದಸ್ಯ ರಾಜಶೇಖರ್ ಸಾಲೀಮಠ ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೂರಿದರು.