ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒತ್ತಡ ತಾಳಲಾರದೆ ಐಟಿ ಉದ್ಯೋಗಿ ಆತ್ಮಹತ್ಯೆ: ಸೂಕ್ತ ತನಿಖೆಗೆ ಮನವಿ

|
Google Oneindia Kannada News

ಬೆಂಗಳೂರು, ಜೂನ್ 19: ಕಚೇರಿ ಕಟ್ಟಡದಿಂದ ಹೊರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಐಟಿ ಉದ್ಯೋಗಿ ಭವೇಶ್ ಜೈಸ್ವಾಲ್ ಅವರ ಸಾವಿನ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸುವಂತೆ ಐಟಿ ಉದ್ಯೋಗಿಗಳ ಒಕ್ಕೂಟ (ಎಫ್‌ಐಟಿಇ) ಮನವಿ ಮಾಡಿದೆ.

ಎಫ್‌ಐಟಿಇ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ದೀಪಕ್ ನೇತೃತ್ವದಲ್ಲಿ ಸದಸ್ಯರ ತಂಡವೊಂದು ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರವೀಣ್ ಬಾಬು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಬೆಂಗಳೂರು: ನಿಗೂಢವಾಗಿ ನಾಪತ್ತೆಯಾಗಿದ್ದ 6 ವಿದ್ಯಾರ್ಥಿಗಳು ಪತ್ತೆಬೆಂಗಳೂರು: ನಿಗೂಢವಾಗಿ ನಾಪತ್ತೆಯಾಗಿದ್ದ 6 ವಿದ್ಯಾರ್ಥಿಗಳು ಪತ್ತೆ

ಬಳಿಕ ಒಕ್ಕೂಟದ ಸದಸ್ಯರು ಉಪ ಪೊಲೀಸ್ ಆಯುಕ್ತ ಅಬ್ದುಲ್ ಅಹಾದ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಈ ಪ್ರಕರಣದ ವಿಚಾರದಲ್ಲಿನ ಕಟ್ಟುನಿಟ್ಟಾದ ತನಿಖೆಗಾಗಿ ಕೋರಿದರು.

FITE Karnataka met police officers to request to speed up the inquiry of bhaveshs death

ತಮ್ಮ ಮಗ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳಲು ಕಚೇರಿಯಲ್ಲಿನ ಒತ್ತಡ ಮತ್ತು ಮಾನಸಿಕ ಕಿರುಕುಳವೇ ಕಾರಣ ಎಂದು ಭವೇಶ್ ಜೈಸ್ವಾಲ್ ಅವರ ತಂದೆ ಚಂದ್ರ ಜೈಸ್ವಾಲ್ ದೂರಿನಲ್ಲಿ ತಿಳಿಸಿದ್ದಾರೆ.

ನಮಗೆಲ್ಲ ತಿಳಿದಿರುವಂತೆ ಐಟಿ ಉದ್ಯಮದಲ್ಲಿ ಸರಿಯಾದ ಸಮಯಕ್ಕೆ ಉತ್ಪನ್ನ/ಸೇವೆಯ ಪೂರೈಕೆಗಾಗಿ ಕೆಲಸದ ಒತ್ತಡ ಸಾಮಾನ್ಯ. ಒತ್ತಡವು ಕಿರುಕುಳ ಮತ್ತು ಉದ್ಯೋಗ ಅಭದ್ರತೆಯಾಗಿ ಬದಲಾದಾಗ ಅದು ಉದ್ಯೋಗಿಗಳ ಜೀವವನ್ನು ತೆಗೆದುಕೊಳ್ಳುತ್ತದೆ ಎಂದು ಒಕ್ಕೂಟದ ಸದಸ್ಯರು ಹೇಳಿದ್ದಾರೆ.

ಮಾಧ್ಯಮ ವರದಿಗಳ ಅನ್ವಯ 23 ವರ್ಷದ ಯುವ ಎಂಜಿನಿಯರ್ ಒತ್ತಡದ ಕಾರಣ ಸಾಯುವ ನಿರ್ಧಾರಕ್ಕೆ ಮುಂದಾಗಿರಬಹುದು.

ಗೌರಿ ಹತ್ಯೆ ಆರೋಪಿಗಳಿಗೆ ಎಸ್‌ಐಟಿಯಿಂದ 'ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್'?ಗೌರಿ ಹತ್ಯೆ ಆರೋಪಿಗಳಿಗೆ ಎಸ್‌ಐಟಿಯಿಂದ 'ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್'?

ಬೆಂಗಳೂರು ನಗರ ಪೊಲೀಸರು ಭವೇಶ್ ಅವರ ಕಚೇರಿ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಇಲಾಖೆಗೆ ಕಳುಹಿಸಿ ಈಗಾಗಲೇ ತನಿಖೆ ಆರಂಭಿಸಿವೆ.

ಎಫ್‌ಐಟಿಇಯ ನಮಗೆ ಕಚೇರಿ ಸ್ಥಳದಲ್ಲಿನ ಕಿರುಕುಳ ಮತ್ತು ನೌಕರಿ ಅಭದ್ರತೆಯು ಹೆಚ್ಚುತ್ತಿದ್ದು, ಉದ್ಯಮವು ತನ್ನ ಉದ್ಯೋಗಿಯ ಸಾವಿನ ಕುರಿತು ಪೊಲೀಸರು ಸೂಕ್ತವಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಎಫ್‌ಐಟಿಯ ಸಲ್ಲಿಸಿದ ಬೇಡಿಕೆಗಳು
* ಐಟಿ ಉದ್ಯಮದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಐಟಿ ಉದ್ಯೋಗಿಗಳು, ಉದ್ಯೋಗದಾತರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ಸರ್ಕಾರ ರಚಿಸಬೇಕು.

* ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿಯ ಕುಟುಂಬಕ್ಕೆ ಕಂಪೆನಿ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಹಣಕಾಸಿನ ಪರಿಹಾರ ನೀಡಬೇಕು.

English summary
FITE Karnataka met Bengaluru city police officers to request to speed up the inquiry of IT employee bhavesh jaiswal's suicide case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X