ಆನೇಕಲ್ : ಕೋಟಿ ಕೋಟಿ ಬೆಲೆಬಾಳುವ ಭೂಮಿ ಸರ್ಕಾರದ ವಶಕ್ಕೆ
ಬೆಂಗಳೂರು, ಜನವರಿ 11: ಬೆಂಗಳೂರು ಹೊರವಲಯ ಸರ್ಕಾರಿ ಜಮೀನು ಒತ್ತುವರಿಗೆ ಫೇಮಸ್ ಆಗುತ್ತಿದ್ದು, ಅಧಿಕಾರಿಗಳು ಒತ್ತುವರಿ ತೆರವು ಮಾಡಲು ಖಡಕ್ ಪ್ಲಾನ್ ಮಾಡಿದ್ದಾರೆ. ಇದೇ ರೀತಿ ಆನೇಕಲ್ ತಾಲೂಕಿನಲ್ಲೂ ಸರ್ಕಾರಿ ಜಾಗದ ಒತ್ತುವರಿ ತೆರವು ಕಾರ್ಯ ಭರದಿಂದ ಸಾಗಿದೆ.
ಆನೇಕಲ್ನ ಹುಲಿಮಂಗಲ ಗ್ರಾಮದ ಬಳಿ ಒತ್ತುವರಿ ತೆರವು ಕಾರ್ಯಾಚರಣೆ. 18.11 ಗುಂಟೆ ಸರ್ಕಾರಿ ಜಾಗ ವಶಕ್ಕೆ. ತಹಸೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ#Anekal #KannadaNews #Tahsildar pic.twitter.com/DhNkqqEKcX
— oneindiakannada (@OneindiaKannada) January 11, 2021
ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಯ ಹುಲಿಮಂಗಲ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 18.11 ಗುಂಟೆ ಸರ್ಕಾರಿ ವಶಕ್ಕೆ ಪಡೆಯಲಾಗಿದೆ. ಈ ಗ್ರಾಮದ ಸರ್ವೆ ನಂಬರ್ 156/6 ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆನೇಕಲ್ ತಹಸೀಲ್ದಾರ್ ಮಹಾದೇವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಗಳನ್ನ ತೆರವುಗೊಳಿಸಲಾಗಿದೆ.
Recommended Video
ಮನೆ
ಮಾಲೀಕರ
ಜೊತೆ
ಫೈಟಿಂಗ್
ಇನ್ನು
ಒತ್ತುವರಿ
ತೆರವು
ಕಾರ್ಯಾಚರಣೆ
ಸಂದರ್ಭದಲ್ಲಿ
ಮನೆ
ಕಳೆದುಕೊಂಡವರು
ಕಣ್ಣೀರು
ಹಾಕಿದ
ಘಟನೆ
ಕೂಡ
ನಡೆದಿದೆ.
ಆನೇಕಲ್
ತಹಸೀಲ್ದಾರ್
ನೇತೃತ್ವದಲ್ಲಿ
ಅಕ್ರಮವಾಗಿ
ನಿರ್ಮಿಸಿದ್ದ
ಮನೆಗಳನ್ನ
ತೆರವುಗೊಳಿಸಿ
ಸರ್ಕಾರಿ
ಜಮೀನು
ವಶಕ್ಕೆ
ಪಡೆಯಲಾಯಿತು.
ಆದರೆ
ಈ
ವೇಳೆ
ಮನೆ
ಮಾಲೀಕರಿಂದ
ಅಧಿಕಾರಿಗಳ
ಜೊತೆ
ವಾಗ್ವಾದ
ಕೂಡ
ನಡೆದಿದೆ.
ಏಕಾಏಕಿ
ಕಟ್ಟಡ
ತೆರವಿಗೆ
ಆಕ್ರೋಶ
ಕೂಡ
ವ್ಯಕ್ತವಾಗಿದೆ.
ಬಳಿಕ
ಮನೆ
ಸಾಮಗ್ರಿ
ತೆಗೆದುಕೊಳ್ಳಲು
ಅಧಿಕಾರಿಗಳು
ಅವಕಾಶ
ನೀಡಿದ್ದಾರೆ.