ಸರ್ಕಾರ ಉರುಳಬೇಕು ಎನ್ನುವುದು ನನ್ನ ಅಭಿಪ್ರಾಯ: ಕೆಎನ್ ರಾಜಣ್ಣ
ಬೆಂಗಳೂರು, ಜುಲೈ 20: ಮೈತ್ರಿ ಮಾಡಿಕೊಂಡು ನಾವು ನೆಲ ಕಚ್ಚಿದ್ದೇವೆ, ಸರ್ಕಾರ ಉರುಳಬೇಕೆನ್ನುವುದು ನನ್ನ ಅಭಿಪ್ರಾಯ ಎಂದು ಕಾಂಗ್ರೆಸ್ನ ಮಾಜಿ ಶಾಸಕ ಕೆಎನ್ ರಾಜಣ್ಣ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ.ಸರ್ಕಾರ ಉರುಳಬೇಕೆಂದು ನಾನು ಹೇಳುತ್ತೇನೆ ಎಂದರು.
ಮೊದಲೇ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ನಮ್ಮ ಮೊದಲ ತಪ್ಪು , ಈಗ ಸರ್ಕಾರ ಬೀಳಬೇಕು ತಪ್ಪು ಅರಿವಾಗಬೇಕು ಎಂದರು. ಕೆಎನ್ ರಾಜಣ್ಣ ಮಾಜಿ ಮುಖ್ಯಮಮತ್ರಿ ಸಿದ್ದರಾಮಯ್ಯನ ಆಪ್ತ ಎಂದೇ ಗುರುತಿಸಿಕೊಂಡಿದ್ದು, ಕೆಲವು ಬಾರಿ ಅವರು ಜೆಡಿಎಸ್ಗೆ ಸೇರ್ತಾರೆ ಎನ್ನುವ ಮಾತುಗಳೂ ಕೇಳಿಬಂದಿತ್ತು.
ರಾಜಣ್ಣನವರಿಗೆ ತಮ್ಮನ್ನು ಮಂತ್ರಿ ಮಾಡಲಿಲ್ಲ ಎನ್ನುವ ಕೋಪವೂ ಕೂಡ ಇತ್ತು ಎನ್ನಲಾಗಿತ್ತು. ಈಗ ಮತ್ತೊಮ್ಮೆ ಸುದ್ದಿಯಲ್ಲಿರುವ ಅವರು ಸಮ್ಮಿಶ್ರ ಸರ್ಕಾರ ಬೀಳಲಿ ಎಂದು ಆಶಿಸಿದ್ದಾರೆ.
ಸೋಮವಾರವೂ ವಿಶ್ವಾಸಮತ ಯಾಚನೆ ಮಾಡುವುದು ಡೌಡು ಎನ್ನಲಾಗುತ್ತಿದೆ. ಸಾಧ್ಯವಾದರೆ ಚರ್ಚೆ ಮುಂದುವರೆಸೋಣ ಎಂದು ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಚರ್ಚೆಯ ಹೆಸರಿನಲ್ಲಿ ಮತ್ತಷ್ಟೂ ವಿಳಂಬವಾಗುವ ಸಾಧ್ಯತೆ ಇರುತ್ತದೆ.