ಸ್ಕೂಟರ್, ಬೈಕ್ ಇರುವ ದಕ್ಷಿಣ ಭಾರತದ ಅತಿ ದೊಡ್ಡ ಇವಿ ಎಕ್ಸ್ ಪೋ ಶುರು
ಬೆಂಗಳೂರು, ಸೆಪ್ಟೆಂಬರ್ 21: ದಕ್ಷಿಣ ಭಾರತದ ತಿ ದೊಡ್ಡ ಪರಿಸರಸ್ನೇಹಿ ಎಲೆಕ್ಟ್ರಿಕಲ್ ವಾಹನ ತಂತ್ರಜ್ಞಾನ ಎಕ್ಸ್ ಪೋ 'EV EXPO South 2018'ಕ್ಕೆ ಗುರುವಾರದಂದು ಜಯನಗರದಲ್ಲಿರುವ ಚಂದ್ರಗುಪ್ತ ಮೌರ್ಯ/ಶಾಲಿನಿ ಆಟದ ಮೈದಾನದಲ್ಲಿ ಚಾಲನೆ ದೊರೆಯಿತು.
ಮೂರು ದಿನಗಳ ಈ ಎಕ್ಸ್ ಪೋ ಅನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಉದ್ಘಾಟಿಸಿದರು. ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಕಾರಣಕ್ಕೆ ಬೆಂಗಳೂರಿಗರು ತುರ್ತಾಗಿ ಇ ವಾಹನಗಳ ಬಳಕೆ ಆರಂಭಿಸಬೇಕಿದೆ. ಕೇಂದ್ರಸಚಿವರಾದ ಅನಂತ್ ಕುಮಾರ್ ಅವರು ಅಳವಡಿಸಿದ ಹಾಗೂ ಆರಂಭಿಸಿದ್ದನ್ನು ಮೆಚ್ಚಿಕೊಂಡರು. ಈಗಾಗಲೇ ಹಲವರು ಇ ವಾಹನಗಳ ಬಳಕೆ ಆರಂಭಿಸಿದ್ದಾರೆ ಎಂದರು.
ವೋಲ್ವೊ ಗುಂಪಿನ ಅಧ್ಯಕ್ಷ ಕಮಲ್ ಬಾಲಿ, ಇ ವಾಹನಗಳ ಅಭಿವೃದ್ಧಿಯ ಅಗತ್ಯವನ್ನು ಭಾರತವು ತಿಳಿಸಿಕೊಟ್ಟಿದೆ. ಈ ವಲಯದ ಉತ್ಪಾದಕರು ಹಾಗೂ ಗ್ರಾಹಕರಿಗೆ ಪೂರಕ ವಾತಾವರಣ ನಿರ್ಮಿಸಿರುವ ನರೇಂದ್ರ ಮೋದಿ ಸರಕಾರವನ್ನು ಶ್ಲಾಘಿಸಿದರು.
ಮೂರು ದಿನಗಳ ಈ ಎಕ್ಸ್ ಪೋನಲ್ಲಿ ಹೊಸ ಹಾಗೂ ಅತ್ಯಾಧುನಿಕ ಇ ವಾಹನಗಳಾದ ಇ ರಿಕ್ಷಾ, ಇ ಕಾರ್ಟ್ಸ್, ಇ ಬೈಕ್, ಇ ಸ್ಕೂಟರ್, ಇ ಬೈಸಿಕಲ್ಸ್, ಇ ಲೋಡರ್ಸ್ ಗಳನ್ನು ಪ್ರದರ್ಶಿಸಲಾಗಿದ್ದು, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ನಲವತ್ತು ಕಂಪೆನಿಗಳು ಭಾಗವಹಿಸಿವೆ. ಹೊಸ ಲಿಥಿಯಂ ಬ್ಯಾಟರಿ ಹಾಗೂ ಚಾರ್ಜಿಂಗ್ ಸ್ಟೇಷನ್ ಗಳನ್ನೂ ಎಕ್ಸ್ ಪೋನಲ್ಲಿ ಪ್ರದರ್ಶಿಸಲಾಗಿದೆ.
ಶಾಸಕಿ ಸೌಮ್ಯಾರೆಡ್ಡಿ, ಶಾಸಕ ರವಿಸುಬ್ರಹ್ಮಣ್ಯ, ತಾರಾ, ಉದಯ್ ಗರುಡಾಚಾರ್, ಎ.ದೇವೇಗೌಡ, ಮಾಲತಿ ಬಿ.ಸೋಮಶೇಖರ್, ಗೀತೇಶ್ ಅಗರ್ವಾಲ್, ಅನುಜ್ ಶರ್ಮಾ, ರವಿ ಅರೋರಾ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.