ಫೆ.22 ರಿಂದ ಬೆಂಗಳೂರಿನಲ್ಲಿ ಎಪಿಕಾನ್- 2018 ಸಮ್ಮೇಳನ
ಬೆಂಗಳೂರು, ಫೆಬ್ರವರಿ 21: ಭಾರತೀಯ ವೈದ್ಯರ ಸಂಘವು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವೈದ್ಯ ಶಾಸ್ತ್ರ ತಂತ್ರಜ್ಞರ ಸಮ್ಮೇಳನ(ಎಪಿಕಾನ್ ) ವನ್ನು ಹಮ್ಮಿಕೊಂಡಿದೆ.
ಎಪಿಕಾನ್ ಫೆಬ್ರವರಿ 22 ರಿಂದ25 ರವರೆಗೆ ನಡೆಯಲಿದ್ದು, ಔಷಧ ಯುಗದಲ್ಲಿ ಹೊಸ ಆರಂಭ ಘೋಷವಾಕ್ಯದಡಿ ಸಮ್ಮೇಳನವನ್ನು ಆಯೋಜಿಸಲಾಗಿದೆ. 1998ರ ಬಳಿಕ ಬೆಂಗಳೂರಿನಲ್ಲಿ ಅಮ್ಮೇಳನ ಆಯೋಜಿಸುವ ಅವಕಾಶ ದೊರೆತಿದೆ ಎಂದು ಎಪಿಕಾನ್ ಸಂಘಟನಾ ಅಧ್ಯಕ್ಷ ಪ್ರೊ.ಎಂ.ಆರ್. ಮಯ್ಯ ಹೇಳಿದ್ದಾರೆ.
ಸಮ್ಮೇಳನವನ್ನು ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್ ಫೆ.22 ರಂದು ಸಂಜೆ 6.30 ಕ್ಕೆ ಉದ್ಘಾಟಿಸಲಿದ್ದಾರೆ. ಸಚಿವರಾದ ಡಾ. ಸರಣ ಪ್ರಕಾಶ್ ಪಾಟೀಲ್, ಕೃಷ್ಣಭೈರೇಗೌಡ, ಎಪಿಐನ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರೀತಮ್ ಗುಪ್ತಾ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನಕ್ಕೆ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾ ಸೇರಿದಂತೆ ಇತರೆ ರಾಷ್ಟ್ರಗಳಿಂದ 20 ಮಂದಿ ವೈದ್ಯ ತಜ್ಞರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದಲ್ಲಿ ಭಾಗವಹಿಸಲಿರುವ ದೇಶ, ವಿದೇಶಗಳ ತಜ್ಞ ವೈದ್ಯರಿಗೆ ಕನ್ನಡ ನಾಡಿನ ಕಲೆ,ಸಂಸ್ಕೃತಿ ಪರಿಚಯಿಸಲಾಗುವುದು. ಡೆಂಘಿ, ಚಕೂನ್ ಗುನ್ಯ, ಎಚ್1ಎನ್1 ಕಾಯಿಲೆಗಳ ಬಗ್ಗೆಯೂ ಚರ್ಚೆಗಳು ನಡೆಯಲಿದೆ.