ಮಹಿಳೆಯಿಂದ ಒಡವೆ ದೋಚಿ, ಸುಳ್ಳು ಆರೋಪವನ್ನೂ ಹೊರಿಸಿದ ನಕಲಿ ಪೊಲೀಸರು
ಬೆಂಗಳೂರು, ಏ.17: ಎಂಥೆಂಥಾ ಕಳ್ಳರಿರುತ್ತಾರೆ ನೋಡಿ, ಸಿಸಿಬಿ ಪೊಲೀಸರೆಂದು ಬಂದಿದ್ದ ನಕಲಿ ಪೊಲೀಸರು ಮಹಿಳೆಯರಿಂದ ಹಣ, ಒಡವೆ ದೋಚಿದ್ದಲ್ಲದೆ , ವ್ಯಭಿಚಾರದಲ್ಲಿ ಭಾಗಿಯಾಗಿದ್ದೀರಾ ಎಂದು ದೂರು ದಾಖಲಿಸುವುದಾಗಿ ಬೆದರಿಕೆ ಕೂಡ ಹಾಕಿದ್ದರು.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಒಂದೊಮ್ಮೆ ಹಣ ನೀಡದಿದ್ದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸಿದ್ದರು. ಈ ಕುರಿತು ಭುವನೇಶ್ವರಿನಗರದ ನಿವಾಸಿ ಕೋಕಿಲಾ ಅವರು ಕೆಂಪಾಪುರ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ
ಮನೀಶ್, ಚಿದಾನಂದ, ಚಂದನ್, ಪ್ರಭಾಕರ್ ಆರೋಪಿಗಳು.ಕೋಕಿಲಾ ಅವರು ಸಿಲ್ವರ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಪೊಲೀಸ್ ವೇಷದಲ್ಲಿ ಬಂದ ನಾಲ್ವರು ಕೋಕಿಲಾ ಹಾಗೂ ಅವರ ಸ್ನೇಹಿತೆಯರಿಂದ 20 ಸಾವಿರ ಹಾಗೂ ಒಡವೆಗಳನ್ನು ದೋಚಿದ್ದಾರೆ.
ದರೋಡೆ ಮಾಡಲು ಆತ ಬೆಡ್ರೂಂನಲ್ಲೇ ಅಡಗಿ ಕುಳಿತಿದ್ದ
ಕೋಕಿಲಾಗೆ ಥೈರಾಯಿಡ್ ತೊಂದರೆಯಿದ್ದು ಚಿಕಿತ್ಸೆ ಪಡೆಯಲು ಹಣದ ಅವಶ್ಯಕತೆ ಇದೆ, ಸ್ನೇಹಿತರಿಂದ ಸಾಲ ಪಡೆದು ಚಿಕಿತ್ಸೆ ಪಡೆಯುವ ಪರಿಸ್ಥಿತಿ ನನ್ನದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.