ಮಾಜಿ ಮುಖ್ಯಮಂತ್ರಿ ಅಜಾತಶತ್ರು ಧರಂ ಸಿಂಗ್ ವ್ಯಕ್ತಿಚಿತ್ರ
ಬೆಂಗಳೂರು, ಜುಲೈ 27: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಧರಂ ಸಿಂಗ್(1936 ಡಿಸೆಂಬರ್ 25- 2017 ಜುಲೈ 27) ಅವರು ಇಂದು(ಜುಲೈ 27) ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಕರ್ನಾಟಕದ 17 ನೇ ಮುಖ್ಯಮಂತ್ರಿಯಾಗಿದ್ದ ಧರಂ ಸಿಂಗ್ ಅವರಿಗೆ 80 ವರ್ಷ ವಯಸ್ಸಾಗಿತ್ತು.
BREAKING NEWS: ಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ನಿಧನ
ಅವರ ಅಂತ್ಯಕ್ರಿಯೆ ಜುಲೈ 28 ರಂದು ಅವರ ಸ್ವಗ್ರಾಮ ಕಲುಬುರ್ಗಿಯ ಜೇವರ್ಗಿಯಲ್ಲಿ ನಡೆಯಲಿದ್ದು, ಇಂದು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಿರಿಯ ಮುಖಂಡ ಧರಂ ಸಿಂಗ್ ನಿಧನಕ್ಕೆ ದೇಶದಾದ್ಯಂತ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಜಾತ ಶತ್ರು ಎಂದೇ ಕರೆಸಿಕೊಂಡಿದ್ದ ಧರಂ ಸಿಂಗ್ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.
*
ನಾರಾಯಣ
ಸಿಂಗ್
ಧರಂ
ಸಿಂಗ್
ಎಂಬುದು
ಅವರ
ಪೂರ್ಣ
ಹೆಸರು
*
ಕಲುಬುರ್ಗಿ
ಜಿಲ್ಲೆಯ
ಜೇವರ್ಗಿಯ
ನೇಲೋಗಿಯ
ರಜಪೂತ
ಕುಟುಂಬದಲ್ಲಿ
1936
ಡಿಸೆಂಬರ್
25
ರಂದು
ಜನನ
*
ತಂದೆ
ನಾರಾಯಣ
ಸಿಂಗ್,
ತಾಯಿ
ಪದ್ಮಾವತಿ
*
ಪತ್ನಿ
ಪ್ರಭಾವತಿ.
ಅಜಯಸಿಂಗ್,
ವಿಜಯಸಿಂಗ್
ಇಬ್ಬರು
ಪುತ್ರರು
ಮತ್ತು
ಓರ್ವ
ಪುತ್ರಿ
*
ಹೈದರಾಬಾದಿನ
ಉಸ್ಮಾನಿಯಾ
ವಿಶ್ವವಿದ್ಯಾಲಯದಲ್ಲಿ
ಎಂಎ
ಮತ್ತು
ಎಲ್
ಎಲ್
ಬಿ
ಪದವಿ
*
1960
ರಲ್ಲಿ
ಭಾರತೀಯ
ರಾಷ್ಟ್ರೀಯ
ಕಾಂಗ್ರೆಸ್
(ಐಎನ್
ಸಿ)ಗೆ
ಸೇರ್ಪಡೆ.
*
1978-2008
ರವರೆಗೆ
ವಿಧಾನ
ಸಭಾ
ಸದಸ್ಯರಾಗಿದ್ದರು
*
ರಾಜ್ಯ
ಹಿಂದುಳಿದ
ವರ್ಗಗಳ
ಆಯೋಗದ
ಸದಸ್ಯರಾಗಿದ್ದರು
*
ಮಾಜಿ
ಮುಖ್ಯಮಂತ್ರಿ
ಎಸ್.ಎಂ.ಕೃಷ್ಣ
ಅವರ
ಸರ್ಕಾರದಲ್ಲಿ
ಲೋಕೋಪಯೊಗಿ
ಖಾತೆಯನ್ನು
ನಿರ್ವಹಿಸಿದ್ದರು.
*
ಇದಕ್ಕಿಂತ
ಮೊದಲು
ಗೃಹ
ಖಾತೆ,
ಸಮಾಜ
ಕಲ್ಯಾಣ
ಖಾತೆ,
ಅಬಕಾರಿ
ಖಾತೆ,
ಆದಾಯ
ಖಾತೆ
ಮೊದಲಾದ
ಖಾತೆಗಳಲ್ಲಿ
ಸೇವೆ
ಸಲ್ಲಿಸಿದ್ದರು.
*
ಕೆಪಿಸಿಸಿ
ಅಧ್ಯಕ್ಷರಾಗಿಯೂ
ಆಯ್ಕೆಯಾಗಿದ್ದರು
*
1999-2004
ರವರೆಗೆ
ಲೋಕೋಪಯೋಗಿ
ಸಚಿವರಾಗಿದ್ದರು.
*
2004-2006
ರವರೆಗೆ
ಕರ್ನಾಟಕದ
17ನೇ
ಮುಖ್ಯಮಂತ್ರಿಯಾಗಿ
ಸೇವೆ
ಸಲ್ಲಿಸಿದ್ದರು.
*
2006-
2007
ರಲ್ಲಿ
ಕರ್ನಾಟಕ
ವಿಧಾನ
ಸಭೆಯ
ವಿರೋಧ
ಪಕ್ಷದ
ನಾಯಕರಾಗಿದ್ದರು.
*
2009
ರಲ್ಲಿ
ಸಂಸದರಾಗಿಯೂ
ಕಾರ್ಯನಿರ್ವಹಿಸಿದ್ದರು.
*
2008
ರಲ್ಲಿ
ಅಂದಿನ
ಲೋಕಾಯುಕ್ತ
ಎನ್
ಸಂತೋಷ್
ಹೆಗ್ಡೆ
ಅವರು
ಧರಂ
ಸಿಂಗ್
ಅವರ
ವಿರುದ್ಧ
ಅಕ್ರಮ
ಗಣಿಗಾರಿಕೆಗೆ
ಅವಕಾಶ
ಮಾಡಿಕೊಟ್ಟಿದ್ದರು
ಎಂದು
ಆರೋಪಿಸಿದ್ದರು.
ಧರಂ
ಸಿಂಗ್
ಅವರ
ಹೆಸರಿನೊಂದಿಗೆ
ತಳುಕಿಹಾಕಿಕೊಂಡಿದ್ದ
ಪ್ರಮುಖ
ವಿವಾದವೆಂದರೆ
ಇದೊಂದೇ.
*
2017
ಜುಲೈ
27
ರಂದು
ಹೃದಯಾಘಾತದಿಂದ
ನಿಧನ.