ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹೊಸ ಕಟ್ಟಡ; ವಿಶೇಷತೆಗಳು
ಬೆಂಗಳೂರು, ನವೆಂಬರ್ 27 : ಬೆಂಗಳೂರಿನ ಮಡಿವಾಳದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರಯೋಗಾಲಯ ಒಳಗೊಂಡಿದೆ.
ಶುಕ್ರವಾರ ಬಿಟಿಎಂ ಲೇಔಟ್ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಡಿವಾಳದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯ ಲೋಕಾರ್ಪಣೆ ಮಾಡಲಾಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ರಾಮಲಿಂಗಾ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಭಾರತದ ಮೇಲೆ ಚೀನಿ ಗ್ಯಾಂಗ್ನ ಸೈಬರ್ ಯುದ್ಧ
2019ರ ಮೇ ತಿಂಗಳಿನಲ್ಲಿ ನೂತನ ಕಟ್ಟಡ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಸುಮಾರು 25 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಕೇವಲ 18 ತಿಂಗಳಿನಲ್ಲಿ ಪೂರ್ಣಗೊಳಿಸಲಾಗಿದೆ. ಪೊಲೀಸ್ ಸಮುದಾಯ ಭವನದ ನಿರ್ಮಾಣಕ್ಕೂ ಶಂಕು ಸ್ಥಾಪನೆ ಮಾಡಲಾಗಿದೆ.
ಕಳೆದ 1 ವರ್ಷದಲ್ಲಿ ಭಾರತದ ಶೇಕಡಾ 93ರಷ್ಟು ಸಂಸ್ಥೆಗಳ ಮೇಲೆ ಸೈಬರ್ ದಾಳಿ
ನೂತನ ಕಟ್ಟಡದಲ್ಲಿ ಡಿಎನ್ಎ, ನಾರ್ಕೊಟಿಕ್, ಸೈಬರ್, ಕೆಮಿಕಲ್, ಬ್ಯಾಲಸ್ಟಿಕ್ಗೆ ಪ್ರತ್ಯೇಕ ಪ್ರಯೋಗಾಲಯಗಳಿವೆ. ಸುಳ್ಳುಪತ್ತೆ ಪರೀಕ್ಷೆಗಾಗಿ ಇರುವ ಪ್ರಯೋಗಾಲಯವೂ ಇದರ ಆವರಣದಲ್ಲಿಯೇ ಇದೆ. ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಲು ಮೊಬೈಲ್, ಆಡಿಯೋ, ವಿಡಿಯೋ ವಿಭಾಗವನ್ನು ಸ್ಥಾಪಿಸಲಾಗಿದೆ.
ಕೊವಿಡ್ ನೆಪದಲ್ಲಿ ಸೈಬರ್ ದಾಳಿ: 20 ಲಕ್ಷ ಗ್ರಾಹಕರಿಗೆ ಎಸ್ಬಿಐ ಎಚ್ಚರಿಕೆ
Recommended Video
ಎರಡು ಮಹಡಿಗಳ ಕಟ್ಟಡದಲ್ಲಿ ವಿವಿಧ 10 ಪ್ರಯೋಗಾಲಯ ಇದೆ. ಹೊಸ ಕಟ್ಟಡ ಮತ್ತು ನೂತನ ತಂತ್ರಜ್ಞಾನದಿಂದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ವಿಲೇವಾರಿ ಆಗುವ ವಿಶ್ವಾಸವಿದೆ.
Hon’ble CM in the presence of HM inaugurated state of art State Forensic Lab at Madivala. It’s equipped with DNA, Narcotic, Cyber, chemical & Ballastic labs. A major step in the direction of scientific investigations. pic.twitter.com/a9udKvFcut
— DGP KARNATAKA (@DgpKarnataka) November 27, 2020