ನಟನೆ ಕಲಿಸಿಕೊಡಿ ಎಂದು ಪ್ರಕಾಶ್ ರೈರನ್ನು ಕೇಳಿದ ಜಿಗ್ನೇಶ್
ಬೆಂಗಳೂರು, ಜನವರಿ 29 : ಪತ್ರಕರ್ತೆ ಗೌರಿ ಲಂಕೇಶ್ ಅವರ ಜನ್ಮದಿನದ ಅಂಗವಾಗಿ ಗೌರಿ ದಿನವನ್ನು ಆಚರಿಸಲು ಗುಜರಾತಿನಿಂದ ವಡ್ಗಾಮ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಆಗಮಿಸಿದ್ದರು.
ಸೋಮವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಪುರಭವನದಲ್ಲಿ ನಡೆದ ಗೌರಿ ದಿನ ಆಚರಣೆಯಲ್ಲಿ ಶಾಸಕ ಜಿಗ್ನೇಶ್ ಮೇವಾನಿ, ಕನ್ಹಯ್ಯಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ , ಕವಿತಾ ಲಂಕೇಶ್, ನಟ ಪ್ರಕಾಶ್ ರೈ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ವಿಮರ್ಶಕ ರಹಮತ್ ತರೀಕರೆ, ಬರಹಗಾರ್ತಿ ಕೆ.ನೀಲಾ ಮುಂತಾದವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರೊಟ್ಟಿಗೆ ಫೋಟೊ ತೆಗೆಸಿಕೊಂಡ ಜಿಗ್ನೇಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ಜತೆಗೆ ಹಾಕಿರುವ ಸಂದೇಶ ಬಿಜೆಪಿ ಬೆಂಬಲಿಗರನ್ನು ತಕ್ಕಮಟ್ಟಿಗೆ ಕೆರಳಿಸಿದೆ. ಪ್ರಕಾಶ್ ರಾಜ್ ಅವರಿಂದ ನಟನೆ ಬಗ್ಗೆ ಒಂದೆರಡು ಸಲಹೆಗಳನ್ನು ಪಡೆದುಕೊಂಡೆ. ಅವರು ನಟನೆ ಬಗ್ಗೆ ಬೇಕಾದರೆ ಸಾಹೇಬ್ -ದೇಶದ ನಟ ಸಾಮ್ರಾಟ್ ಅವರಿಂದ ಸಲಹೆ ಪಡೆದುಕೊಳ್ಳಿ ಎಂದರು ಎಂದು ಟ್ವೀಟ್ ಮಾಡಿದ್ದಾರೆ. ಇಲ್ಲಿ ಸಾಹೇಬ್ ಎಂದು ಪರೋಕ್ಷವಾಗಿ ಮೋದಿ ಅವರ ಹೆಸರನ್ನು ಬಳಸಿಕೊಳ್ಳಲಾಗಿದೆ.
Modi is not an actor. He works for the country selflessly. Few ppl doesnt like to see success when non cong govt does. Thats their problem , not Modis. Many people will bark against Modi. It is like a dog barking looking at Sun. Nothing will happen to Sun, and so is to Modi
— M Subramani (@hindustani_m) January 29, 2018
ಈ ಬಗ್ಗೆ ಮೋದಿ ಬೆಂಬಲಿಗರೊಬ್ಬರು ಪ್ರತಿಕ್ರಿಯಿಸಿ, ಮೋದಿ ಅವರು ದೇಶಕ್ಕಾಗಿ ದುಡಿಯುತ್ತಿದ್ದಾರೆ. ಅವರು ನಟಿಸುತ್ತಿಲ್ಲ ಎಂದಿದ್ದಾರೆ.
ಗೌರಿ ದಿನ: ಮೋದಿಯನ್ನು ಕರ್ನಾಟಕದೊಳಗೆ ಬಿಡಬಾರದು ಎಂದ ದೊರೆಸ್ವಾಮಿ
ಅಂದ ಹಾಗೆ, ಜಿಗ್ನೇಶ್ ಅವರು ಮದ್ರಾಸ್, ಕಬಾಲಿ ಹಾಗೂ ಈಗ ಕಾಲ ಖ್ಯಾತಿಯ ಪಾ. ರಂಜಿತ್ ನಿರ್ದೇಶನದ ತಮಿಳು ಚಿತ್ರವೊಂದರಲ್ಲಿ ಸಣ್ಣ ಪಾತ್ರ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಮುಂಬೈಯಲ್ಲಿರುವ ತಮಿಳು ಜನರ ಬವಣೆ ಬಗ್ಗೆ ಈ ಕಥೆ ಇರಲಿದೆ ಎಂಬ ಸುದ್ದಿಯಿದೆ.