ಕಾರ್ಪೊರೇಟರ್ ಪತಿಯಿಂದ ಅಕ್ರಮ ಒತ್ತುವರಿ: ತೆರವುಗೊಳಿಸಿದ ಅಧಿಕಾರಿಗಳು
ಬೆಂಗಳೂರು, ನವೆಂಬರ್ 17: ಕಾರ್ಪೊರೇಟರ್ ಪತಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ನಾಲ್ಕು ಎಕರೆ ಭೂಮಿಯನ್ನು ಹೈಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸರ ಭದ್ರತೆಯಲ್ಲಿ ಜಿಲ್ಲಾಧಿಕಾರಿಗಳು ಶನಿವಾರ ತೆರವುಗೊಳಿಸಿದರು.
ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು
ಜಯನಗರ ಕಾರ್ಪೊರೇಟರ್ ನಾಗರತ್ನ ಅವರ ಪತಿ ರಾಮಮೂರ್ತಿ ಆನೇಕಲ್ ಸಮೀಪದ ಭೂತನಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಾಲ್ಕು ಎಕರೆ ಅರಣ್ಯವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದರು. ಅಷ್ಟೇ ಅಲ್ಲದೆ ಅಲ್ಲಿ ಒಂದು ಫಾರ್ಮ್ ಹೌಸ್ ಹಾಗೂ ಕೃಷಿ ಚಟುವಟಿಕೆಗಳನ್ನೂ ಕೂಡ ನಡೆಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ದಿಢೀರ್ ಎಚ್ಚೆತ್ತ ಪಾಲಿಕೆಯಿಂದ 400 ಶೆಡ್ ತೆರವು, 1500 ಜನ ಬೀದಿಗೆ
ನಾಲ್ಕು ಎಕರೆ ಪ್ರದೇಶ ಸುಮಾರು 8ಕೋಟಿ ರೂ ಬೆಲೆಬಾಳುತ್ತದೆ. ಈ ಹಿಂದೆ ಜಿಲ್ಲಾಧಿಕಾರಿ ಶಂಕರ್ ಅವರು ಸಾಕಷ್ಟು ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದ್ದರು ಬಳಿಕ ಸರ್ಕಾರಕ್ಕೂ ಅದು ತಲೆನೋವಾಗಿ ಪರಿಣಮಿಸಿತ್ತು ಆದರೆ ಈಗ ಜಿಲ್ಲಾಧಿಕಾರಿ ಬದಲಾದ ನಂತರ ಒತ್ತುವರಿ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಇದು ಅರಣ್ಯಭೂಮಿಯಾದ ಕಾರಣ ಅರಣ್ಯ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಏರಿದ್ದರು ಶೀಘ್ರವೇ ಆ ಒತ್ತುವರಿಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ಸೂಚನೆ ನೀಡುತ್ತು ಅದರ ಪರಿಣಾಮ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಒತ್ತುವರಿ ತೆರವು ಕಾರ್ಯ ನಡೆಸಲಾಗುತ್ತಿದೆ.