ಬೆಂಗಳೂರು : ಅಂಜನಾಪುರ ವಾರ್ಡಿನಲ್ಲಿ ವನಮಹೋತ್ಸವ
ಬೆಂಗಳೂರು, ಜೂ. 14: ನಗರದ ಆಲಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್ ಸದಸ್ಯರು ಜೂ. 14 ಶನಿವಾರದಂದು ಅಂಜನಾಪುರ ವಾರ್ಡಿನಲ್ಲಿರುವ ಅಲಹಳ್ಳಿ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ 500 ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಿದರು.
ಕೆರೆಯ ಸುತ್ತಮುತ್ತಲಿನ ಆಲಹಳ್ಳಿ ಕನ್ನಡ ಸರ್ಕಾರಿ ಶಾಲೆಯ ಆವರಣ, ಉರ್ದು ಶಾಲೆಯ ಆವರಣ, ಗುರುಕುಲ ಶಾಲೆ, ನಂದಿಗಾರ್ಡನ್ ಅಪಾರ್ಟಮೆಂಟ್, ಆಲಹಳ್ಳಿ, ಗೊಲ್ಲಹಳ್ಳಿ, ಅಂಜನಾಪುರದ ಬೀದಿಗಳಲ್ಲಿ ಸಸಿಗಳನ್ನು ನೆಡಲಾಯಿತು.
ಟ್ರಸ್ಟ್ಗೆ ಮಕ್ಕಳಿಂದ ಹಾಗೂ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಸಿಗಳನ್ನು ನೆಡಲಾಗುವುದು ಎಂದು ಟ್ರಸ್ಟಿನ ಮ್ಯಾನೇಜರ್ ಮೋಹನ ಕುಮಾರ ತಿಳಿಸಿದರು.
100 ಜನ ಭಾಗಿ:
ಮಕ್ಕಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ ಒಟ್ಟು 100 ಜನ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಲ್ಲೆಲ್ಲಿ ಸಸಿಗಳನ್ನು ನೆಡಲಾಯಿತು:
ಕೆರೆಯ ಸುತ್ತಮುತ್ತಲಿನ ಆಲಹಳ್ಳಿ ಕನ್ನಡ ಸರ್ಕಾರಿ ಶಾಲೆಯ ಆವರಣ, ಉರ್ದು ಶಾಲೆಯ ಆವರಣ, ಗುರುಕುಲ ಶಾಲೆ, ನಂದಿಗಾರ್ಡನ್ ಅಪಾರ್ಟಮೆಂಟ್, ಆಲಹಳ್ಳಿ, ಗೊಲ್ಲಹಳ್ಳಿ, ಅಂಜನಾಪುರದ ಬೀದಿಗಳಲ್ಲಿ ಸಸಿಗಳನ್ನು ನೆಡಲಾಯಿತು.
500 ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಣೆ:
ಆಲಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್ ಅಂಜನಾಪುರ ವಾರ್ಡಿನಲ್ಲಿರುವ ಅಲಹಳ್ಳಿ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ 500 ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಿದರು.
ಉತ್ತಮ ಪ್ರತಿಕ್ರಿಯೆ:
ಟ್ರಸ್ಟ್ಗೆ ಮಕ್ಕಳಿಂದ ಹಾಗೂ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಸಿಗಳನ್ನು ನೆಡಲಾಗುವುದು ಎಂದು ಟ್ರಸ್ಟಿನ ಮ್ಯಾನೇಜರ್ ಮೋಹನ ಕುಮಾರ ತಿಳಿಸಿದರು.