ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ಟೋರಿಯಾ ಆಸ್ಪತ್ರೆಗೆ ಕೊನೆಗೂ ಭೇಟಿ ನೀಡಿದ ಮೇಯರ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 9: ಶುಕ್ರವಾರ (ಸೆ. 8) ರಾತ್ರಿ ಮಿನರ್ವ ಸರ್ಕಲ್ ನಲ್ಲಿ ನಡೆದಿದ್ದ ದುರಂತದಲ್ಲಿ ಮೃತಪಟ್ಟ ಸಂಬಂಧಿಗಳಿಗೆ ಸಾಂತ್ವನ ಹೇಳಲು ಬಿಬಿಎಂಪಿ ಮೇಯರ್ ಆಗಿರುವ ಪದ್ಮಾವತಿ ಅವರು ಶನಿವಾರ ಸಂಜೆ ವೇಳೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರು.

ಸಾಂತ್ವನ ಹೇಳಲು ಬಾರದ ಮೇಯರ್ ವಿರುದ್ಧ ಆಕ್ರೋಶಸಾಂತ್ವನ ಹೇಳಲು ಬಾರದ ಮೇಯರ್ ವಿರುದ್ಧ ಆಕ್ರೋಶ

ಭೇಟಿಯ ವೇಳೆ, ಮೃತರ ಸಂಬಂಧಿಗಳನ್ನು ಸಾಂತ್ವನಗೊಳಿಸಿದ ಅವರು, ಪ್ರತಿಯೊಬ್ಬ ಮೃತರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದರಲ್ಲದೆ, ಮೃತರ ಕುಟುಂಬದಿಂದ ತಲಾ ಒಬ್ಬರಿಗೆ ಬಿಬಿಎಂಪಿಯಲ್ಲಿ ಉದ್ಯೋಗ ನೀಡುವ ಭರವಸೆಯನ್ನೂ ನೀಡಿದರು.

Finally Mayor Padmavathi came to Victoria hospital

ಶುಕ್ರವಾರ (ಸೆ. 8) ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಿನರ್ವ ಸರ್ಕಲ್ ನ ಬಳಿ ಮರವೊಂದು ಕಾರೊಂದರ ಮೇಲೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ರಮೇಶ್, ಭಾರತಿ ಹಾಗೂ ಜಗದೀಶ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಉಳಿದ ಇಬ್ಬರನ್ನು ಸ್ಥಳೀಯರು ಪಾರು ಮಾಡಿದ್ದರು.

ಇನ್ನೆರಡು ದಿನ ಬೆಂಗಳೂರಿಗರಿಗೆ ಮಳೆಕಾಟ ತಪ್ಪಿದ್ದಲ್ಲ!ಇನ್ನೆರಡು ದಿನ ಬೆಂಗಳೂರಿಗರಿಗೆ ಮಳೆಕಾಟ ತಪ್ಪಿದ್ದಲ್ಲ!

ಶನಿವಾರ ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತರ ಶವಪರೀಕ್ಷೆ ನಡೆಸಲಾಯಿತು. ಆಗ, ಮೃತರ ಸಂಬಂಧಿಗಳು ನಗರದ ಮೇಯರ್ ಆಸ್ಪತ್ರೆಗೆ ಬಂದ ನಂತರವೇ ತಾವು ಶವಗಳನ್ನು ಪಡೆಯುವುದಾಗಿ ಹಠ ಹಿಡಿದರು. ಅಲ್ಲದೆ, ತಮ್ಮ ಕುಟುಂಬದ ಸದಸ್ಯರ ಸಾವಿಗೆ ಬಿಬಿಎಂಪಿಯೇ ನೇರ ಹೊಣೆ ಎಂದು ಆರೋಪಿಸಿದ್ದರು.

ಇದು ಮಧ್ಯಾಹ್ನದ ಹೊತ್ತಿಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಇದನ್ನು ತಿಳಿದ ಪದ್ಮಾವತಿ ಅವರು ಸಂಜೆ ವೇಳೆ ವಿಕ್ಟೋರಿಯಾ ಆಸ್ಪತ್ರೆಗೆ ಧಾವಿಸಿ, ಬಂದು ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿದರು.

English summary
Mayor Padmanvathi finally pays her visit to victoria hospital and expressed her condolence to the kins of three dead in Minerva tragedy of Bengaluru on Friday (Sept. 8) night. On friday night when Bengaluru was affected by heavy rain, a tree had collapsed over a car and claimed three lives who were inside the car, near minerva circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X