ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್
'ನೀ ನನ್ನ ಕಣ್ಣಲೇ ಹರಸಿದೆ ನನ್ನ ಬಾನೆತ್ತರ ಬೆಳೆಸಿದೆ..' ಎಂದು ಆರಂಭಗೊಳ್ಳುವ ಸಾಲುಗಳುಳ್ಳ ವಿಶೇಷ ಗೀತೆ ವಿಶ್ವದ ಎಲ್ಲಾ ಅಮ್ಮಂದಿರಿಗೆ ಅರ್ಪಿತವಾಗಿದೆ. ಗಾಯಕ, ಸಂಗೀತಗಾರ ವಾಸು ದೀಕ್ಷಿತ್ ಅವರು ಸಂಯೋಜಿಸಿ ಹಾಡಿರುವ ಈ ಗೀತೆ 'ವಿಶ್ವ ಅಮ್ಮಂದಿರ ದಿನ' ಕ್ಕಾಗಿ ನಿಮ್ಮ ಮುಂದಿದೆ.
ಪ್ರತಾಪ್ ಸಿ ಅವರ ಅರ್ಥಪೂರ್ಣ ಸಾಹಿತ್ಯಕ್ಕೆ ಸಂಯೋಜನೆ ಒದಗಿಸಿ ದನಿ ನೀಡಿರುವ ವಾಸು ಅವರು ಹಾಡಿನ ಚಿತ್ರೀಕರಣವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿದ್ದಾರೆ. [ವಿಡಿಯೋ : ವಿಶ್ವ ತಾಯಂದಿರ ದಿನಕ್ಕೆ ಒನ್ ಇಂಡಿಯಾದಿಂದ ಕಾಣಿಕೆ]
ಅಮ್ಮನನ್ನು
ಕೂರಿಸಿಕೊಂಡು
ಮಕ್ಕಳು
ತಮ್ಮ
ತಾಯಿಯ
ಬಗ್ಗೆ
ಕೈ
ಸನ್ನೆಯಲ್ಲಿ
ವಿವರಿಸುವ
ರೀತಿ
ಅನನ್ಯವಾಗಿದೆ.
ಯಾವ
ಭಾಷೆ,
ಪದಕ್ಕೂ
ನಿಲುಕದ
ಸಂಬಂಧ,
ಅನುಬಂಧವನ್ನು
ಈ
ರೀತಿ
4.10
ನಿಮಿಷಗಳ
ವಿಡಿಯೋದಲ್ಲಿ
ತೋರಿಸಲಾಗಿದೆ.
ನೀ
ನನ್ನ
ಕಣ್ಣಲೇ
ಹರಸಿದೆ..
ನನ್ನ
ಬಾನೆತ್ತರ
ಬೆಳೆಸಿದೆ
ಕಲ್ಪನೆಗಳ
ಆಚೆಗೆ
ಸೆಳೆದೆ,
ಕಂಬನಿಗಳಿಗೆ
ಕೊಡೆ
ಹಿಡಿದು
ಅಂದು
ನೀ..
ಕಂಡ
ಕನಸು
ನಾನಲ್ಲವೇ
ಅಮ್ಮ...
ಅಮ್ಮ...
ಅಮ್ಮ
ಮೊದಲ
ನೋಡದ
ಅರಿವೇ
ಇಲ್ಲ
ಎಡವಿದಾಗ
ನಡೆಸಿದೆ
ಮೆಲ್ಲ
ತುಂಬು
ಪ್ರೀತಿಯ
ಚಿಲುಮೆಯ
ಹರಿಸಿ
ನನ್ನ
ಮುಖದಲ್ಲಿ
ನಗುವನ್ನು
ತರಿಸಿ
ಆಸೆಗಳಿಗೆ
ನೀರೆರೆದು,
ನೋವುಗಳ
ತಡೆಹಿಡಿದು
ಸೋಲುಗಳಲ್ಲಿ
ಜೊತೆ
ನಿಂತು
ಗುರಿಯೆಡೆಗೆ
ಕೈ
ಹಿಡಿದು
ನೀ
ಅಕ್ಕರೆಯ
ಸಿಹಿ
ಇನ್ನೆಲ್ಲಿದೆ
ಅಮ್ಮ....ಅಮ್ಮ...
ಅಮ್ಮ...(ನೀ
ನನ್ನ
ಬಾಳ
ಬೆಳಗಿದೆ...)
ಬೆಂಗಳೂರು
ಮೂಲದ
ಮ್ಯೂಸಿಕಲ್
ಬ್ಯಾಂಡ್
ಸ್ವರಾತ್ಮದ
ಭಾಗವಾಗಿರುವ
ವಾಸು
ದೀಕ್ಷಿತ್
ಅವರು
ಗಾಯಕ
ಹಾಗೂ
ಗಿಟಾರಿಸ್ಟ್
ಆಗಿ
ಜನಪ್ರಿಯರಾಗಿದ್ದಾರೆ.
[ಅಮ್ಮಂದಿರ
ಪ್ರಪಂಚ
ಚಿಕ್ಕದು,
ಪ್ರೀತಿ
ಅಳತೆಗೆ
ಸಿಗದು]
ಗಾಯಕ ರಘು ದೀಕ್ಷಿತ್ ಅವರ ಸೋದರ ವಾಸು ಅವರು ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮಕಾವ್ಯಂ ಕನ್ನಡ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.