ಉಚಿತ ಊಟ, ನೀರು, ಮಾಸ್ಕ್ ಒದಗಿಸುವ ಘೋಷಣೆ ಮಾಡಿದ MLC ಶರವಣ
ಬೆಂಗಳೂರು, ಏಪ್ರಿಲ್ 3: ಕೊರೊನಾ ವೈರಾಣು ಹರಡದಿರುವಂತೆ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಮಧ್ಯೆ ಇಂದಿರಾ ಕ್ಯಾಂಟೀನ್ ಕೂಡ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದ್ದು, ಉಚಿತ ಊಟ ವಿತರಣೆ ಬಂದ್ ಆಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಉಚಿತ ಆಹಾರ, ನೀರು ಹಾಗೂ ಮಾಸ್ಕ್ ವಿತರಣೆಗೆ ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ನಿರ್ಧಾರ ಮಾಡಿದ್ದಾರೆ.
ಈ ಉದ್ದೇಶಕ್ಕಾಗಿ ಯಾರಿಗೆ ಅಗತ್ಯ ಇದೆಯೋ ಅವರ ಮನೆ ಬಾಗಿಲಿಗೇ ಆಹಾರ, ನೀರು, ಮಾಸ್ಕ್ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದು, ಅಪ್ಪಾಜಿ ಕ್ಯಾಂಟೀನ್ ವತಿಯಿಂದ ಉಚಿತವಾಗಿ ಈ ಸೌಲಭ್ಯ ಒದಗಿಸುವುದಾಗಿ ಶುಕ್ರವಾರದಂದು ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರ ಇದೆ.
ಯಾರಿಗೆ ಈ ಉಚಿತ ಸೇವೆಯ ಅಗತ್ಯ ಇದೆಯೋ ಅಂಥವರು 24 ಗಂಟೆ ಮುಂಚಿತವಾಗಿ ಕರೆ ಮಾಡಬೇಕು. ಬೆಂಗಳೂರಿನ ಯಾವುದೇ ಭಾಗದಿಂದ ಕರೆ ಮಾಡಿದರೂ ಈ ಉಚಿತ ಸೇವೆ ಸೌಲಭ್ಯವನ್ನು ಪಡೆಯಬಹುದು. ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆ 9901771122 ಹಾಗೂ 9008888665.
Comments
English summary
JDS leader and MLC TA Sharavana announced free meals, water and mask distribution to needy during Corona lock down. Here is the details.