ನಿವೃತ್ತ ಲೋಕಾಯುಕ್ತ ಎನ್. ವೆಂಕಟಾಚಲ ವಿಧಿವಶ
Recommended Video
ಬೆಂಗಳೂರು, ಅಕ್ಟೋಬರ್ 30: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಿವೃತ್ತ ಲೋಕಾಯುಕ್ತ ಎನ್. ವೆಂಕಟಾಚಲ ಅವರು ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ನಿಧನರಾದ ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕೋಲಾರದ ಮುಳಬಾಗಿಲಿನ ಮಿತ್ತೂರ್ ಎಂಬಲ್ಲಿ 1930, ಜುಲೈ 3 ರಂದು ಜನಿಸಿದ ನ್ಯಾ.ನಂಜೇಗೌಡ ವೆಂಕಟಾಚಲ ಅವರು ಬಿಎಸ್ಸಿ, ಬಿ ಎಲ್ ಪದವಿ ಪಡೆದಿದ್ದರು. 1955 ರಲ್ಲಿ ಕರ್ನಾಟಕ(ಮೈಸೂರು ರಾಜ್ಯ) ಹೈಕೋರ್ಟ್ ನ ವಕೀಲರಾಗಿದ್ದ ಅವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.
ಕೋಲಾರದ ಮುಳಬಾಗಿಲಿನ ಮಿತ್ತೂರ್ ಎಂಬಲ್ಲಿ 1930, ಜುಲೈ 3 ರಂದು ಜನಿಸಿದ ನ್ಯಾ.ನಂಜೇಗೌಡ ವೆಂಕಟಾಚಲ ಅವರು ಬಿಎಸ್ಸಿ, ಬಿ ಎಲ್ ಪದವಿ ಪಡೆದಿದ್ದರು. 1955 ರಲ್ಲಿ ಕರ್ನಾಟಕ(ಮೈಸೂರು ರಾಜ್ಯ) ಹೈಕೋರ್ಟ್ ನ ವಕೀಲರಾಗಿದ್ದ ಅವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.
1973 ರಿಂದ 1977 ರವರೆಗೆ ಸರ್ಕಾರದಿಂದ ಕರ್ನಾಟಕ ಹೈಕೋರ್ಟ್ ನ ವಕೀಲರಾಗಿದ್ದ ವೆಂಕಟಾಚಲ ಅವರನ್ನು 1977 ರಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯ್ತು. ನಂತರ 1978 ರ ಸೆಪ್ಟೆಂಬರ್ ನಿಂದ ಅವರನ್ನು ಶಾಶ್ವತ ನ್ಯಾಯಾಧೀಶರನ್ನಾಗಿ ನೇಮಿಲಾಯ್ತು.