ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ಸಂಪ್‌ನಲ್ಲಿ ಬಾಲಕಿ ಮೃತದೇಹ ಪತ್ತೆ, ವಾಮಾಚಾರ ಶಂಕೆ

|
Google Oneindia Kannada News

ಬೆಂಗಳೂರು, ಮೇ 7: ನೀರಿನ ಸಂಪ್‌ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿರುವ ಘಟನೆ ನಗರದ ರಾಜಗೋಪಾಲನಗರದಲ್ಲಿ ಮಂಗಳವಾರ ನಡೆದಿದೆ. ಬಾಲಕಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಾಲಕಿ ಸಾವಿಗೆ ಮನೆಯ ಮಾಲಿಕನೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಜ್ಯೋತಿ ಮೃತ ಬಾಲಕಿ.ಮನೆಯ ಮಾಲೀಕ ಈ ಹಿಂದೆ ಒಮ್ಮೆ ಮನೆಯಲ್ಲಿ ಗ್ರಹಚಾರವಿದೆ ಅದಕ್ಕೆ ನರಬಲಿಕೊಡಬೇಕು ಎನ್ನುವ ಮಾತನಾಡಿದ್ದರು, ನಾವೆಲ್ಲಾ ಯಾಕೆ ತಮಾಷೆ ಮಾಡುತ್ತೀರ ಸುಮ್ಮನಿರಿ ಎಂದು ಸುಮ್ಮನಾಗಿದ್ದೆವು ಆದರೆ ಅವರು ತಮ್ಮ ಮಗಳನ್ನು ಬಲಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಖಾಸಗಿ ವಿಮಾನ ಪತನವಾಗಿ ಹದಿನಾಲ್ಕು ಮಂದಿ ಸಾವನ್ನಪ್ಪಿರುವ ಶಂಕೆಖಾಸಗಿ ವಿಮಾನ ಪತನವಾಗಿ ಹದಿನಾಲ್ಕು ಮಂದಿ ಸಾವನ್ನಪ್ಪಿರುವ ಶಂಕೆ

ಮನೆ ಮಾಲೀಕ ಅಲ್ಫರಾಜ್ ವಿರುದ್ಧ ದೂರು ನೀಡಲಾಗಿದೆ. ಜ್ಯೋತಿ ತಂಗಿ ಮಾಹಿತಿ ನೀಡಿದ ಪ್ರಕಾರ ಜ್ಯೋತಿ ನೀರಿಗೆ ಬೀಳುವಾಗ ತಾನು ಅಲ್ಲಿಯೇ ಇದ್ದೆ,ಮಾಲೀಕ ಕೂಡ ಅಲ್ಲೇ ಇದ್ದ, ಆಕೆಯನ್ನು ಕಾಪಾಡುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಸತ್ತರೆ ಸಾಯಲಿ ಬಿಡು ಎಂದು ಕೋಪದಿಂದ ಆತ ನುಡಿದಿದ್ದ , ಅಕ್ಕನ ಸಾವಿಗೆ ಅಲ್ಫರಾಜ್ ಕಾರಣ ಎಂದಿದ್ದಾಳೆ.

Girl found dead in water sump in Rajagopalanagar

ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, 9.30ರ ಸುಮಾರಿಗೆ ಸಂಪ್ ಬಾಗಿಲು ತೆರೆದು ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಆದರೆ ಆ ಸಂಪ್ ಗಮನಿಸಿದರೆ ಯಾರೂ ಕೂಡ ಜಾರಿ ಬೀಳಲು ಸಾದ್ಯವೇ ಇಲ್ಲ ಎನ್ನುವುದು ತಿಳಿದುಬರುತ್ತದೆ.

English summary
A girl Jyothi suspicious death at Rajagopalanagar in Bengaluru, Girl found dead in water sump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X