ಗಾರ್ಮೆಂಟ್ಸ್ ಕಾರ್ಮಿಕರ ಬಲವಂತವಾಗಿ ರಾಜೀನಾಮೆ, ಅಧ್ಯಯನ ವರದಿ
ಕೋವಿಡ್ ಲಾಕ್ಡೌನ್ ನಂತರ, ಗಾರ್ಮೆಂಟ್ಸ್ ಮಾಲೀಕರು ಕಾರ್ಮಿಕರಿಂದ ಬಲವಂತವಾಗಿ ರಾಜೀನಾಮೆ ಪಡೆದಿದ್ದರಿಂದ ಮತ್ತು ಹೇಳದೇ ಕೇಳದೆ ಕಳ್ಳತನದಿಂದ ಕಾರ್ಖಾನೆ ಮುಚ್ಚಿದ ಪರಿಣಾಮವಾಗಿ ಬೆಂಗಳೂರಿನಲ್ಲಿ ಬಹುತೇಕ ಗಾರ್ಮೆಂಟ್ಸ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.
ಗಾರ್ಮೆಂಟ್ ಉದ್ಯಮದಲ್ಲಿ 'ಬಲವಂತದ ರಾಜೀನಾಮೆ' ಎಂಬುದು ಸರ್ವವ್ಯಾಪಿ ಪಿಡುಗಾಗಿದ್ದು, ಕಾರ್ಮಿಕರು ತಮ್ಮ ಕೆಲಸಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಲೇ ಬೇಕಾದಂತಹ ಸಂದರ್ಭಗಳನ್ನು ಆಡಳಿತವರ್ಗದವರು ಯಾವ ರೀತಿ ಸೃಷ್ಟಿಸುತ್ತಾರೆ ಎಂಬುದನ್ನು ಕುರಿತು ಈ ವರದಿಯು ದಾಖಲಿಸುತ್ತದೆ.
ಗಾರ್ಮೆಂಟ್ಸ್ ನೌಕರರ ನಿಜವಾದ ಸಮಸ್ಯೆ ಯಾರೂ ಕೇಳಲಿಲ್ಲ
ಇದ್ದಕ್ಕಿದ್ದಂತೆ ಬಂದೆರಗಿದ ಈ ಆಘಾತದಿಂದ ಕಾರ್ಮಿಕರು ನಿರುದ್ಯೋಗಿಗಳಾದರು. ಅವರ ಸೇವಾವಧಿ ಕಡಿತಗೊಂಡಿತು. ಆರೋಗ್ಯದ ತೊಂದರೆಯಾದಾಗ ಇ.ಎಸ್.ಐ ಸೌಲಭ್ಯವನ್ನು ಪಡೆದುಕೊಳಲಾಗಲ್ಲಿಲ . ಜೊತೆಗೆ ಅವರ ಆದಾಯ ನಷ್ಟವಾಗಿ ಜೀವನ ನಡೆಸಲೇ ಕಷ್ಟವಾಯಿತು. ಸಾಲ ಮರುಪಾವತಿ ಮಾಡಲಾಗದೆ ಅವು ಬೆಟ್ಟದಷ್ಟು ಏರಿದವು, ಮನೆ ಬಾಡಿಗೆ ಕಟ್ಟಲಾಗದೆ, ಊಟಕ್ಕೆ ಹಣವಿಲ್ಲದೆ ಕಾರ್ಮಿಕರು ಅತ್ಯಂತ ಸಂಕಷ್ಟಕ್ಕೀಡಾದರು. ಈ ಬಗ್ಗೆ ಅಧ್ಯಯನ ನಡೆಸಿರುವ ಗಾರ್ಮೆಂಟ್ ಅಂಡ್ ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್ (GATWU) ಮತ್ತು ಪರ್ಯಾಯ ಕಾನೂನು ವೇದಿಕೆ (ALF) ಎರಡು ವಿಸ್ತೃತ ವರದಿಯನ್ನು ಸಾರ್ವಜನಿಕರ ಮುಂದಿಡುತ್ತಿವೆ.
ವರದಿ 1 ಇಲ್ಲಿ ಹಾಗೂ ವರದಿ 2 ಇಲ್ಲಿ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಬಹುದು
https://altlawforum.org/wp-content/uploads/2021/03/Kannada_GATWU_ALF_Forced-resignations.pdf
Recommended Video
https://altlawforum.org/wp-content/uploads/2021/03/Kannada_Executive-Summary.pdf