ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಫರ್ ಷರೀಫ್ ಅಪೂರ್ಣಗೊಳಿಸಿದ ಕೊನೆಯ ಕೆಲಸವೇನು?

|
Google Oneindia Kannada News

ಬೆಂಗಳೂರು, ನವೆಂಬರ್ 26: ದೇಶದ ಬ್ರಾಡ್ ಗೇಜ್ ರೈಲ್ವೆ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್ ಷರೀಫ್ ಗ್ರಾಮೀಣಾಭಿವೃದ್ಧಿಯಂತಹ ವಿಚಾರಗಳಲ್ಲೂ ತೀವ್ರ ಆಸಕ್ತಿ ಹೊಂದಿದ್ದರು ಎಂಬುದು ಎಲ್ಲರಿಗೆ ಗೊತ್ತಿರುವ ವಿಚಾರ.

ಆದರೆ ಜಾಫರ್ ಷರೀಫ್ ಅವರು ದೇಶದ ಮಹತ್ವದ ಆತ್ಮಕತೆಗಳ ಪೈಕಿ ಒಂದಾದ ' ಇಂಡಿಯಾ ವಿನ್ಸ ಫ್ರೀಡಂ' ಉರ್ದು ಹಾಗೂ ಕನ್ನಡಕ್ಕೆ ತರ್ಜುಮೆ ಮಾಡುವಲ್ಲಿ ನಿರತರಾಗಿದ್ದರು. ಜಾಫರ್ ಷರೀಫ್ ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಇದೇ ನವೆಂಬರ್ 28ಕ್ಕೆ ಇದೇ ಅರಮನೆ ಮೈದಾನದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಈ ಕೃತಿಯನ್ನು ಬಿಡುಗಡೆ ಮಾಡಬೇಕಿತ್ತು.

ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ

ಕಳೆದ ಹಲವು ತಿಂಗಳುಗಳಿಂದ ಜಾಫರ್ ಷರೀಫ್ ಅವರು ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ 'ಇಂಡಿಯಾ ವಿನ್ಸ್ ಫ್ರೀಡಂ' ಕೃತಿಯನ್ನು ತರ್ಜುಮೆಗೊಳಿಸುವಲ್ಲಿ ನಿರತರಾಗಿದ್ದರು.

Final work of Jaffer sharief remains incomplete

ಆ ಕೃತಿಯ ಭಾಷಾಂತರ ಪ್ರಕ್ರಿಯೆ ಪೂರ್ಣಗೊಂಡು ಇದೇ ನವೆಂಬರ್ 28ಕ್ಕೆ ಬಿಡುಗಡೆಗೊಳ್ಳಬೇಕಿತ್ತು, ಭಾರತ ಸ್ವಾತಂತ್ರ್ಯ ಹೋರಾಟದ ಹಲವು ಮಜಲುಗಳು ಹಾಗೂ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಲವಾರು ಸ್ವಾರಸ್ಯಕರ ಹಾಗೂ ಐತಿಹಾಸಿಕ ಘಟನೆಗಳನ್ನು ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದರು.

ರಾಜಕೀಯ ಜೀವನದ ಅಂತಿಮ ದಿನಗಳಲ್ಲಿ ತೀವ್ರ ಮನನೊಂದಿದ್ದ ಜಾಫರ್ ಷರೀಫ್ ರಾಜಕೀಯ ಜೀವನದ ಅಂತಿಮ ದಿನಗಳಲ್ಲಿ ತೀವ್ರ ಮನನೊಂದಿದ್ದ ಜಾಫರ್ ಷರೀಫ್

ಆ ಕೃತಿಯನ್ನು ಉರ್ದು ಹಾಗೂ ಕನ್ನಡಕ್ಕೆ ತರ್ಜುಮೆ ಮಾಡಲು ತೀವ್ರ ಆಸಕ್ತಿ ಹೊಂದಿದ್ದರು. ಆದರೆ ಅವರ ಅಂತಿಮ ಪ್ರಯತ್ನ ಕೈಗೂಡಲಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

English summary
Former union minister CK Jaffer Sharief was involved in translation of Moulana abul kalam azad's India wins Freedom autobiography in Kannada and Urdu. The book to be released on nov 28 by former president of India Pranab mukharjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X