ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವರಾತ್ರಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಇಂದ 300 ಹೆಚ್ಚುವರಿ ಬಸ್

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಶಿವರಾತ್ರಿ ಹಬ್ಬಕ್ಕೆ ಕೆ.ಎಸ್.ಆರ್‌.ಟಿ 300 ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದು, ಹಬ್ಬಕ್ಕೆ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ಅನುಕೂಲ ಆಗಲಿದೆ.

ಬೆಂಗಳೂರಿನಿಂದ ಮಾತ್ರವೇ 300 ಹೆಚ್ಚುವರಿ ಬಸ್‌ಗಳು ವಿವಿಧ ಊರುಗಳಿಗೆ ತೆರಳುತ್ತಿದ್ದು, ಈ ಸೇವೆಯು ನಾಳೆಯಿಂದ ಹಬ್ಬದ ಹಿಂದಿನ ದಿನವಾದ ಗುರುವಾರದ ವರೆಗೆ ಇರಲಿದೆ.

ಕಾರ್ಮಿಕರ ಮುಷ್ಕರ; ನಾಳೆ ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರ ಬಂದ್?ಕಾರ್ಮಿಕರ ಮುಷ್ಕರ; ನಾಳೆ ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರ ಬಂದ್?

ನಂತರ ಫೆಬ್ರವರಿ 23 ಕ್ಕೆ ವಿವಿಧ ನಗರಗಳಿಂದ ಬೆಂಗಳೂರಿಗೆ ಆಗಮಿಸಲು ಸಹ ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡುವಂತೆ ಆಯಾ ಡಿಪೋಗಳಿಗೆ ಸೂಚನೆ ನೀಡಲಾಗಿದೆ. ಪ್ರಮುಖ ನಗರಗಳಿಂದ ಬೆಂಗಳೂರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ.

Extra 300 KSRTC Bus For Bengaluru For Shivrathri

ಆದರೆ ಮತ್ತೊಂದೆಡೆ ನಾಳೆ ಕೆ.ಎಸ್‌.ಆರ್.ಟಿ.ಸಿ ಸೇರಿದಂತೆ ಸಾರಿಗೆ ನಿಗಮಗಳ ನೌಕರರು ಬಂದ್‌ ಗೆ ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಒಕ್ಕೂಟ ಕರೆ ಕೊಟ್ಟಿರುವ ಗುರುವಾರದ ಮುಷ್ಕರಕ್ಕೆ ಬಿಎಂಟಿಸಿ ಎನ್‌ಡಬ್ಲೂಕೆಆರ್‌ಟಿಸಿ (ಹುಬ್ಬಳ್ಳಿ) ಹಾಗೂ ಎನ್‌ಇಕೆಆರ್‌ಟಿಸಿ (ಕಲಬುರಗಿ) ಕಾರ್ಮಿಕ ಒಕ್ಕೂಟಗಳೂ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಫೆ 20 ರಂದು ರಾಜ್ಯಾದ್ಯಂತ ಸಾರಿಗೆ ವ್ಯತ್ಯಯ ಆಗಬಹುದೆಂದು ನಿರೀಕ್ಷಿಸಲಾಗಿದೆ.

English summary
For Shivarathri festival KSRTC deployed 300 extra buses from Bengaluru on 20th February and 21st February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X