ಜೆಪಿ ನಗರದ ಗಣೇಶನಿಗೆ 4000 ಕೆಜಿ ತೂಕದ 'ಮಹಾ ಲಡ್ಡು'
Recommended Video
ಬೆಂಗಳೂರು, ಸೆಪ್ಟೆಂಬರ್ 08: ಮೋದಕ ಪ್ರಿಯ, ಲಡ್ಡು ಪ್ರಿಯ ಗಜಮುಖ ಗಣೇಶನಿಗೆ ಎಷ್ಟು ನೈವೇದ್ಯ ಕೊಟ್ಟರೂ ಸಾಲದು, ಪ್ರತಿ ಬಾರಿ ವಿಶಿಷ್ಟವಾಗಿ ಗಣೇಶ ಹಬ್ಬ ಆಚರಿಸುವ ಜೆಪಿ ನಗರದ ನಿವಾಸಿಗಳು ಈ ಬಾರಿ ಗಣೇಶನಿಗೆ ಬೃಹತ್ ಲಡ್ಡು ಅರ್ಪಿಸಲು ಮುಂದಾಗಿದ್ದಾರೆ.
ಗಣೇಶ ಚತುರ್ಥಿಯ ಪ್ರಯುಕ್ತ ಜೆಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ 4 ಸಾವಿರ ಕೆಜಿ ಬೃಹದಾಕಾರದ ಲಾಡು ಹಾಗೂ ಪರಿಸರ ಸ್ನೇಹಿ 30 ಅಡಿ ಎತ್ತರದ ಕಬ್ಬಿನ ಗಣಪತಿ ಪ್ರತಿಷ್ಠಾಪನೆ ವಿಶೇಷವಾಗಿದೆ.
ಗಣೇಶ
ಚತುರ್ಥಿಯ
ಅಂಗವಾಗಿ
ನಗರದಲ್ಲಿ
ಪ್ರಪ್ರಥಮ
ಬಾರಿಗೆ
ಜೆಪಿ
ನಗರದ
ಪುಟ್ಟೇನಹಳ್ಳಿಯಲ್ಲಿರುವ
ಶ್ರೀ
ಸತ್ಯ
ಸಾಯಿ
ಗಣಪತಿ
ದೇವಸ್ಥಾನದಲ್ಲಿ
4
ಸಾವಿರ
ಕೆಜಿ
ತೂಕದ
ಬೃಹದಾಕಾರದ
ಲಾಡು
ನಿರ್ಮಿಸಲು
ಸಕಲ
ಸಿದ್ದತೆಗಳನ್ನು
ಮಾಡಿಕೊಳ್ಳಲಾಗಿದೆ
ಎಂದು
ದೇವಸ್ಥಾನದ
ಟ್ರಸ್ಟಿ
ರಾಮ್
ಮೋಹನ
ರಾಜ್
ತಿಳಿಸಿದ್ದಾರೆ.
ಗಣೇಶ
ಹಬ್ಬದ
ನಂತರ
ಈ
ಲಾಡುವನ್ನು
ಭಕ್ತರಿಗೆ
ನೀಡಲು
ದೇವಸ್ಥಾನದ
ಮಂಡಳಿ
ನಿರ್ಧರಿಸಿದೆ.
ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡಬೇಕು
ಪ್ರತಿಬಾರಿ ಏನಾದರೂ ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ 4 ಸಾವಿರ ತೂಕದ ಬೃಹತ್ ಲಾಡು ನಿರ್ಮಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ಈ ಬೃಹತ್ ಗಾತ್ರದ ಲಾಡು ನಿರ್ಮಿಸಲು 1000 ಕೆಜಿ ಕಡಲೆ ಹಿಟ್ಟು, 2000 ಕೆಜಿ ಸಕ್ಕರೆ, 700 ಕೆಜಿ ಸನ್ ಪ್ಯೂರ್ ಎಣ್ಣೆ, 300 ಕೆಜಿ ತುಪ್ಪ, 50 ಕೆಜಿ ಗೋಡಂಬಿ, 50 ಕೆಜಿ ಒಣ ದ್ರಾಕ್ಷಿ, 5 ಕೆಜಿ ಏಲಕ್ಕಿಯನ್ನು ಬಳಸಿ ಬೃಹತ್ ಗಾತ್ರದ ಲಾಡು ನಿರ್ಮಿಸಲಾಗುವುದು ಎಂದರು.
ಪರಿಸರ ಸ್ನೇಹಿಯಾಗಿ ಗಣೇಶ
ಅಲ್ಲದೆ, ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ಬಾರಿ 30 ಅಡಿ ಎತ್ತರದ ಕಬ್ಬಿನಲ್ಲಿಯೇ ನಿರ್ಮಿಸಲಾಗಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುವುದು. ಈ ಮೂರ್ತಿ ಪರಿಸರ ಸ್ನೇಹಿಯಾಗಿರಲಿದೆ. ಅಲ್ಲದೆ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯನ್ನು ಉಂಟು ಮಾಡದ ರೀತಿಯಲ್ಲಿ ನಿರ್ಮಿಸಲಾಗುವುದು ಎಂದರು.
ಬೃಹತ್ ಲಡ್ಡು ತಯಾರಿಸುವುದು
ಹೈದರಾಬಾದ್, ಮುಂಬೈ ಹಾಗೂ ಇನ್ನಿತರ ಕಡೆಗಳಲ್ಲಿ ಈ ರೀತಿ ಬೃಹತ್ ಲಡ್ಡು ತಯಾರಿಸುವುದು ಸಾಮಾನ್ಯ ಸಂಗತಿ ಎನ್ನಬಹುದು. ಈ ಹಿಂದೆ ಹೈದರಾಬಾದಿನ ಖೈರ್ತಾಬಾದ್ ನಲ್ಲಿ ೫೬ ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ೪ ಸಾವಿರ ತೂಕದ ಲಡ್ಡುವನ್ನು ನೈವೇದ್ಯ ಮಾಡಲಾಗಿತ್ತು.
ಸಾವಿರಾರು ಕೆಜಿ ತೂಕದ ಲಡ್ಡು ತಯಾರಿಕೆ
ಕನಿಷ್ಟ 1,600 ಕೆಜಿ ಸಕ್ಕರೆ, 1,000 ಕೆಜಿ ಚನ್ನದಾಲ್ ಅಥವಾ ಹಿಟ್ಟು, 50 ಕೆಜಿ ಗೋಡಂಬಿ, 50 ಕೆಜಿ ಒಣ ದ್ರಾಕ್ಷಿ, 5 ಕೆಜಿ ಏಲಕ್ಕಿ, ಕರ್ಪೂರ, ಎಸೆನ್ಸ್ ಬೇಕಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಸಾಮಾಗ್ರಿಗಳು ಬದಲಾಗಲಿವೆ, ಮುಂಬೈನಲ್ಲಿ ಬೃಹತ್ ಗಣೇಶ ಮೂರ್ತಿ, ಲಡ್ಡುಗಳಿಗೆ ವಿಮೆ ಕೂಡಾ ಮಾಡಿಸಲಾಗುತ್ತದೆ.