ಸೈಫ್ ಅಭಿನಯದ ತಾಂಡವ್ ವಿರುದ್ಧ ಬೆಂಗಳೂರಲ್ಲಿ ಕೇಸ್
ಬೆಂಗಳೂರು, ಜನವರಿ 25: ಸೈಫ್ ಅಲಿ ಖಾನ್ ಅಭಿನಯದ ತಾಂಡವ್ ವೆಬ್ ಸೀರಿಸ್ ವಿರುದ್ಧ ಬೆಂಗಳೂರಲ್ಲಿ ದೂರು ದಾಖಲಾಗಿದೆ.
ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ 'ತಾಂಡವ್' ವೆಬ್ ಸರಣಿ ಮೇಲೆ ಈಗಾಗಲೇ ದೇಶದ ವಿವಿಧೆಡೆ ದೂರು ದಾಖಲಾಗಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
ಸಾಮಾಜಿಕ ಕಾರ್ಯಕರ್ತ ಕಿರಣ್ ಆರಾಧ್ಯ ಎಂಬುವರು ಬೆಂಗಳೂರಿನ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ತಾಂಡವ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಾಂಡವ್ ಚಿತ್ರ ನಿರ್ಮಾಣ ತಂಡದ ವಿರುದ್ಧ ಎಫ್ಐಆರ್ ಹಾಕಿದ್ದಾರೆ. ಈ ಪ್ರಕರಣ ತನಿಖೆಯ ಮುಂದಿನ ನಡೆ ಇಡುವುದಕ್ಕೂ ಮುನ್ನ ಕಾನೂನು ತಜ್ಞರ ಸಲಹೆಯನ್ನು ತನಿಖಾಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಯಾರ
ಮೇಲೆ
ದೂರು?:
ಅಮೆಜಾನ್
ಪ್ರೈ
ವಿಡಿಯೋದ
ಅಪರ್ಣಾ
ಪುರೋಹಿತ್,
ತಾಂಡವ್
ನಿರ್ದೇಶಕ
ಅಲಿ
ಅಬ್ಬಾಸ್
ಜಾಫರ್,
ನಿರ್ಮಾಪಕ
ಫರಾನ್
ಅಖ್ತರ್,
ನಟ
ಜೀಶಾನ್
ಅಯುಬ್,
ಸೈಫ್
ಅಲಿ
ಖಾನ್
ವಿರುದ್ಧ
ದೂರು
ದಾಖಲಿಸಲಾಗಿದೆ.
ಹಿಂದು
ದೇವರುಗಳ
ವಿರುದ್ಧ
ಅವಹೇಳನಕಾರಿ
ಸಂಭಾಷಣೆಗಳಿವೆ.
ಶಿವನನ್ನು
ಕೆಟ್ಟ
ಪದಗಳಿಂದ
ನಿಂದಿಸಲಾಗಿದೆ.
ಧಾರ್ಮಿಕ
ಭಾವನೆಗಳಿಗೆ
ಧಕ್ಕೆ
ತರುವ
ಸನ್ನಿವೇಶ,
ದೃಶ್ಯ
ತೆಗೆದು
ಹಾಕಬೇಕು
ಹಾಗೂ
ಕ್ಷಮೆಯಾಚಿಸಬೇಕು
ಎಂದು
ದೂರು
ದಾಖಲಿಸಲಾಗಿತ್ತು.
ಕ್ಷಮೆಯಾಚಿಸಿದ
ಚಿತ್ರ
ತಂಡ
ಎರಡು
ದೃಶ್ಯಗಳಿಗೆ
ಕತ್ತರಿ
ಹಾಕಿದೆ.
ಶಿವ
ಪಾತ್ರಧಾರಿಯಾಗಿ
ಜೀಶಾನ್
ಕಾಣಿಸಿಕೊಂಡಿದ್ದು
ಹಾಗೂ
ದಲಿತ
ಮುಖಂಡರಿಗೆ
ಅವಮಾನ
ದೃಶ್ಯ
ಡಿಲೀಟ್
ಮಾಡಲಾಗಿದೆ.
ಯಾವ
ಸೆಕ್ಷನ್
ಅಡಿ
ದೂರು
ಹಿಂದು
ಧಾರ್ಮಿಕ
ಭಾವನೆಗಳಿಗೆ
ಧಕ್ಕೆ
ಎಂಬ
ಆರೋಪದ
ಮೇಲೆ
ದೂರು
ನೀಡಲಾಗಿದ್ದು,
ಕೆಆರ್
ಪುರ
ಪೊಲೀಸರು
ಐಪಿಸಿ
ಸೆಕ್ಷನ್
295
ಎ,
153ಎ
ಹಾಗೂ
298
ಅಡಿಯಲ್ಲಿ
ಪ್ರಕರಣ
ದಾಖಲಿಸಿಕೊಂಡಿದ್ದು,
ಆರೋಪಿತರ
ವಿರುದ್ಧ
ಎಫ್ಐಆರ್
ಹಾಕಲಾಗಿದೆ.
ಉದ್ದೇಶಪೂರ್ವಕವಾಗಿ
ಧಾರ್ಮಿಕ
ಭಾವನೆಗೆ
ಧಕ್ಕೆ
ತಂದ
ಆರೋಪವನ್ನು
ಪರಿಗಣಿಸಲಾಗಿದೆ.