ಲಾಫಿಂಗ್ ಬುದ್ಧನ ಮೂರ್ತಿಯಿಂದ ಹೊಡೆದು ಪತ್ನಿಯನ್ನು ಕೊಂದ ಮಾಜಿ ಯೋಧ
ಬೆಂಗಳೂರು, ಮಾರ್ಚ್ 18: ಮಾಜಿ ಯೋಧನೊಬ್ಬ ಕುಡಿಯಲು ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಲಾಫಿಂಗ್ ಬುದ್ಧ ಮೂರ್ತಿಯಿಂದ ಹೆಂಡತಿಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಹೆತ್ತ ತಾಯಿಯನ್ನೇ ಹೊಡೆದ 17ರ ಯುವಕನಿಗೆ ಊರೆಲ್ಲ ಛೀ, ಥೂ...
ಮಂಜುಳಾ ಕೊಲೆಯಾದವರು, ಜವರೇಗೌಡ ಕೊಲೆ ಆಡಿದ ವ್ಯಕ್ತಿ, ಆತ ಮಾಜಿ ಯೋಧನಾಗಿದ್ದು ಪ್ರಸ್ತುತ ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಮದ್ಯವ್ಯಸನಿಯಾಗಿದ್ದ ದಿನವೂ ಹೆಂಡತಿಗೆ ಹಣ ನೀಡುವಂತೆ ಪೀಡಿಸುತ್ತಿದ್ದ, ಹಣ ನೀಡಲು ನಿರಾಕರಿಸಿದ ಹೆಂಡತಿಗೆ ಲೋಹದ ಮೂರ್ತಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್
20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಪಡೆದಿದ್ದ, ಬಳಿಕ ಬಿಎಂಟಿಸಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ, ಅವರ ಹಿರಿಯ ಮಗ ಚೇತನ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ.ಇನ್ನೊಬ್ಬ ಮಗ ಚಂದನ್ ಅವರ ಜೊತೆಗೆ ಎಚ್ಎಸ್ಆರ್ ಲೇಔಟ್ಲ್ಲಿ ವಾಸವಾಗಿದ್ದರು.
ಜವರೇಗೌಡ ಅವರ ಮನೆಯಲ್ಲಿಯೇ ಬಿದ್ದು ಏಟು ಮಾಡಿಕೊಂಡಿದ್ದ, ಮಂಜುಳಾ ಅವರನ್ನು ಕೊಲೆ ಮಾಡುವ ದಿನ ಆತ ಕೆಲಸಕ್ಕೆ ರಜೆ ಹಾಕಿದ್ದ. ಮಗ ಚೇತನ್ ಬಂದ ಬಳಿಕ ಕೊಲೆ ಬಹಿರಂಗವಾಗಿತ್ತು. ಮಗ ಬಳಿಕ ಪೊಲೀಸರಿಗೆ ದೂರು ನೀಡಿ ತಂದೆಯನ್ನು ಬಂಧಿಸಲು ಸಹಕರಿಸಿದ್ದ.